ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದಾಗ ಬಿಜೆಪಿ ನಾಯಕರು ನಮ್ಮನ್ನು ಟೀಕಿಸಿ ನಕ್ಕಿದ್ದರು. ಆದರೆ ಇಂದು ಅದೇ ಬಿಜೆಪಿ ವಿವಿಧ ರಾಜ್ಯಗಳಲ್ಲಿ ಗ್ಯಾರಂಟಿಗಳ ಮಾತನ್ನಾಡುತ್ತಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
- Home
- News
- State
- Karnataka News Live: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಲ್ಲ - ಬಿಜೆಪಿ ವಿರುದ್ಧ ಸಿಎಂ ಡಿಕೆಶಿ ವಾಗ್ದಾಳಿ
Karnataka News Live: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಲ್ಲ - ಬಿಜೆಪಿ ವಿರುದ್ಧ ಸಿಎಂ ಡಿಕೆಶಿ ವಾಗ್ದಾಳಿ

ಬೆಂಗಳೂರು: ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮಾಹಿತಿ ಪರಿಶೀಲನೆ ವೇಳೆ ಆಧಾರ್ ಮಾಹಿತಿ ಅಪ್ಡೇಟ್ ಕುರಿತು ‘ಬಾಡಿಗೆದಾರರು’ ಗೊಂದಲ, ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ. ಹಿಂದೆ ವಾಸವಿದ್ದ ಬಾಡಿಗೆದಾರರ ಆಧಾರ್ ಮಾಹಿತಿ ತೆರವಿನಿಂದ ತಮಗೆ ಈಗ ಸಿಗುತ್ತಿರುವ ಯೋಜನೆಯ ಅನುಕೂಲ ನಿಲ್ಲಲಿದೆಯೇ ಎಂಬ ಆತಂಕ ಅನೇಕರಲ್ಲಿ ಇರುವುದರಿಂದ ಬೆಸ್ಕಾಂ ಈ ಸ್ಪಷ್ಟನೆ ನೀಡಿದೆ.
ಬೆಸ್ಕಾಂ ಮೀಟರ್ ರೀಡರ್ ಹಾಗೂ ಸಿಬ್ಬಂದಿ ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿದಾಗ ಹಳೇ ಬಾಡಿಗೆದಾರರ ಆಧಾರ್ ವಿವರ ತೆಗೆದು, ಪ್ರಸ್ತುತ ವಾಸವಿರುವ ಬಾಡಿಗೆದಾರರ ಆಧಾರ್ ವಿವರಗಳನ್ನು ಅಪ್ಡೇಟ್ ಮಾಡಿಕೊಳ್ಳುತ್ತಾರೆ. ಹಾಗಾಗಿ, ಯೋಜನೆ ಸ್ಥಗಿತಗೊಳ್ಳಲಿದೆ ಎಂಬ ಆತಂಕ ಬೇಡ ಎಂದು ಬೆಸ್ಕಾಂ ತಿಳಿಸಿದೆ.
Karnataka News Live 6 July 2026ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಲ್ಲ - ಬಿಜೆಪಿ ವಿರುದ್ಧ ಸಿಎಂ ಡಿಕೆಶಿ ವಾಗ್ದಾಳಿ
Karnataka News Live 6 July 2026ವಿವಾಹಿತ ಮಹಿಳೆ ವಿಲ್ ಬರೆಯದೆ ಸತ್ತರೆ ಆಸ್ತಿ ಯಾರಿಗೆ? ಪೋಷಕರಿಗೋ ಅಥವಾ ಗಂಡನ ಕುಟುಂಬಕ್ಕೋ?
ಭಾರತದಲ್ಲಿ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿದ್ದರೂ, ಹಿಂದೂ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ 15ರ ಪ್ರಕಾರ, ವಿಲ್ ಬರೆಯದಿದ್ದರೆ ಅವರ ಸ್ವಯಾರ್ಜಿತ ಆಸ್ತಿ ಯಾರಿಗೆ ದೊರೆಯುತ್ತದೆ? ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ.
Karnataka News Live 6 July 2026ಅಮೀರ್ ಖಾನ್ ಮೂರನೇ ಪತ್ನಿ ಗೌರಿ ಸ್ಪ್ರಾಟ್ ಮಾಜಿ ಪತಿ ಯಾರು? ಈಗ ಏನ್ಮಾಡ್ತಿದ್ದಾರೆ?
