10:56 PM (IST) Jun 20

India News Live 20th June:Yash Toxic - ʻಟಾಕ್ಸಿಕ್‌ʼ ತಂಡದಿಂದ ನಾಳೆ 'ಬಿಗ್‌ ಅಪ್‌ಡೇಟ್‌'..? ಯಶ್ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ?

ಕಳೆದ ಕೆಲವು ತಿಂಗಳುಗಳಿಂದ ಸದ್ದಿಲ್ಲದೆ ಶೂಟಿಂಗ್ ಹಂತದಲ್ಲಿರುವ 'ಟಾಕ್ಸಿಕ್' ತಂಡ ನಾಳೆ (ಗುರುವಾರ) ಒಂದು ಮಹತ್ವದ ಘೋಷಣೆ ಮಾಡಲು ಸಜ್ಜಾಗಿದೆ. ಚಿತ್ರದ ಅಧಿಕೃತ ಟ್ವಿಟ್ಟರ್ (X) ಖಾತೆಯಲ್ಲಿ "ನಾಳೆ ಏನಾದರೂ ಪ್ಲ್ಯಾನ್ಸ್ ಇದೆಯೇ?" (Any plans for tomorrow?) ಎಂದು ಕೇಳುವ ಮೂಲಕ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ.

Read Full Story
10:24 PM (IST) Jun 20

India News Live 20th June:ಕೊನೆಗೂ ಮುಖಾಮುಖಿಯಾಗ್ತಿವೆ ಅಮೆರಿಕ-ಇರಾನ್! ಸ್ವಿಟ್ಜರ್ಲೆಂಡ್‌ಗೆ ಜೆಡಿ ವ್ಯಾನ್ಸ್, ನಾಳೆಯೇ ಮಹತ್ವದ ಮಾತುಕತೆ

ಹರ್ಮೋಜ್ ಜಲಸಂಧಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಇರಾನ್ ಸ್ವಿಟ್ಜರ್ಲೆಂಡ್‌ನಲ್ಲಿ ಮಹತ್ವದ ಮಾತುಕತೆ ನಡೆಸಲಿವೆ. ಈ ಸಭೆಯಲ್ಲಿ ಪಾಕಿಸ್ತಾನ ಮತ್ತು ಕತಾರ್ ಮಧ್ಯಸ್ಥಿಕೆ ವಹಿಸಲಿದ್ದು, ಲೆಬನಾನ್ ಮೇಲಿನ ದಾಳಿಯ ಉದ್ವಿಗ್ನ ಪರಿಸ್ಥಿತಿಯಲ್ಲಿ ಈ ಮಾತುಕತೆ ನಿರ್ಣಾಯಕವಾಗಿದೆ.
Read Full Story
09:46 PM (IST) Jun 20

India News Live 20th June:Ajaneesh Loknath - ಮಾಲಿವುಡ್‌ನಲ್ಲಿ ಅಜನೀಶ್‌-ಅಚ್ಯುತ್ ಹವಾ - ಎಲ್ಲರ ಕಣ್ಣು 'ಅನಂತನ್ ಕಾಡು' ಮೇಲೆ!

Ananthan Kaadu: ಮುರಳಿ ಗೋಪಿ ಕಥೆ ಬರೆದಿರುವ, ಜಿ.ಎನ್. ಕೃಷ್ಣಕುಮಾರ್ ನಿರ್ದೇಶನದ 'ಅನಂತನ್ ಕಾಡು' ಸಿನಿಮಾ ಜೂನ್ 25ಕ್ಕೆ ರಿಲೀಸ್ ಆಗಲಿದೆ. 'ಕಾಂತಾರ' ಖ್ಯಾತಿಯ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಮೊದಲ ಮಲಯಾಳಂ ಚಿತ್ರ.

