ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?

ಪಂಚತಂತ್ರ ಪಾಂಚಜನ್ಯ.. ಡಿಕೆ ಪವರ್ ಪಂಚ್..! 5 ದಿನಗಳಲ್ಲಿ 10 ಹೆಜ್ಜೆ.. ಇದು ಡಿಕೆ ಸರ್ಕಾರ್..! ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ..! ಹೇಗಿದೆ ಬಂಡೆ ಆಡಳಿತ..? 5 ದಿನಗಳ ರಹಸ್ಯ.! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಡಿಕೆ ಸರ್ಕಾರ.

Share this Video
  • FB
  • Linkdin
  • Whatsapp

ಪಂಚತಂತ್ರ ಪಾಂಚಜನ್ಯ.. ಡಿಕೆ ಪವರ್ ಪಂಚ್..! 5 ದಿನಗಳಲ್ಲಿ 10 ಹೆಜ್ಜೆ.. ಇದು ಡಿಕೆ ಸರ್ಕಾರ್..! ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ..! ಹೇಗಿದೆ ಬಂಡೆ ಆಡಳಿತ..? 5 ದಿನಗಳ ರಹಸ್ಯ.! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಡಿಕೆ ಸರ್ಕಾರ.. ಹೊಸ ಅವತಾರ. ಮೂರು ವರ್ಷ ಮೌನ ಹೋರಾಟದ ಮೂಲಕ ಸಿಎಂ ಸಿಂಹಾಸನಕ್ಕೆ ಅಧಿಪತಿಯಾಗಿದ್ದಾರೆ ಡಿ.ಕೆ.ಶಿವಕುಮಾರ್. ಅಧಿಕಾರ ವಹಿಸಿಕೊಂಡ ಬೆರಳಂಕಿ ದಿನಗಳಲ್ಲಿಯೇ ತಮ್ಮ ಆಡಳಿತ ಹೇಗಿರುತ್ತೆ ಅನ್ನೋದ್ರ ಝಲಕ್ ತೋರಿಸಿದ್ದಾರೆ ಕನಕಾಧಿಪತಿ. ಇದಕ್ಕೆ ಅವರು ತೆಗೆದುಕೊಂಡಿರೋ ಆ 10 ದಿಟ್ಟ ನಿರ್ಧಾರಗಳೇ ಸಾಕ್ಷಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಡಳಿತದ ಜೊತೆಗೆ, ಸಿಎಂ ಗದ್ದುಗೆ ಏರಿದ ಬಳಿಕ ಡಿಕೆ ಪಾಲಿಟಿಕ್ಸ್ ಸ್ಟೈಲ್​ನಲ್ಲಿಯೂ ಒಂದಿಷ್ಟು ಬದಲಾವಣೆಗಳಾಗಿವೆ. ಹಾಗಿದ್ರೆ ಪಂಚ ದಿನದಲ್ಲಿ ಡಿಕೆ ತೆಗೆದುಕೊಂಡಿರೋ ಆ ದಶ ದಿಟ್ಟ ನಿರ್ಧಾರಗಳು ಯಾವು..? ಮುಖ್ಯಮಂತ್ರಿ ಸಿಂಹಾಸನವನ್ನ ಅಲಂಕರಿಸಿದ ಬಳಿಕ ಹೇಗೆ ಬದಲಾಗಿದೆ ಕನಕಪುರ ಬಂಡೆ ಪಾಲಿಟಿಕ್ಸ್ ಸ್ಟೈಲ್.? ಇಷ್ಟೆಲ್ಲದರ ಮಧ್ಯೆ ಡಿ.ಕೆ.ಶಿವಕುಮಾರ್ ತವರು ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರೆ. ಅಲ್ಲಿ ಅವರಿಗೆ ಅದ್ದೂರಿ ಸ್ವಾಗತ ಕೋರಲಾಗಿದೆ. ಹಾಗಿದ್ರೆ ಕನಕಪುರದಲ್ಲಿ ಕನಕಾಧಿಪತಿಯ ಎಂಟ್ರಿ ಹೇಗಿತ್ತು..? ಅಲ್ಲಿ ತಮ್ಮ ಜನರಿಗೆ ಡಿಕೆ ಕೊಟ್ಟ ಭರವಸೆಯೇನು..? ಹೇಳಿದ ಕಿವಿಮಾತೇನು.? ಮುಖ್ಯಮಂತ್ರಿಯಾಗಿರೋ ಮನೆ ಮಗನಿಗೆ ಕನಕಪುರದಲ್ಲಿ ಅದ್ದೂರಿ ಸ್ವಾಗತ ಕೋರಲಾಗಿದೆ.

ರಾಜಕೀಯವಾಗಿ ತಮ್ಮನ್ನ ಬೆಳೆಸಿದ ಅಲ್ಲಿನ ಮತದಾರರಿಗೆ ಧನ್ಯವಾದ ಹೇಳಿದ್ದಾರೆ ಡಿ.ಕೆ.ಶಿವಕುಮಾರ್. ಹಾಗಿದ್ರೆ ಸಿಎಂ ಆದ ಬಳಿಕ ಸ್ವಕ್ಷೇತ್ರಕ್ಕೆ ಹೇಗಿತ್ತು ಮೊಟ್ಟ ಮೊದಲ ಭೇಟಿ..? ಈ ವೇಳೆ ತಮ್ಮ ಕ್ಷೇತ್ರದ ಜನರಿಗೆ ಡಿಕೆ ಕೊಟ್ಟ ಭರವಸೆಯೇನು..? ಜೊತೆಗೆ ಮತದಾರರಿಗೆ ಹೇಳಿದ ಆ ಕಿವಿಮಾತೇನು.? ಈ ಸಂಭ್ರಮದ ಮಧ್ಯೆಯೇ ಅದೊಂದು ರಾಜಕೀಯ ದಾಳವನ್ನ ಡಿ.ಕೆ.ಶಿವಕುಮಾರ್ ಉರುಳಿಸಿದ್ದಾರೆ. ಸ್ವಕ್ಷೇತ್ರದಲ್ಲಿ ಸಂಭ್ರಮದ ಮೆರವಣಿಗೆ ನಡೆಸ್ತಾ ಇರುವಾಗಲೇ ಅದೊಂದು ರಾಜಕೀಯ ದಾಳವನ್ನ ಸಹ ಡಿ.ಕೆ.ಶಿವಕುಮಾರ್ ಉರುಳಿಸಿದ್ದಾರೆ. 2028ರ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ಉರುಳಿಸಿರೋ ಮಹಾದಾಳವದು. ಹಾಗಿದ್ರೆ ಸಂಭ್ರಮದ ಮಧ್ಯೆ ಏನಿದು ಡಿಕೆ ರಣಕಹಳೆ.? 

Related Video