Gauri Spratt ex husband: ಅಮೀರ್ ಖಾನ್ ಅವರ ಮೂರನೇ ಪತ್ನಿ ಗೌರಿ ಸ್ಪ್ರಾಟ್ ಅವರ ವೈಯಕ್ತಿಕ ಜೀವನದ ಮೇಲೆ ಈ ಸ್ಟೋರಿ ಬೆಳಕು ಚೆಲ್ಲುತ್ತದೆ. ಅವರ ಮೊದಲ ಪತಿ, ಮಗ ಕ್ವಿನ್ ಮತ್ತು ಅವರ ವೃತ್ತಿಪರ ಹಿನ್ನೆಲೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಜೊತೆಗೆ, ಅಮೀರ್ ಮತ್ತು ಗೌರಿಯವರ ವಿವಾಹದ ವಿವರಗಳನ್ನು ಸಹ ಒಳಗೊಂಡಿದೆ.
Karnataka News Live 6 July 2026ದರ್ಶನ್ಗೇ ಚಾಲೆಂಜ್.. ಬೇಲ್ಗಾಗಿ ಪದೇ ಪದೇ ಅರ್ಜಿ ಹಾಕ್ತಿದ್ರೂ 'ವಜಾ' ಆಗ್ತಿರೋದ್ಯಾಕೆ?
ದಾಸ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿ ಸುಪ್ರಿಂ ಕೋರ್ಟ್ ನ್ಯಾಯಮೂರ್ತಿಗಳ ಪೀಠದ ಮುಂದೆ ವಿಚಾರಣೆಗೆ ಹೋಗುವ ಮೊದಲೇ ರಿಜೆಕ್ಟ್ ಆಗಿದೆ. ಈ ಪ್ರಕರಣದ ಟ್ರಯಲ್ ಅನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕು ಎಂದು ನ್ಯಾಯಾಲಯ ಸ್ಪಷ್ಟ ನಿರ್ದೇಶನ ನೀಡಿದೆ.
Karnataka News Live 6 July 2026ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಅಪರೂಪದ ಎಂಜಿನಿಯರಿಂಗ್ ಮೈಲಿಗಲ್ಲು ಸಾಧಿಸಿದ MEIL
ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ, 'ಮೇಘಾ ಇಂಜಿನಿಯರಿಂಗ್' (MEIL) ಸಂಸ್ಥೆಯು 5 ಮತ್ತು 6ನೇ ಘಟಕಗಳಿಗಾಗಿ ಐತಿಹಾಸಿಕ ಬೃಹತ್ ಕಾಂಕ್ರೀಟ್ ಹಾಕುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಕಾರ್ಯಾಚರಣೆಯು ಭಾರತೀಯ ಅಣುಶಕ್ತಿ ಇತಿಹಾಸದಲ್ಲೇ ಒಂದು ದೊಡ್ಡ ಮೈಲಿಗಲ್ಲಾಗಿದೆ,
Karnataka News Live 6 July 2026ಮಲ್ಲಳ್ಳಿ ಜಲಪಾತದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿದ ಆಂಧ್ರದ ವಿದ್ಯಾರ್ಥಿಗಳು - ಕೊನೆಗೂ ನಡೆದ ರೋಚಕ ರಕ್ಷಣೆ
ಪ್ರವಾಸಿ ತಾಣವಾದ ಮಲ್ಲಳ್ಳಿ ಜಲಪಾತದಲ್ಲಿ ಅಪಾಯವನ್ನು ಮೈಮೇಲೆ ಎಳೆದುಕೊಂಡಿದ್ದ ಆಂಧ್ರಪ್ರದೇಶದ ಇಬ್ಬರು ಕಾಲೇಜು ವಿದ್ಯಾರ್ಥಿಗಳನ್ನು ಅಗ್ನಿಶಾಮಕ ಸಿಬ್ಬಂದಿ ಸಾಹಸಮಯ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
Karnataka News Live 6 July 2026Theft - ಹೈವೇಯಲ್ಲಿ ಹೈಡ್ರಾಮಾ; 13 ಕಿಮೀ ಬೆನ್ನಟ್ಟಿ ಪೊಲೀಸ್ನ ಕಾಲರ್ ಹಿಡಿದು ಧರ್ಮದೇಟು ನೀಡಿದ ಟ್ರಕ್ ಚಾಲಕ!
police officer stealing money: ಬೇಲಿನೇ ಎದ್ದು ಹೊಲ ಮೇಯ್ದಂತೆ, ಪೊಲೀಸ್ನೆ ಕಳ್ಳತನ ಮಾಡಿ ನಡು ರಸ್ತೆಯಲ್ಲಿ ಧರ್ಮದೇಟು ತಿಂದ ಘಟನೆಯೊಂದು ಸಂಭವಿಸಿದೆ. ಈ ಕಥೆಯನ್ನು ಕೇಳಿದರೆ, ನೀವು ಬೆಚ್ಚಿಬೀಳ್ತೀರಾ. ಈ ಸ್ಟೋರಿ ಸಂಪೂರ್ಣ ವಿವರ ಇಲ್ಲಿದೆ.
