- Home
- News
- State
- Karnataka News Live: ಸ್ವಚ್ಛ ವಾಯ ಸರ್ವೇಕ್ಷಣೆ 2026ರಲ್ಲಿ ಬೆಂಗಳೂರು 32ನೇ ಸ್ಥಾನ; ರಾಜ್ಯದ ಮಾನ ಕಾಪಾಡಿದ ದಾವಣಗೆರೆ, ಧಾರವಾಡ!
Karnataka News Live: ಸ್ವಚ್ಛ ವಾಯ ಸರ್ವೇಕ್ಷಣೆ 2026ರಲ್ಲಿ ಬೆಂಗಳೂರು 32ನೇ ಸ್ಥಾನ; ರಾಜ್ಯದ ಮಾನ ಕಾಪಾಡಿದ ದಾವಣಗೆರೆ, ಧಾರವಾಡ!

ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಗೆ (ಬಿಎಂಐಸಿ) ಭೂಮಿ ಕಳೆದುಕೊಂಡಿರುವ ರೈತರಿಗೆ ನಿವೇಶನಗಳ ಹಂಚಿಕೆ ಸಂಬಂಧ ರಾಜ್ಯ ಸಚಿವ ಸಂಪುಟ ಕೈಗೊಂಡಿರುವ ನಿರ್ಧಾರದ ಬಗ್ಗೆ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನೈಸ್ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ 1,453 ನಿವೇಶನಗಳ ಹಂಚಿಕೆ ಸಂಬಂಧ ನೈಸ್ ಸಂಸ್ಥೆಗೆ ಅನುಮತಿ ನೀಡುವ ನಿರ್ಧಾರ ಕೈಗೊಂಡಿದೆ. ಈ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ತೀರ್ಪುಗಳ ಸಹಮತವಿದೆ ಎಂದು ಸರ್ಕಾರ ಜನತೆಗೆ ತಪ್ಪು ಮಾಹಿತಿ ನೀಡಿದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಡಿ.ಕೆ. ಶಿವಕುಮಾರ್ ಅವರು, ನಾವು ಏನೇ ಮಾಡಿದರು ಕಾನೂನಿನ ಚೌಕಟ್ಟಿನಲ್ಲಿ, ಕಾನೂನು ತಜ್ಞರ ಅಭಿಪ್ರಾಯ ತೆಗೆದುಕೊಂಡೇ ಮಾಡಿದ್ದೇವೆ. ಕಾನೂನು ಬಿಟ್ಟು ಏನನ್ನೂ ಮಾಡಲ್ಲ. ಈ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಬೇಕಾದರೆ ಕೋರ್ಟ್ ಇದೆ, ಕಾನೂನು ಇದೆ, ಹೋರಾಟ ಮಾಡಿಕೊಳ್ಳಲಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಹಿಂದಿನವರು ಏನು ಅಗ್ರಿಮೆಂಟ್ಗೆ ಸೈನ್ ಹಾಕಿದ್ದಾರೆ, ಆ ಹಾದಿಯಲ್ಲೇ ಎಲ್ಲವು ಮುಂದಕ್ಕೆ ನಡೆದುಕೊಂಡು ಬಂದಿದೆ. ಯೋಜನೆಯಲ್ಲಿ ಆಸ್ತಿ ಕಳೆದುಕೊಂಡವರ ರಕ್ಷಣೆ ಮಾಡಬೇಕಲ್ವಾ? ಎಂದು ಪ್ರಶ್ನಿಸಿದರು.
Karnataka News Liveಸ್ವಚ್ಛ ವಾಯ ಸರ್ವೇಕ್ಷಣೆ 2026ರಲ್ಲಿ ಬೆಂಗಳೂರು 32ನೇ ಸ್ಥಾನ; ರಾಜ್ಯದ ಮಾನ ಕಾಪಾಡಿದ ದಾವಣಗೆರೆ, ಧಾರವಾಡ!
Karnataka News LiveGanesh Idol - ರಸ್ತೆಬದಿ ಮಾರಾಟಕ್ಕಿಟ ಗಣಪತಿ ಮೂರ್ತಿ ಮಂಗಮಾಯ! ಬೆಳಗಿನ ಜಾವ ನಾಲ್ಕಕ್ಕೆ ನಡೆದಿದ್ದೇನು?
ಗಣೇಶ ಚತುರ್ಥಿಗಾಗಿ ಮಾರಾಟಕ್ಕೆ ರಸ್ತೆ ಬದಿ ಇರಿಸಿದ್ದ ಗಣಪತಿ ಮೂರ್ತಿ ಬೆಳಗ್ಗೆ ಮಂಗಮಾಯವಾಗಿರುವ ಘಟನೆ ಬೆಂಗಳೂರಿನ ದಾಸರಹಳ್ಳಿಯಲ್ಲಿ ನಡೆದಿದ್ದು, ಸಿಸಿಟಿವಿ ಪರಿಶೀಲಿಸಿದಾಗ ಘಟನೆಯ ದೃಶ್ಯ ಕಂಡು ಶಾಕ್ ಆಗಿದ್ದಾರೆ. ಬೆಳಗಿನ ಜಾವ ನಾಲ್ಕಕ್ಕೆ ನಡೆದಿದ್ದೇನು?
Karnataka News Liveಬೆಂಗಳೂರು ನೈಸ್ ರೋಡ್ ಟೋಲ್ ಕಟ್ಟದೆ, ಪ್ರಶ್ನೆ ಮಾಡಿ ಯುವತಿ; ತರಾಟೆ ತೆಗೆದುಕೊಂಡ ನಂತರ ಏನಾಯ್ತು ನೋಡಿ!
ಬೆಂಗಳೂರಿನ ನೈಸ್ ರೋಡ್ ಟೋಲ್ ವಸೂಲಿ ಸಿಬ್ಬಂದಿಗೆ ಇದು ನ್ಯಾಷನಲ್ ಹೈವೇ ಅಲ್ಲ, ನೈಸ್ ರೋಡ್ ಒಂದು ಪ್ರೈವೇಟ್ ರೋಡ್. 30 ವರ್ಷಗಳ ಅಗ್ರಿಮೆಂಟ್ ಪ್ರಕಾರ 1250 ಕಿಲೋಮೀಟರ್ ರಸ್ತೆ ಕಾಮಗಾರಿ ಪೂರ್ಣಗೊಳಿಸಿದ ಮೇಲಷ್ಟೇ ನೀವು ಟೋಲ್ ಸಂಗ್ರಹಿಸಬೇಕು. ನಾನು ಟೋಲ್ ಕಟ್ಟುವುದಿಲ್ಲ ಎಂದು ಯುವತಿಯೊಬ್ಬರು ತರಾಟೆಗೆ ತೆಗೆದುಕೊಂಡ ವಿಡಿಯೋ ಭಾರೀ ವೈರಲ್ ಆಗಿದೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಪೂರ್ಣ ಮಾಹಿತಿ ಇಲ್ಲಿದೆ.