Read Full Story
08:51 PM (IST) Jun 20

India News Live 20th June:ಹರ್ಮುಜ್ ಜಲಸಂಧಿ ಮತ್ತೆ ಬಂದ್! ಇಸ್ರೇಲ್ ಮೇಲೆ ಕೆಂಡಾಮಂಡಲವಾದ ಇರಾನ್‌ನಿಂದ ದಿಢೀರ್ ಕ್ರಮ

ಲೆಬನಾನ್‌ನಲ್ಲಿ ಇಸ್ರೇಲ್ ನಡೆಸಿದ ದಾಳಿಗೆ ಪ್ರತಿಯಾಗಿ, ಇರಾನ್ ಹರ್ಮುಜ್ ಜಲಸಂಧಿಯನ್ನು ಮತ್ತೆ ಬಂದ್ ಮಾಡಿದೆ. ಇಸ್ರೇಲ್‌ನ ಈ ಕ್ರಮವು ಕದನ ವಿರಾಮ ಒಪ್ಪಂದದ ಉಲ್ಲಂಘನೆ ಎಂದು ಇರಾನ್ ಆರೋಪಿಸಿದ್ದು, ಈ ಬೆಳವಣಿಗೆಯು ವಲಯದಲ್ಲಿ ಮತ್ತೆ ಸಂಘರ್ಷದ ವಾತಾವರಣವನ್ನು ಸೃಷ್ಟಿಸಿದೆ.
Read Full Story
06:48 PM (IST) Jun 20

India News Live 20th June:Cocktail 2 Controversy - ಜಾನ್ವಿ ಕಪೂರ್ ಬಳಿಕ ಕೃತಿ ಸನೋನ್‌ರ ಈ ದೃಶ್ಯಗಳೇ ವಿವಾದಕ್ಕೆ ಕಾರಣವಾಯ್ತಾ?

Kriti Sanon: ಶಾಹಿದ್ ಕಪೂರ್, ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ 'ಕಾಕ್ಟೇಲ್ 2' ಸಿನಿಮಾ ಥಿಯೇಟರ್‌ಗಳಲ್ಲಿ ರಿಲೀಸ್ ಆಗಿದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ.

Read Full Story
06:17 PM (IST) Jun 20

India News Live 20th June:Rashmika Mandanna - 3815 ಕೋಟಿ ಬಾಕ್ಸಾಫೀಸ್ ಸಾಮ್ರಾಜ್ಯ ಕಟ್ಟಿದ ನ್ಯಾಷನಲ್ ಕ್ರಶ್ - ಏನಿದು ಲೆಕ್ಕಾಚಾರ?

Rashmika Mandanna: 'ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ ತಮ್ಮ ನಟನೆಯ ಮೂಲಕ ಅಭಿಮಾನಿಗಳ ಮನಗೆಲ್ಲುತ್ತಲೇ ಇದ್ದಾರೆ. ಇದರಲ್ಲಿ ಎರಡು ಮಾತಿಲ್ಲ. ತಮ್ಮ ಪಾತ್ರಗಳ ಆಯ್ಕೆಯಲ್ಲಿ ಸದಾ ಹೊಸತನ ಮೆರೆಯುವ ನಟಿ.

Read Full Story
06:17 PM (IST) Jun 20

India News Live 20th June:ಹನುಮಾನ ದೇವಸ್ಥಾನದ ಮೇಲ್ಛಾವಣಿ ಕುಸಿದು 6 ಭಕ್ತರ ದುರ್ಮರಣ; ಪ್ರಸಾದ ಸ್ವೀಕರಿಸುತ್ತಿದ್ದಾಗಲೇ ದುರಂತ

ಮಹಾರಾಷ್ಟ್ರದ ಪರಭಣಿ ಜಿಲ್ಲೆಯ ಹನುಮಾನ್ ದೇವಸ್ಥಾನದಲ್ಲಿ ನಿರ್ಮಾಣ ಹಂತದ ಮೇಲ್ಛಾವಣಿ ಕುಸಿದು 6 ಭಕ್ತರು ಸಾವನ್ನಪ್ಪಿದ್ದಾರೆ. ಪ್ರಸಾದ ಸ್ವೀಕರಿಸುತ್ತಿದ್ದಾಗ ಈ ದುರಂತ ಸಂಭವಿಸಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Read Full Story
05:57 PM (IST) Jun 20

India News Live 20th June:ಇಂಗ್ಲೆಂಡ್ ಎದುರಿನ ಸರಣಿಯಿಂದಲೂ ಹೊರಬಿದ್ದ ಹಾರ್ದಿಕ್ ಪಾಂಡ್ಯ; ಕೊಹ್ಲಿ ಬಗ್ಗೆಯೂ ಸಿಕ್ತು ಮಹತ್ವದ ಅಪ್‌ಡೇಟ್

ಬೆಂಗಳೂರು: ಆಫ್ಘಾನಿಸ್ತಾನ ಎದುರಿನ ಏಕದಿನ ಸರಣಿ ಮುಕ್ತಾಯದ ಬಳಿಕ ಟೀಂ ಇಂಡಿಯಾ, ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಗೂ ಮುನ್ನ ಭಾರತಕ್ಕೆ ದೊಡ್ಡ ಹಿನ್ನಡೆ ಎದುರಾಗಿದ್ದು, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಸಮಸ್ಯೆಯಿಂದ ಇಂಗ್ಲೆಂಡ್ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ.