Karnataka News Live 6 July 2026Kalasa Bridge - ಇಂಜಿನಿಯರ್ ತಪ್ಪಿಗೆ ಜೀವ ಪಣಕ್ಕಿಟ್ಟ ಗ್ರಾಮಸ್ಥರು - ಜಾಗೃತಿ ಮೂಡಿಸುತ್ತಿರುವ ಪಿಎಸ್ಐ
ಹೊಸ ಸೇತುವೆಯ ಕಾಮಗಾರಿ ಪೂರ್ಣಗೊಂಡಿಲ್ಲ ಎಂಬುದು ಗ್ರಾಮಸ್ಥರ ಪ್ರಮುಖ ಆರೋಪ. ಸೇತುವೆ ನಿರ್ಮಾಣವಾದರೂ ಎರಡೂ ಬದಿಯ ಸಂಪರ್ಕ ರಸ್ತೆ ಹಾಗೂ ಸೈಡ್ವಾಲ್ ಕಾಮಗಾರಿ ಇನ್ನೂ ಅಪೂರ್ಣವಾಗಿದೆ.
Karnataka News Live 6 July 2026Vaibhav - ಬೆಳಗಿನ ಉಪಹಾರಕ್ಕೆ ಬ್ರೇಕ್ ಹಾಕಿದ ಸೂರ್ಯವಂಶಿ; ಖಾಲಿ ಹೊಟ್ಟೆಯಲ್ಲೇ ಕ್ರೀಸ್ಗೆ ಇಳಿತಾರಂತೆ! ಕಾರಣ ಕೇಳಿದ್ರೆ ಶಾಖ್ ಆಗ್ತೀರಾ!
15 ವರ್ಷದ ಕ್ರಿಕೆಟಿಗ ವೈಭವ್ ಪಂದ್ಯಕ್ಕೂ ಮುನ್ನ ಏನನ್ನೂ ತಿನ್ನದೆ ಆಡುವ ರಹಸ್ಯವನ್ನು ಈ ಲೇಖನವು ಬಯಲು ಮಾಡುತ್ತದೆ. ಇದರ ಹಿಂದೆ ವೈಜ್ಞಾನಿಕ ಕಾರಣವಿದ್ದು, ಹಿಂದಿನ ರಾತ್ರಿ 'ಕಾರ್ಬೋಹೈಡ್ರೇಟ್ ಲೋಡಿಂಗ್' ಮಾಡುವುದರಿಂದ ಮತ್ತು ದೇಹದ ಕೊಬ್ಬನ್ನು ಶಕ್ತಿಯಾಗಿ ಬಳಸುವುದರಿಂದ ಇದು ಸಾಧ್ಯವಾಗುತ್ತದೆ.
Karnataka News Live 6 July 2026ಡೈರೆಕ್ಟರ್ಗೆ ಹೆದರಿ ಹಲೋ-ಹಾಯ್ ಬಿಟ್ಟರೆ ಮಾತೇ ಇರಲಿಲ್ಲ - ಸಮಂತಾ ಸೀಕ್ರೆಟ್ ಬಿಚ್ಚಿಟ್ಟ ಕಿಚ್ಚ ಸುದೀಪ್
ಟಾಲಿವುಡ್ನಲ್ಲಿ ನಂಬರ್ 1 ನಾಯಕಿ ಯಾರು ಅಂದ್ರೆ ಮೊದಲು ಕೇಳಿಬರುವ ಹೆಸರು ಸಮಂತಾ. ಮೂರು ವರ್ಷಗಳ ಗ್ಯಾಪ್ ನಂತರ 'ಮಾ ಇಂಟಿ ಬಂಗಾರಂ' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ.
