01:05 PM (IST) Apr 12

India news liveಆಸ್ಪತ್ರೆ ದಾಖಲಾಗಿದ್ದ ಪಾಲ್ಕೆ ಪ್ರಶಸ್ತಿ ಪುರಸ್ಕೃತ ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನ

ಆಸ್ಪತ್ರೆ ದಾಖಲಾಗಿದ್ದ ಪಾಲ್ಕೆ ಪ್ರಶಸ್ತಿ ಪುರಸ್ಕೃತ ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನ, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ವಿಜೇತ ಆಶಾ ಭೋಸ್ಲೆ ಇಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

Read Full Story
12:34 PM (IST) Apr 12

India news liveಟ್ರಿಸ್ಟಿನ್ ಸ್ಟಬ್ಸ್‌ಗೆ ಗ್ಲೌಸ್ ಬದಲಿಸಲು ಅಂಪೈರ್ ಬಿಡಲಿಲ್ಲ ಯಾಕೆ? ಐಪಿಎಲ್ ನಿಯಮ ಏನು ಹೇಳುತ್ತೆ?

IPL 2026: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವು ಬಹಳ ರೋಚಕವಾಗಿತ್ತು. ಈ ಪಂದ್ಯದ ವೇಳೆ ಐಪಿಎಲ್‌ನ ಒಂದು ಕುತೂಹಲಕಾರಿ ನಿಯಮದ ಬಗ್ಗೆ ಚರ್ಚೆ ಶುರುವಾಗಿದೆ.
Read Full Story
12:26 PM (IST) Apr 12

India news liveUS-Iran Talks - ಮುರಿದುಬಿದ್ದ ಮಾತುಕತೆ; ವಿಶ್ವದ ಆರ್ಥಿಕತೆಗೆ ಕಾದಿದೆಯಾ ದೊಡ್ಡ ಕಂಟಕ?

ಅಮೆರಿಕ ಮತ್ತು ಇರಾನ್ ನಡುವಿನ 'ಇಸ್ಲಾಮಾಬಾದ್ ಮಾತುಕತೆ' ವಿಫಲಗೊಂಡಿದ್ದು, ಜಾಗತಿಕ ಆರ್ಥಿಕ ದುರಂತದ ಭೀತಿ ಎದುರಾಗಿದೆ. ತಜ್ಞ ರಾಬಿಂದರ್ ಸಚ್‌ದೇವ್ ಪ್ರಕಾರ, 'ಎರಡೂ ದೇಶಗಳು ಕಠಿಣ ನಿಲುವು ತಳೆದಿವೆ'. ಇದು ವಿಶ್ವದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಯುದ್ಧದ ಸಾಧ್ಯತೆಯನ್ನೂ ಹೆಚ್ಚಿಸಿದೆ.
Read Full Story
12:05 PM (IST) Apr 12

India news liveUdit Raj - ಇಸ್ಲಾಮಾಬಾದ್ ಮಾತುಕತೆ ವಿಫಲ, ಯುದ್ಧ ಶುರುವಾಗಬಹುದು ಎಂದು ಎಚ್ಚರಿಸಿದ ಕಾಂಗ್ರೆಸ್ ನಾಯಕ!

ಇಸ್ಲಾಮಾಬಾದ್‌ನಲ್ಲಿ ನಡೆದ ಅಮೆರಿಕ-ಇರಾನ್ ಶಾಂತಿ ಮಾತುಕತೆ ಮುರಿದುಬಿದ್ದಿದೆ. ಇದರಿಂದ ಜಾಗತಿಕವಾಗಿ ಗಂಭೀರ ಪರಿಣಾಮಗಳಾಗಬಹುದು ಎಂದು ಕಾಂಗ್ರೆಸ್ ನಾಯಕ ಉದಿತ್ ರಾಜ್ ಎಚ್ಚರಿಸಿದ್ದಾರೆ. ಪಾಕಿಸ್ತಾನದ ಈ ನಡೆ ಭಾರತದ ವರ್ಚಸ್ಸಿಗೆ ಧಕ್ಕೆ ತಂದಿದೆ ಎಂದೂ ಅವರು ಟೀಕಿಸಿದ್ದಾರೆ. 2\

