- Home
- News
- India News
- India News Live Updates: ಚೆನ್ನೈ ಸೂಪರ್ ಕಿಂಗ್ಸ್ಗೆ ಗುಡ್ಬೈ ಹೇಳಿದ ಕಿವೀಸ್ ಮಾಜಿ ಕ್ಯಾಪ್ಟನ್ ಈಗ ಇಂಗ್ಲೆಂಡ್ ಕ್ರಿಕೆಟ್ ತಂಡದ ಹೊಸ ಬಾಸ್!
India News Live Updates: ಚೆನ್ನೈ ಸೂಪರ್ ಕಿಂಗ್ಸ್ಗೆ ಗುಡ್ಬೈ ಹೇಳಿದ ಕಿವೀಸ್ ಮಾಜಿ ಕ್ಯಾಪ್ಟನ್ ಈಗ ಇಂಗ್ಲೆಂಡ್ ಕ್ರಿಕೆಟ್ ತಂಡದ ಹೊಸ ಬಾಸ್!

ನವದೆಹಲಿ:ಪರೀಕ್ಷಾ ಸುಧಾರಣಾ ಟಾಸ್ಕ್ ಫೋರ್ಸ್ ಸದಸ್ಯರಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ನೇಮಕವಾದ ಐಐಟಿ ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ ಅವರನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ‘ಗೋಮೂತ್ರ ತಜ್ಞ’ ಎಂದು ಟೀಕಿಸಿದ್ದನ್ನು ಖಂಡಿಸಿ, 215 ಶಿಕ್ಷಣ ತಜ್ಞರು ಪ್ರಿಯಾಂಕಾ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಪಕುಲಪತಿಗಳು ಮತ್ತು ಮಾಜಿ ಉಪಕುಲಪತಿಗಳು ಸೇರಿದಂತೆ ಅನೇಕರು ಇದರಲ್ಲಿದ್ದಾರೆ.
‘ಕಾಮಕೋಟಿ ಅವರನ್ನು ನೀವು ಟೀಕಿಸಿದ್ದು ನಮಗೆ ನಿರಾಶೆ ತಂದಿದೆ. ಆ ನಿರಾಶೆಯನ್ನು ವ್ಯಕ್ತಪಡಿಸಲು ನಾವು ಈ ಪತ್ರ ಬರೆಯುತ್ತಿದ್ದೇವೆ. ಪ್ರೊ। ಕಾಮಕೋಟಿ ಭಾರತದ ಅಗ್ರಗಣ್ಯ ವೈಜ್ಞಾನಿಕ ಮತ್ತು ತಾಂತ್ರಿಕ ಸಂಸ್ಥೆಗಳಲ್ಲಿ ಒಂದರ ಮುಖ್ಯಸ್ಥರಾಗಿದ್ದಾರೆ. ಪ್ರತಿ ಶಿಕ್ಷಣ ತಜ್ಞರಂತೆ, ಅವರು ಸಹ ಊಹೆಗಳನ್ನು ಮಂಡಿಸಲು, ಸಾಂಪ್ರದಾಯಿಕ ಜ್ಞಾನವನ್ನು ಚರ್ಚಿಸಲು ಮತ್ತು ವೈಜ್ಞಾನಿಕ ಸಂವಾದಗಳಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ. ಒಬ್ಬ ವಿದ್ವಾಂಸನನ್ನು ಅವರ ಅಭಿಪ್ರಾಯಗಳ ಸಾರವನ್ನು ತಿಳಿದು ಅಳೆಯುವ ಬದಲು, ಅವರಿಗೆ ಒಂದು ಹಣೆಪಟ್ಟಿ ಕಟ್ಟುವುದು ಸಲ್ಲದು ಎಂದಿದ್ದಾರೆ.
ಈ ಹಿಂದೆ ಕಾಮಕೋಟಿ ಗೋಮೂತ್ರದ ಮಹತ್ವದ ಬಗ್ಗೆ ಹೇಳಿದ್ದರು. ಪ್ರಿಯಾಂಕಾ ಇದನ್ನೇ ಮುಂದಿಟ್ಟುಕೊಂಡು ಕಾಮಕೋಟಿ ಗೋಮೂತ್ರ ತಜ್ಞ ಎಂದು ಟೀಕಿಸಿದ್ದರು.
India News Live Updates: ಚೆನ್ನೈ ಸೂಪರ್ ಕಿಂಗ್ಸ್ಗೆ ಗುಡ್ಬೈ ಹೇಳಿದ ಕಿವೀಸ್ ಮಾಜಿ ಕ್ಯಾಪ್ಟನ್ ಈಗ ಇಂಗ್ಲೆಂಡ್ ಕ್ರಿಕೆಟ್ ತಂಡದ ಹೊಸ ಬಾಸ್!
India News Live Updates: ಪವಾಡ ಅಂದ್ರೆ ಇದು! ಸತ್ತಿದ್ದಾಳೆಂದು ಆಸ್ಪತ್ರೆಯಿಂದ ಮನೆಗೆ ತರುವಾಗ ರಸ್ತೆ ಮಧ್ಯೆ ಎದ್ದುಕೂತ ಮಹಿಳೆ..!
ಸಾಮಾನ್ಯವಾಗಿ ರಸ್ತೆಗಳಲ್ಲಿರುವ ಗುಂಡಿಗಳು ಅಪಘಾತಗಳಿಗೆ ಕಾರಣವಾಗಿ ಜನರ ಪ್ರಾಣವನ್ನು ಬಲಿಪಡೆಯುತ್ತವೆ. ಆದರೆ, ಇಲ್ಲೊಂದು ಅಪರೂಪದ ಘಟನೆ ನಡೆದಿದ್ದು ರಸ್ತೆಯಲ್ಲಿದ್ದ ದೊಡ್ಡ ಗುಂಡಿಯೊಂದು ಸಾವಿನ ಮನೆಯತ್ತ ಸಾಗುತ್ತಿದ್ದ ಮಹಿಳೆಗೆ ಮರುಜೀವ ನೀಡಿದೆ! ಈ ಅಚ್ಚರಿಯ ಘಟನೆ ಆಂಧ್ರಪ್ರದೇಶದ ಏಲೂರು ಜಿಲ್ಲೆಯಲ್ಲಿ ನಡೆದಿದ್ದು, ಸ್ಥಳೀಯವಾಗಿ ಭಾರಿ ಚರ್ಚೆಗೆ ಕಾರಣವಾಗಿದೆ.