ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!

ಬೆಳಗಾವಿಯ ಕೃಷ್ಣ ಮತ್ತು ಸತ್ಯವ್ವ ಪ್ರೀತಿಸುತ್ತಿದ್ದರು, ಆದರೆ ಸತ್ಯವ್ವಳ ಕುಟುಂಬ ಆಕೆಗೆ ಬೇರೆ ಮದುವೆ ಮಾಡಿತ್ತು. ಹಳೇ ಪ್ರೇಮಿ ಕೃಷ್ಣನ ಜೊತೆ ಓಡಿಹೋದ ಸತ್ಯವ್ವಳನ್ನು ಆಕೆಯ ಕುಟುಂಬಸ್ಥರೇ ಕೊಲೆ ಮಾಡುತ್ತಾರೆ. 

Share this Video
  • FB
  • Linkdin
  • Whatsapp

ಬೆಳಗಾವಿ (ಜೂ.8): ಅವರಿಬ್ಬರದ್ದು ಅಪರೂಪದ ಹಳೇ ಪ್ರೇಮ ಕಥೆ. ಸಣ್ಣ ವಯಸ್ಸಿನಲ್ಲೇ ಜೊತೆಯಾಗಿ ಬಾಳುವ ಕನಸು ಕಂಡಿದ್ದ ಬೆಳಗಾವಿಯ ಯಮಕನಮರಡಿಯ ಕೃಷ್ಣ ಮತ್ತು ಸತ್ಯವ್ವ ದಂಪತಿಯ ಜೀವನದಲ್ಲಿ ವಿಧಿಯ ಆಟ ಭೀಕರ ದುರಂತಕ್ಕೆ ಕಾರಣವಾಗಿದೆ. ಹೆತ್ತವರು ಸತ್ಯವ್ವಳಿಗೆ ಬೇರೆ ಮದುವೆ ಮಾಡಿದ್ದರೂ, ಆಕೆಗೆ ಆ ಜೀವನ ಇಷ್ಟವಿರಲಿಲ್ಲ. ಹೀಗಾಗಿ ಒಂದು ದಿನ ತನ್ನ ಹಳೇ ಪ್ರೇಮಿ ಕೃಷ್ಣನ ಜೊತೆ ಆಕೆ ಓಡಿಹೋಗಿದ್ದಳು. ಆದರೆ, ಆ ಬಳಿಕ ಅವರ ಬಾಳಿನಲ್ಲಿ ಬಿರುಗಾಳಿ ಎದ್ದಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!

ಕೃಷ್ಣನ ಜೊತೆ ಓಡಿಹೋಗಿದ್ದ ಸತ್ಯವ್ವ ಹಠಾತ್ ನಾಪತ್ತೆಯಾಗಿದ್ದಳು. ಆವತ್ತು ಕೃಷ್ಣ ಸುಮ್ಮನಾಗಿದ್ದರೆ ಆಕೆಯ ಸಾವಿನ ಸತ್ಯ ಎಂದಿಗೂ ಹೊರಬರುತ್ತಿರಲಿಲ್ಲ. ಆದರೆ ಸತ್ಯವ್ವಳ ಕುಟುಂಬಸ್ಥರ ಮೇಲೆ ಅನುಮಾನಗೊಂಡ ಕೃಷ್ಣ, ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದ. ತನಿಖೆ ನಡೆಸಿದ ಪೊಲೀಸರಿಗೆ ಸತ್ಯವ್ವಳನ್ನು ಆಕೆಯ ಸ್ವಂತ ಕುಟುಂಬಸ್ಥರೇ ಕೊಲೆ ಮಾಡಿರುವ ಭೀಕರ ಸತ್ಯ ಬಯಲಾಗಿತ್ತು.

ತನ್ನ ಪ್ರೇಯಸಿಯ ಪ್ರಾಣ ತೆಗೆದ ಹಂತಕ ಕುಟುಂಬವನ್ನು ಪೊಲೀಸರಿಗೆ ಹಿಡಿದುಕೊಟ್ಟ ನಂತರ ಕೃಷ್ಣ ನಿಟ್ಟುಸಿರು ಬಿಟ್ಟಿದ್ದ ನಿಜ. ಆದರೆ, ಆತನ ಮನಸ್ಸಿನಲ್ಲಿದ್ದ ಸತ್ಯವ್ವಳ ನೆನಪುಗಳು ಮಾತ್ರ ಮಾಸಿರಲಿಲ್ಲ. ಆಕೆಯನ್ನು ಮರೆಯಲು ಎಷ್ಟೇ ಪ್ರಯತ್ನ ಪಟ್ಟರೂ ಕೃಷ್ಣನಿಗೆ ಅದು ಸಾಧ್ಯವಾಗದೆ, ದಿನನಿತ್ಯ ಆಕೆಯ ನೆನಪಿನಲ್ಲೇ ಕೊರಗುತ್ತಾ ಕಾಲ ಕಳೆಯುತ್ತಿದ್ದ.

Related Video