Read Full Story
05:31 PM (IST) Jun 20

India News Live 20th June:1200 ಕೋಟಿ ರೂ ಒಡೆಯ, ನಟ Ram Charan teja, Upasana ಫಸ್ಟ್‌ ಮಗಳು ಕ್ಲಿನ್‌ ಕಾರಾ ಫಸ್ಟ್ ಫೋಟೋ‌ ರಿವೀಲ್

Actor Ram Charan Teja And Upasana Konidela Daughter Photo: ನಟ ರಾಮ್‌ ಚರಣ್‌ ತೇಜ ಹಾಗೂ ಉಪಾಸನಾ ಕೊನಿಡೆಲ ಇದುವರೆಗೂ ಎಲ್ಲಿಯೂ ಮಗಳ ಮುಖವನ್ನು ರಿವೀಲ್‌ ಮಾಡಿರಲಿಲ್ಲ. ಇತ್ತೀಚೆಗೆ ಉಪಾಸನಾ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದಾಗ ರಾಮ್‌ ಚರಣ್‌ ತೇಜ ಅವರು ಮಗಳ ಜೊತೆ ಆಸ್ಪತ್ರೆಗೆ ಬಂದಿದ್ದರು.

Read Full Story
04:09 PM (IST) Jun 20

India News Live 20th June:ಮೋದಿ-ಮೆಲೋನಿ ಫೋಟೋ ನೋಡಿ ಹೊಟ್ಟೆ ಉರಿದುಕೊಂಡ ಟ್ರಂಪ್​? ಎಡವಟ್ಟು ಹೇಳಿಕೆ ನೀಡಿ ಮುಖಭಂಗ

ಜಿ7 ಶೃಂಗಸಭೆಯಲ್ಲಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ತಮ್ಮೊಂದಿಗೆ ಫೋಟೋ ತೆಗೆಸಿಕೊಳ್ಳಲು ಬೇಡಿಕೊಂಡಿದ್ದರು ಎಂಬ ಡೊನಾಲ್ಡ್ ಟ್ರಂಪ್ ಅವರ ವಿವಾದಾತ್ಮಕ ಹೇಳಿಕೆ ಸಂಚಲನ ಸೃಷ್ಟಿಸಿದೆ. ಟ್ರಂಪ್ ಅವರ ಆರೋಪವನ್ನು ಸಂಪೂರ್ಣ ಕಟ್ಟುಕಥೆ ಎಂದು ತಳ್ಳಿಹಾಕಿದ ಮೆಲೋನಿ, ತಾವಾಗಲಿ ಅಥವಾ ಇಟಲಿಯಾಗಲಿ ಯಾರ ಮುಂದೆಯೂ ಬೇಡುವುದಿಲ್ಲ ಎಂದು ಖಾರವಾಗಿ ತಿರುಗೇಟು ನೀಡಿದ್ದಾರೆ, ಇದರಿಂದ ಟ್ರಂಪ್ ಮುಖಭಂಗ ಅನುಭವಿಸಿದ್ದಾರೆ.
Read Full Story
03:31 PM (IST) Jun 20

India News Live 20th June:ಹೌದು, ನಾನು ಬುರ್ಖಾ ಧರಿಸುತ್ತೇನೆ ಎಂದ ನಟಿ; ಕನ್ನಡ ಸಿನಿಮಾದಲ್ಲಿಯೂ ನಟಿಸಿರುವ ಚೆಲುವೆ

ಕಾಫಿ ವಿಥ್ ಕರಣ್ ಶೋನಲ್ಲಿ ನಟಿ ತಮ್ಮ ಖಾಸಗಿತನ ಕಾಪಾಡಿಕೊಳ್ಳಲು ಬುರ್ಖಾ ಧರಿಸುವುದಾಗಿ ಹೇಳಿದ್ದಾರೆ. ಕ್ಯಾಮೆರಾಗಳಿಂದ ತಪ್ಪಿಸಿಕೊಳ್ಳಲು ಈ ದಾರಿ ಕಂಡುಕೊಂಡಿರುವುದಾಗಿ ತಿಳಿಸಿದ್ದು, ಸೆಲೆಬ್ರಿಟಿಗಳ ಖಾಸಗಿ ಬದುಕಿನ ಬಗ್ಗೆಯೂ ಮಾತನಾಡಿದ್ದಾರೆ. ಕನ್ನಡ ಸಿನಿಮಾದಲ್ಲಿಯೂ ನಟಿ ಕಾಣಿಸಿಕೊಂಡಿದ್ದಾರೆ.