Karnataka News Live 6 July 2026Bengaluru Airport ರಸ್ತೆ ಶೀಘ್ರದಲ್ಲೇ ಸಂಪೂರ್ಣ ಸಿಗ್ನಲ್ ಮುಕ್ತ!; ಮುಂದಿನ ವಾರದಿಂದ ಸಾದಹಳ್ಳಿ ಅಂಡರ್ಪಾಸ್ ಕಾಮಗಾರಿ
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುವ ಹೆಬ್ಬಾಳ-ಏರ್ಪೋರ್ಟ್ ಕಾರಿಡಾರ್ ಸಂಪೂರ್ಣ ಸಿಗ್ನಲ್ ಮುಕ್ತಗೊಳಿಸುವ ನಿಟ್ಟಿನಲ್ಲಿ, ದಶಕದಿಂದ ಬಾಕಿಯಿದ್ದ ಸಾದಹಳ್ಳಿ ಜಂಕ್ಷನ್ ಅಂಡರ್ಪಾಸ್ ಯೋಜನೆಗೆ ಚಾಲನೆ ಸಿಕ್ಕಿದೆ. NHAI 15 ತಿಂಗಳ ಅವಧಿಯ ಈ ಕಾಮಗಾರಿಯನ್ನು ಶೀಘ್ರದಲ್ಲೇ ಆರಂಭಿಸಲಿದೆ.
Karnataka News Live 6 July 2026LPG - ಅಡುಗೆ ಅನಿಲ ಕೊರತೆಗೆ ಬ್ರೇಕ್; ಕೇಂದ್ರದ ಮಾಸ್ಟರ್ ಪ್ಲಾನ್! ಆಗಿದ್ದೇನು ಗೊತ್ತಾ?
Cooking gas shortage solution: ಬಿಕ್ಕಟ್ಟಿನ ಸಮಯದಲ್ಲಿ ದೇಶದ ಜನರಿಗೆ ಎಲ್ಪಿಜಿ ಪೂರೈಕೆಯಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಪ್ರಮುಖ ಕ್ರಮಗಳನ್ನು ತೆಗೆದುಕೊಂಡಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
Karnataka News Live 6 July 2026ಬೆಂಗಳೂರಿನಲ್ಲಿ ವಾಹನ ಸವಾರರಿಗೆ Towing ಬಿಸಿ!; ದಂಡಕ್ಕಿಂತ ಟೋಯಿಂಗ್ ಚಾರ್ಜ್ ಜಾಸ್ತಿ, ಸಾರ್ವಜನಿಕರ ತೀವ್ರ ಆಕ್ರೋಶ!
Karnataka News Live 6 July 2026ರೈಲ್ವೆ ಅಂಡರ್ ಪಾಸ್ಗಾಗಿ ಹಕ್ಕೊತ್ತಾಯ - ರೈತರು ಹಾಗೂ ಗ್ರಾಮಸ್ಥರಿಂದ ರಸ್ತೆ ತಡೆದು ಪ್ರತಿಭಟನೆ!
ಚಾಮರಾಜನಗರ ಜಿಲ್ಲೆಯ ಪಣ್ಯದಹುಂಡಿ ಬಳಿ ರೈಲು ಮಾರ್ಗದ ಮೇಲೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ವಿವಾದಕ್ಕೆ ಗುರಿಯಾಗಿದೆ. ಕಾಮಗಾರಿ ಆರಂಭವಾಗುತ್ತಿದ್ದಂತೆ ಸುತ್ತಮುತ್ತಲ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.
Karnataka News Live 6 July 2026ಬೆಂಗಳೂರಿನಲ್ಲಿ ಕೆಲಸ ಮಾಡಿದ್ರೆ ಹೆಚ್ಚಿನ ಹಣ ಸಿಗುತ್ತಾ? ಊರಿನಲ್ಲಿದ್ರೆ ಜಾಸ್ತಿ ಹಣ ಉಳಿಸಬಹುದಾ?
ಉದ್ಯೋಗ, ಉತ್ತಮ ಸಂಬಳಕ್ಕಾಗಿ ಬೆಂಗಳೂರಿಗೆ ವಲಸೆ ಬಂದ ಕಾರ್ಪೊರೇಟ್ ಕೆಲಸ ಮಾಡುತ್ತಿರುವ ದಂಪತಿಯೊಬ್ಬರು, ಸಣ್ಣ ನಗರಗಳಲ್ಲಿ ಸಿಗುವ ನೆಮ್ಮದಿಯ ಜೀವನದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
Karnataka News Live 6 July 2026ಕೋರ್ಟ್ ಮೆಟ್ಟಿಲೇರಿದ್ದ 341 OBC ಶಿಕ್ಷಕಿಯರಿಗೆ ಕೊನೆಗೂ ಸಿಕ್ತು ಮುಕ್ತಿ!; ಷರತ್ತುಬದ್ಧ ಸೇರ್ಪಡೆಗೆ ಶಾಲಾ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್!
