Asianet Suvarna News Asianet Suvarna News

ನಿಗೂಢವಾಗೇ ಉಳಿದ ಮಹಾಲಕ್ಷ್ಮಿ ಮರ್ಡರ್​​ ಕೇಸ್​​! ಹಂತಕ ಪೊಲೀಸರನ್ನ ಹೇಗೆಲ್ಲಾ ದಿಕ್ಕು ತಪ್ಪಿಸಿದ್ದ ಗೊತ್ತಾ?

ಮಹಾಲಕ್ಷ್ಮಿ ಕೊಲೆ ಹಂತಕನ ಹಿಂದೆ ಬಿದ್ದಿರೋ ಪೊಲೀಸರು ನಾನಾ ಆ್ಯಂಗಲ್​ನಲ್ಲಿ ತನಿಖೆ ನಡೆಸುತ್ತಿದ್ದಾರೆ. ಆದ್ರೆ ಇದೂವರೆಗೂ ಒಂದೇ ಒಂದು ಸುಳಿವು ಸಿಕ್ಕಿಲ್ಲ. ಕುಟುಂಬಸ್ಥರು ಕೆಲವರ ಮೇಲೆ ಅನುಮಾನ ಪಟ್ಟರು. ಅವರನ್ನ ಕರೆಸಿ ವಿಚಾರಣೆ ಮಾಡಿದ್ದೂ ಆಯ್ತು. ಆದ್ರೂ ಯಾವುದೇ ಪ್ರಯೋಜನವಾಗಿಲ್ಲ.

First Published Sep 24, 2024, 2:55 PM IST | Last Updated Sep 24, 2024, 2:55 PM IST

ಬೆಂಗಳೂರು: ಅವಳು ನೇಪಾಳದ ಸುಂದರಿ. ಬೆಂಗಳೂರಿನ ಮಾಲ್​ನಲ್ಲಿ ಕೆಲಸ ಮಾಡಿಕೊಂಡು ಒಂಟಿ ಜೀವನ ನಡೆಸುತ್ತಿದ್ದಳು. ಆದ್ರೆ ಈಕೆ ಬೆಂಗಳೂರಿನಲ್ಲಿ ಮರ್ಡರ್​​ ಆಗಿದ್ದಾಳೆ. ಅದೂ ಕ್ರೂರಾತಿ ಕ್ರೂರವಾಗಿ. ಯಸ್​​. ನಾವು ಮಾತನ್ನಾಡ್ತಿರೋದು ಇದೀಗ ದೇಶವನ್ನೇ ಥಂಡಾ ಹೊಡೆಯುವಂತೆ ಮಾಡಿದ ಮಹಾಲಕ್ಷ್ಮಿ ಮರ್ಡರ್​​ ಕೇಸ್​​. ಮಹಾಲಕ್ಷ್ಮಿಯ ತುಂಡು ತುಂಡು ದೇಹ ಫ್ರಿಡ್ಜ್​ನಲ್ಲಿ ಸಿಕ್ಕಿ 3 ದಿನಗಳಾಗುತ್ತಾ ಬರುತ್ತಿದೆ. ಆದ್ರೆ ಇದುವರೆಗೂ ಕೊಲೆಯ ಹಂತಕ ಮಾತ್ರ ಪತ್ತೆಯಾಗಿಲ್ಲ.

ಅವಳನ್ನ ಕೊಂದಿದ್ಯಾರು? ಯಾಕಾಗಿ ಕೊಂದ? ಹಂತಕನ ಪ್ಲಾನ್​​ ಏನಿತ್ತು? ಇದ್ಯಾವುದೂ ಕೂಡ ಇನ್ನೂ ಸಹ ಪೊಲೀಸರಿಗೆ ಗೊತ್ತಾಗಿಲ್ಲ.. ಹಾಗಾದ್ರೆ ಈ ಕೇಸ್​​ನಲ್ಲಿ ಪೊಲೀಸರ ತನಿಖೆ ಹೇಗೆ ನಡೆಯುತ್ತಿದೆ. ಸದ್ಯ ಸಿಕ್ಕಿರುವ ಸುಳಿವುಗಳೇನು? ಮಹಾಲಕ್ಷ್ಮಿ ಮರ್ಡರ್​​ ಕೇಸ್​​ನ ಕಂಪ್ಲೀಟ್​​​ ಡಿಟೇಲ್ಸ್​​ ಇಲ್ಲಿದೆ ನೋಡಿ.

Video Top Stories