Read Full Story
03:27 PM (IST) Jun 20

India News Live 20th June:Rain 2026 - ಈ ಬಾರಿಯ ಪರಾಭವ ಸಂವತ್ಸರದಲ್ಲಿ ಮಳೆ ಕಡಿಮೆ; 5 ಶತಮಾನಗಳ ಹಿಂದಿನ ಪುಸ್ತಕದಲ್ಲೇ ಇತ್ತು ದಾಖಲೆ!

Rain Fall Ratta Mata Shastra: ಪರಿಸರ ತಜ್ಞ, ಲೇಖಕ ಶಿವಾನಂದ ಕಳವೆ ಅವರು ಮಳೆ ಬಗ್ಗೆ ವಿಶೇಷ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವರ್ಷ ಮಳೆ ಕಡಿಮೆಯಿದೆ ಎಂದು ತಜ್ಞ ವರದಿಗಳು ಈಗ ಹೇಳುತ್ತಿವೆ. ಆದರೆ ಪರಾಭವ ಸಂವತ್ಸರದಲ್ಲಿ ಮಳೆ ಕಡಿಮೆ ಎಂದು ಐದನೇ ಶತಮಾನದ ರಟ್ಟ ಮತ ಶಾಸ್ತ್ರ ದಾಖಲಿಸಿದೆ. 

Read Full Story
03:26 PM (IST) Jun 20

India News Live 20th June:ತಾಕತ್ ಇದ್ರೆ ರಿಂಗ್‌ಗೆ ಬಾ ಎಂದು ಶ್ರೀಶಾಂತ್ ತೊಡೆ ತಟ್ಟಿದ ಬೆನ್ನಲ್ಲೇ ಬಹಿರಂಗವಾಗಿಯೇ ಖಡಕ್ ತಿರುಗೇಟು ಕೊಟ್ಟ ಭಜ್ಜಿ!

ಮಾಜಿ ಕ್ರಿಕೆಟಿಗ ಎಸ್ ಶ್ರೀಶಾಂತ್, ಹರ್ಭಜನ್ ಸಿಂಗ್‌ಗೆ ಬಾಕ್ಸಿಂಗ್ ರಿಂಗ್‌ಗೆ ಬರುವಂತೆ ಬಹಿರಂಗ ಸವಾಲು ಹಾಕಿದ್ದಾರೆ. ಈ ಸವಾಲಿಗೆ ಖಡಕ್ ತಿರುಗೇಟು ನೀಡಿರುವ ಭಜ್ಜಿ, ಖಾಲಿ ಪಾತ್ರೆಗಳೇ ಹೆಚ್ಚು ಸದ್ದು ಮಾಡುತ್ತವೆ ಎಂದು ಗೂಢಾರ್ಥವಾಗಿ ಉತ್ತರಿಸಿದ್ದಾರೆ. ಈ ಲೇಖನವು 2008ರ ಐಪಿಎಲ್ ಕಪಾಳಮೋಕ್ಷ ಪ್ರಕರಣದ ಹಿನ್ನೆಲೆಯನ್ನು ವಿವರಿಸುತ್ತದೆ.
Read Full Story
02:33 PM (IST) Jun 20

India News Live 20th June:ಕೇವಲ ಸ್ಟೈಲ್ ಅಷ್ಟೇ ಅಲ್ಲ, ಸುರಕ್ಷತೆಯೂ ಮುಖ್ಯ! ಹೆಲ್ಮೆಟ್ ಖರೀದಿಸುವಾಗ ಈ ವಿಷಯಗಳು ನೆನಪಿರಲಿ

