ಡೆವಿಲ್ in ಟ್ರಬಲ್! ಕೊಲೆ ಆರೋಪಿಗಿಲ್ಲ ಪ್ರವೇಶ! ದಾಸನಿಗೆ ಬರಬೇಡ ಅಂದಿದ್ಯಾವ ದೇಶ?

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಎ-2 ಆಗಿರೋ ದರ್ಶನ್ , ತಮ್ಮ ದಿ ಡೆವಿಲ್ ಸಿನಿಮಾದ ಶೂಟ್​ಗೆ ವಿದೇಶಕ್ಕೆ ಹೋಗಬೇಕು ಅಂತ ಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ರು. ಕಳೆದ ಮೇ.30ರಂದೇ ಕೋರ್ಟ್ ಅನುಮತಿ ಕೊಟ್ಟಿದೆ. ಆದ್ರೆ ಈಗಲೂ ದರ್ಶನ್ ವಿದೇಶಕ್ಕೆ ಹಾರಿಲ್ಲವೇಕೆ.. ಅದರ ಹಿಂದೆ ಒಂದು ಬಲವಾದ ಕಾರಣ ಇದೆ..?

Share this Video
  • FB
  • Linkdin
  • Whatsapp

ಕೋರ್ಟ್​ ಅನುಮತಿ ಕೊಟ್ರೂ ವಿದೇಶಕ್ಕೆ ಹಾರಿಲ್ಲವೇಕೆ ದಾಸ..? ಯೆಸ್​ ದರ್ಶನ್​ ವಿದೇಶದಲ್ಲಿ ಶೂಟಿಂಗ್ ಮಾಡ್ಲಿಕ್ಕೆ ಅನುಮತಿ ಕೊಡಿ ಅಂತ ಕೋರ್ಟ್ ಮೊರೆ ಹೋಗಿದ್ರು. ದಿ ಡೆವಿಲ್ ಸಿನಿಮಾದ ಸಾಂಗ್​ ಶೂಟ್​ಗೆ ಹೋಗಬೇಕು ಅನುಮತಿ ಕೊಡಿ ಅಂತ ಅರ್ಜಿ ಸಲ್ಲಿಸಿದ್ರು. ದರ್ಶನ್ ಕೊಲೆ ಆರೋಪಿ ಆಗಿರೋದ್ರಿಂದ ಅನುಮತಿ ಕೊಡಬೇಡಿ ಅಂತ ಪ್ರಾಸಿಕ್ಯೂಶನ್ ವಾದ ಮಾಡಿತ್ತು. ಈ ಬಗ್ಗೆ ವಾದ ಪ್ರತಿವಾದ ಆಲಿಸಿದ ಕೋರ್ಟ್ ಕಳೆದ ಮೇ.30ರಂದೇ ತೀರ್ಪು ಕೊಟ್ಟಿದೆ. ಜೂನ್ 1 ರಿಂದ 25ರ ವರೆಗೂ ದರ್ಶನ್​ ವಿದೇಶಕ್ಕೆ ಹೋಗಬಹುದು ಅಂತ ಕೋರ್ಟ್ ಆದೇಶ ನೀಡಿತ್ತು.

Related Video