ಪ್ರಮಾಣಪತ್ರಗಳ ತಾಂತ್ರಿಕ ವಿವಾದದಿಂದ ನೇಮಕಾತಿ ವಂಚಿತರಾಗಿದ್ದ 341 ವಿವಾಹಿತ ಮಹಿಳಾ ಶಿಕ್ಷಕಿಯರಿಗೆ ಹೈಕೋರ್ಟ್ ಮಧ್ಯಂತರ ಆದೇಶದಿಂದ ರಿಲೀಫ್ ಸಿಕ್ಕಿದೆ. ಶಾಲಾ ಶಿಕ್ಷಣ ಇಲಾಖೆಯು ಷರತ್ತುಬದ್ಧ ಅನುಮತಿಯೊಂದಿಗೆ ಇವರಿಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಸೂಚಿಸಿದೆ.
Karnataka News Live 6 July 2026ಪೋಸ್ಟ್ ಆಫೀಸ್ FD vs RD ಯೋಜನೆ; 50,000 ರೂ. ಹೂಡಿಕೆಗೆ ಮಾಡಿದರೆ 10 ವರ್ಷಗಳಲ್ಲಿ ಎಲ್ಲಿ ಸಿಗಲಿದೆ ಹೆಚ್ಚಿನ ಲಾಭ?
Post office investment schemes: ನಿಮ್ಮ ಬಳಿ ₹50,000 ಇದ್ದರೆ, ಅದನ್ನು ಪೋಸ್ಟ್ ಆಫೀಸ್ನ FD ಅಥವಾ RD ಹೂಡಿಕೆ ಮಾಡುವುದರಲ್ಲಿ ಯಾವುದು ಉತ್ತಮ ಎಂಬುದನ್ನು ಈ ಲೇಖನ ವಿಶ್ಲೇಷಿಸುತ್ತದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
Karnataka News Live 6 July 2026ಕನ್ನಡದ 'ಮಹಾಕವಿ'ಗೆ ಜಾಗತಿಕ ಮನ್ನಣೆ - ಹಾಲಿವುಡ್ ಚಿತ್ರೋತ್ಸವದಲ್ಲಿ ಬರಗೂರರ ಸಿನಿಮಾ
Mahakavi Movie: ಹಿರಿಯ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದಲ್ಲಿ, ಬಹುಭಾಷಾ ನಟ ಕಿಶೋರ್ ಅಭಿನಯಿಸಿರುವ 'ಮಹಾಕವಿ' ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.
Karnataka News Live 6 July 2026Pinaka Movie - ಯಾವ ಸಿನಿಮಾದಲ್ಲೂ ಇರದ ಕ್ಲೈಮ್ಯಾಕ್ಸ್ 'ಪಿನಾಕ'ದಲ್ಲಿ ಇರುತ್ತೆ - Golden Star Ganesh
Golden Star Ganesh Pinaka Kannada Movie: ಪೀಪಲ್ ಮೀಡಿಯಾ ಫ್ಯಾಕ್ಟರಿ ಲಾಂಛನದಲ್ಲಿ ವಿಶ್ವಪ್ರಸಾದ್ ಅವರು ಅದ್ದೂರಿಯಾಗಿ ನಿರ್ಮಿಸುತ್ತಿರುವ, ನೃತ್ಯ ನಿರ್ದೇಶಕ ಧನಂಜಯ್ ಚೊಚ್ಚಲ ನಿರ್ದೇಶನದ, ಗೋಲ್ಟನ್ ಸ್ಟಾರ್ ಗಣೇಶ್ ಅಭಿನಯದ ‘ಪಿನಾಕ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
Karnataka News Live 6 July 2026'ಹೆಣ್ಣೇ ಸಮಾಜದ ಶಕ್ತಿ' - ಅಕ್ಕಪಡೆ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಸಂದೇಶ
Women Empowerment Karnataka: ಕಲ್ಯಾಣ ಕರ್ನಾಟಕ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಬಸವಕಲ್ಯಾಣದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಮಹಿಳಾ ಸುರಕ್ಷತೆ..