ಹೊಸ ಹೆಲ್ಮೆಟ್ ಖರೀದಿಸುವಾಗ ISI ಮಾರ್ಕ್, IS 4151 ಸ್ಟ್ಯಾಂಡರ್ಡ್ ಕೋಡ್ ಮತ್ತು ಸರಿಯಾದ ಸೈಜ್ ಅನ್ನು ಪರಿಶೀಲಿಸುವುದು ಅತ್ಯಗತ್ಯ. ಸೆಕೆಂಡ್ ಹ್ಯಾಂಡ್ ಹೆಲ್ಮೆಟ್ ಖರೀದಿಸುವುದು, ರಾಸಾಯನಿಕಗಳಿಂದ ಸ್ವಚ್ಛಗೊಳಿಸುವುದು ಮತ್ತು 5 ವರ್ಷಗಳ ನಂತರವೂ ಬಳಸುವುದು ನಿಮ್ಮ ಸುರಕ್ಷತೆಗೆ ಅಪಾಯಕಾರಿಯಾಗಬಹುದು.
Read Full Story
02:29 PM (IST) Jun 20

India News Live 20th June:ಜಾನ್ವಿ ಕಪೂರ್ ದಿಟ್ಟ ಹೋರಾಟಕ್ಕೆ ಶಹಬ್ಬಾಸ್ ಎಂದ 'ಮೈನ್ ವಾಪಸ್ ಆವುಂಗಾ' ನಟಿ ಅಂಜನಾ ಸುಖಾನಿ!

ಒಂದೆಡೆ ಸಾಮಾಜಿಕ ಕಳಕಳಿಯ ಬಗ್ಗೆ ಮಾತನಾಡುತ್ತಿರುವ ಅಂಜನಾ ಸುಖಾನಿ, ಇನ್ನೊಂದೆಡೆ ವೃತ್ತಿಜೀವನದಲ್ಲೂ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಅವರ ಇತ್ತೀಚಿನ ಚಿತ್ರ 'ಮೈನ್ ವಾಪಸ್ ಆವುಂಗಾ' (Main Vaapas Aaunga) ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

Read Full Story
02:20 PM (IST) Jun 20

India News Live 20th June:NEET UG 2026 re-exam - ನೀಟ್ ಮರು ಪರೀಕ್ಷೆಗೂ ಮುನ್ನವೇ NTA ಮತ್ತೆ ಎಡವಟ್ಟು! ನಾಗ್ಪುರ ವಿದ್ಯಾರ್ಥಿಗೆ ಅಬುಧಾಬಿಯಲ್ಲಿ ಎಕ್ಸಾಂ ಸೆಂಟರ್!

ನಾಳೆ ನೀಟ್ ಮರು ಪರೀಕ್ಷೆಗೆ ನಡೆಯಲಿದ್ದು,NTA ಮತ್ತೊಂದು ಎಡವಟ್ಟು ಮಾಡಿದೆ. ನಾಗ್ಪುರದ ವಿದ್ಯಾರ್ಥಿಯೊಬ್ಬರಿಗೆ ಅಬುಧಾಬಿಯಲ್ಲಿ ಪರೀಕ್ಷಾ ಕೇಂದ್ರವನ್ನು ನಿಗದಿಪಡಿಸಿದ್ದು, ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ದೂರು ನೀಡಿದ ನಂತರ, ಎನ್‌ಟಿಎ ಸಂಜೆಯೊಳಗೆ ಬದಲಾಯಿಸುವುದಾಗಿ ಭರವಸೆ ನೀಡಿದೆ.

Read Full Story
02:00 PM (IST) Jun 20

India News Live 20th June:ಬಂಗಾರದ ಬೆಟ್ಟ, 148 ಟನ್ ಗೋಲ್ಡನ್ ಸೀಕ್ರೆಟ್! ಮಣ್ಣಿನಡಿ ನೂರಾರು ಟನ್ ಚಿನ್ನ ಹೂತಿಟ್ಟಿದ್ಯಾರು..? ಎಲ್ಲಿದೆ ಆ ಬೆಟ್ಟ?

