Home investment strategy in india: ದೇಶದಲ್ಲಿ ಸ್ವಂತ ಮನೆ ಅನ್ನೋದು ಬಹುತೇಕರ ಜೀವನದ ಕನಸು. ಅದರಲ್ಲೂ ಒಂದು ಕೋಟಿ ರೂಪಾಯಿ ಬಜೆಟ್ ಇದ್ದರೆ, ಸ್ವಂತ ಮನೆ ಕಟ್ಟಬೇಕಾ ಅಥವಾ ಅಪಾರ್ಟ್ಮೆಂಟ್ನಲ್ಲಿ ಫ್ಲಾಟ್ ಖರೀದಿಸಬೇಕಾ ಅನ್ನೋ ಗೊಂದಲ ಅನೇಕರಲ್ಲಿ ಮೂಡುತ್ತದೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
- Home
- News
- India News
- National News Live: Home Investment - 1 ಕೋಟಿ ರೂಪಾಯಿ ಕೊಟ್ಟು ಸಿಟಿಯಲ್ಲಿ ಮನೆ ಕಟ್ಟೋ ಬದಲು ಹೀಗೆ ಮಾಡಿ, ಜೀವನಪೂರ್ತಿ ಆದಾಯ ಪಕ್ಕಾ!
National News Live: Home Investment - 1 ಕೋಟಿ ರೂಪಾಯಿ ಕೊಟ್ಟು ಸಿಟಿಯಲ್ಲಿ ಮನೆ ಕಟ್ಟೋ ಬದಲು ಹೀಗೆ ಮಾಡಿ, ಜೀವನಪೂರ್ತಿ ಆದಾಯ ಪಕ್ಕಾ!

ನವದೆಹಲಿ (ಜೂ.20): ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಸಂಸದರ ಬಂಡಾಯ ಮಹಾರಾಷ್ಟ್ರದಲ್ಲಿ ಬಿರುಗಾಳಿ ಎಬ್ಬಿಸಿದ ಬೆನ್ನಲ್ಲೇ, ಶರದ್ ಪವಾರ್ ನೇತೃತ್ವದ ಎನ್ಸಿಪಿ-ಎಸ್ಪಿಯ ಹಲವಾರು ಸಂಸದರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಅಜಿತ್ ಪವಾರ್ ಅವರ ಎನ್ಸಿಪಿ ಹೇಳಿದೆ. ಈ ಮೂಲಕ ಈಗಾಗಲೇ ಒಮ್ಮೆ ಹೋಳಾಗಿರುವ ಪಕ್ಷ ಮತ್ತೊಮ್ಮೆ ಹೋಳಾಗುವ ಭೀತಿ ಎದುರಾಗಿದೆ. ಇತ್ತ ಟಿಎಂಸಿ, ಸೇನೆ (ಯುಬಿಟಿ) ಬಂಡಾಯದ ಹೊಡೆತಕ್ಕೆ ಸಿಲುಕಿರುವ ಇಂಡಿ ಮೈತ್ರಿಕೂಟಕ್ಕೆ ಮತ್ತೊಂದು ಏಟು ಬೀಳುವ ಸಾಧ್ಯತೆಯಿದೆ.ಆದರೆ ಎನ್ಸಿಪಿ-ಎಸ್ಪಿ ನಾಯಕರು ಇದನ್ನು ಅಲ್ಲಗಳೆದಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
India News Live 20th June:Home Investment - 1 ಕೋಟಿ ರೂಪಾಯಿ ಕೊಟ್ಟು ಸಿಟಿಯಲ್ಲಿ ಮನೆ ಕಟ್ಟೋ ಬದಲು ಹೀಗೆ ಮಾಡಿ, ಜೀವನಪೂರ್ತಿ ಆದಾಯ ಪಕ್ಕಾ!
India News Live 20th June:ಇಂದಿನಿಂದ ಮಹಾರಾಜ ಟಿ20 ಟ್ರೋಫಿ ಆರಂಭ - ಈ ಬಾರಿ ಆಟದ ನಿಯಮಗಳೇ ಬದಲು! ಫ್ರೀ-ಹಿಟ್ನಲ್ಲಿ ರನ್ ಇಲ್ಲ
India News Live 20th June:'ನನ್ನ ಜತೆ ಫೋಟೊಗಾಗಿ ಮೆಲೋನಿ ಬೇಡಿಕೊಂಡಳು..' ಟ್ರಂಪ್ ಮಾತಿಗೆ ಕಿಡಿಕಿಡಿಯಾದ ಇಟಲಿ ಪ್ರಧಾನಿ
ಜಿ7 ಶೃಂಗದಲ್ಲಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ತನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ಬೇಡಿಕೊಂಡರು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು 'ಕಟ್ಟುಕತೆ' ಎಂದು ತಳ್ಳಿಹಾಕಿದ ಮೆಲೋನಿ, ಇಟಲಿ ಯಾರನ್ನೂ ಬೇಡುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
India News Live 20th June:ಇರಾನ್ಗೆ ನಯಾಪೈಸೆ ಕೂಡಾ ಕೊಡಲ್ಲ - ಡೊನಾಲ್ಡ್ ಟ್ರಂಪ್
ಶಾಂತಿ ಒಪ್ಪಂದದ ಅಡಿಯಲ್ಲಿ ಇರಾನ್ಗೆ 28 ಲಕ್ಷ ಕೋಟಿ ರು. ಪರಿಹಾರ ನೀಡುವ ಪ್ರಶ್ನೆಯೇ ಇಲ್ಲ, 10 ಸೆಂಟ್ಸ್ ಕೂಡ ಸಿಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇದೇ ವೇಳೆ, ಇಸ್ರೇಲ್ ದಾಳಿ ಹಿನ್ನೆಲೆಯಲ್ಲಿ ಅಮೆರಿಕ-ಇರಾನ್ ನಡುವಿನ ಸ್ವಿಸ್ ಸಂಧಾನ ಸಭೆ ಮುಂದೂಡಲ್ಪಟ್ಟಿದೆ.
India News Live 20th June:ಠಾಕ್ರೆ ಸೇನೆ ಬಳಿಕ ಶರದ್ ಪವಾರ್ ಎನ್ಸಿಪಿಯಲ್ಲಿ ಬಂಡಾಯ?
ಅಜಿತ್ ಪವಾರ್ ನೇತೃತ್ವದ ಎನ್ಸಿಪಿ, ಶರದ್ ಪವಾರ್ ಬಣದ ಹಲವು ಸಂಸದರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿಕೊಂಡಿದೆ. ಇದು ಪಕ್ಷದಲ್ಲಿ ಮತ್ತೊಂದು ವಿಭಜನೆಯ ಆತಂಕ ಸೃಷ್ಟಿಸಿದೆ.