ಸ್ವಿಟ್ಜರ್‌ಲೆಂಡ್‌ನ ಪರಮಾಣು ನಿರೋಧಕ ಬಂಕರ್‌ನಲ್ಲಿ ಟೆಥರ್ ಎಂಬ ಕ್ರಿಪ್ಟೋ ಕಂಪನಿಯು 148 ಟನ್ ಚಿನ್ನವನ್ನು ರಹಸ್ಯವಾಗಿ ಸಂಗ್ರಹಿಸಿದೆ. ಜಾಗತಿಕ ಯುದ್ಧದ ಭೀತಿ ಮತ್ತು ಡಾಲರ್ ಮೌಲ್ಯ ಕುಸಿತದಂತಹ ಆರ್ಥಿಕ ಅಸ್ಥಿರತೆಯಿಂದ ತನ್ನ ಸಂಪತ್ತನ್ನು ರಕ್ಷಿಸಿಕೊಳ್ಳಲು, ಈ ಕಂಪನಿಯು ಚಿನ್ನವನ್ನು ರಕ್ಷಾಕವಚವಾಗಿ ಬಳಸಿಕೊಳ್ಳುತ್ತಿದೆ.
Read Full Story
01:46 PM (IST) Jun 20

India News Live 20th June:Actor Anil Kapoor ಮಗಳು ರಿಯಾ ಕಪೂರ್‌ರ 1 ಕೋಟಿ 35 ಲಕ್ಷ ರೂಪಾಯಿ ಮೌಲ್ಯದ ಕಿವಿಓಲೆ ಕಳ್ಳತನ! ಹೇಗೆ?

Bollywood Actor Anil Kapoor Daughter: ಬಾಲಿವುಡ್‌ ನಟ ಅನಿಲ್‌ ಕಪೂರ್ ಅವರ ಎರಡನೇ ಪುತ್ರಿ, ಸೋನಂ ಕಪೂರ್‌ ಸಹೋದರಿ ರಿಯಾ ಕಪೂರ್‌ ಅವರ ಕಿವಿಓಲೆ ಕಳ್ಳತನ ಆಗಿದೆ. ಈ ಬಗ್ಗೆ ದೂರು ಕೂಡ ದಾಖಲಾಗಿದೆ. 

Read Full Story
01:29 PM (IST) Jun 20

India News Live 20th June:ಬೆಂಗಳೂರು ಮಾಡೆಲ್‌ ಪಾಲಿಸಿದ ರಾಷ್ಟ್ರ ರಾಜಧಾನಿ, Delhi-NCR ಮೂರು ಜೋನ್‌ ಆಗಿ ವಿಭಜನೆ, 4 ಹೊಸ ನಮೋ ನಗರ

ಬೆಂಗಳೂರು ಮಾದರಿಯಲ್ಲಿ ದೆಹಲಿ ಅಭಿವೃದ್ಧಿಗೆ ಬ್ಲೂಪ್ರಿಂಟ್ ರೆಡಿಯಾಗಿದೆ. ಎನ್‌ಸಿಆರ್ ಪ್ರಾದೇಶಿಕ ಯೋಜನೆ-2041ರ ಅಡಿಯಲ್ಲಿ ನಾಲ್ಕು ಹೊಸ ನಮೋ ನಗರಗಳು, ಮೂರು ವಿಶೇಷ ಆರ್ಥಿಕ ವಲಯಗಳ ನಿರ್ಮಾಣಕ್ಕೆ ಪ್ರಸ್ತಾವನೆ ಮಾಡಲಾಗಿದೆ.

Read Full Story
01:23 PM (IST) Jun 20

India News Live 20th June:ರಾಮ ಮಂದಿರಕ್ಕೆ ನೀಡಿದ ಕಾಣಿಕೆ ಹಣ ಬ್ಯಾಂಕ್ ಖಾತೆ ಸೇರೋದು ಹೇಗೆ? ಇಲ್ಲಿದೆ ಹುಂಡಿ ಎಣಿಕೆಯ ಸಂಪೂರ್ಣ ಸಿಸ್ಟಮ್!

ಅಯೋಧ್ಯೆಯ ರಾಮ ಮಂದಿರದಲ್ಲಿ ಭಕ್ತರು ಅರ್ಪಿಸುವ ಕಾಣಿಕೆಯನ್ನು ಅತ್ಯಂತ ಪಾರದರ್ಶಕವಾಗಿ ಸಂಗ್ರಹಿಸಲಾಗುತ್ತದೆ. ಬಹುಹಂತದ ಪರಿಶೀಲನೆ, ಸಿಸಿಟಿವಿ ಕಣ್ಗಾವಲು ಮತ್ತು ಕಟ್ಟುನಿಟ್ಟಿನ ನಿಯಮಗಳ ಅಡಿಯಲ್ಲಿ ಹಣವನ್ನು ಎಣಿಕೆ ಮಾಡಿ, ಸುರಕ್ಷಿತವಾಗಿ ಟ್ರಸ್ಟ್‌ನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. 

Read Full Story