Read Full Story
11:53 AM (IST) Apr 12

India news liveಕಟಿಹಾರದಲ್ಲಿ ಪ್ರಯಾಣಿಕರ ಬಸ್ ಭೀಕರ ಅಪಘಾತ, 10 ಸಾವು, 25 ಮಂದಿಗೆ ಗಂಭೀರ ಗಾಯ

ಕಟಿಹಾರದಲ್ಲಿ ಪ್ರಯಾಣಿಕರ ಬಸ್ ಭೀಕರ ಅಪಘಾತ, 10 ಸಾವು, 25 ಮಂದಿಗೆ ಗಂಭೀರ ಗಾಯ, ಅತೀ ವೇಗದಲ್ಲಿದ್ದ ಬಸ್, ಎದುರಿನಿಂದ ಬಂದ ಪಿಕ್ ಅಪ್ ವಾಹನಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ.

Read Full Story
11:25 AM (IST) Apr 12

India news liveಮದುವೆ ಮರುದಿನವೇ ಭೀಕರ ಅಪಘಾತ, ನವ ಜೋಡಿ ಸೇರಿ ಕುಟುಂಬದ ನಾಲ್ವರ ದುರಂತ ಸಾವು

ಮದುವೆ ಮರುದಿನವೇ ಭೀಕರ ಅಪಘಾತ, ನವ ಜೋಡಿ ಸೇರಿ ಕುಟುಂಬದ ನಾಲ್ವರ ದುರಂತ ಸಾವು, ಮದುವೆ ಮರು ದಿನ ಮನೆಗೆ ತೆರಳುವಾಗ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ದುರಂತ ಅಂದರೆ ಈ ಮಡಿದವ ನಾಲ್ವರ ಪೈಕಿ ಸಂಬಂಧಿಗೆ ಇನ್ನೆರಡೇ ದಿನದಲ್ಲಿ ಎಂಗೇಜ್‌ಮೆಂಟ್ ನಡೆಯಬೇಕಿತ್ತು.

Read Full Story
11:24 AM (IST) Apr 12

India news liveಅಮೆರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ವಿಮಾನಕ್ಕೆ ಪಾಕಿಸ್ತಾನದ ಎಫ್16 ವಿಮಾನದ ಬೆಂಗಾವಲು

US-Iran peace talks Islamabad: ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಅಮೆರಿಕ ಮತ್ತು ಇರಾನ್ ಇಸ್ಲಾಮಾಬಾದ್‌ನಲ್ಲಿ ಶಾಂತಿ ಮಾತುಕತೆ ನಡೆಸುತ್ತಿವೆ.ಈ ಮಾತುಕತೆಗೆ ಆಗಮಿಸಿದ ಜೆಡಿ ವ್ಯಾನ್ಸ್ ವಿಮಾನಕ್ಕೆ ಅಮೆರಿಕಾದ ಎಫ್-16 ವಿಮಾನಗಳು ಬೆಂಗಾವಲು ಒದಗಿಸಿದ ವೀಡಿಯೋಗಳು ವೈರಲ್ ಆಗಿವೆ.

Read Full Story
10:52 AM (IST) Apr 12

India news live15ರ ಹುಡುಗನಿಗೆ ಈ ರೇಂಜ್‌ಗೆ ಸಂಬಳಾನ? ವೈಭವ್ ಸೂರ್ಯವಂಶಿ ಕಳೆದ 4 ಮ್ಯಾಚ್‌ಗಳಿಂದ ಗಳಿಸಿದ ದುಡ್ಡು ಎಷ್ಟು?

ಐಪಿಎಲ್ 2026ರಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿ ಎಲ್ಲೆಡೆ ಸುದ್ದಿಯಾಗಿದ್ದಾರೆ. ರಾಜಸ್ಥಾನ ರಾಯಲ್ಸ್ ಪರ ಆಡುತ್ತಿರುವ ಇವರು, ತಮ್ಮ ಅದ್ಭುತ ಬ್ಯಾಟಿಂಗ್‌ನಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅದರಲ್ಲೂ ಆರ್‌ಸಿಬಿ ವಿರುದ್ಧ ಆಡಿದ ಇನ್ನಿಂಗ್ಸ್ ಅವರ ವೃತ್ತಿಜೀವನಕ್ಕೆ ಹೊಸ ತಿರುವು ನೀಡಿದೆ.

Read Full Story
09:19 AM (IST) Apr 12

India news liveಸೌದಿ ಅರೇಬಿಯಾಗೆ ಪಾಕಿಸ್ತಾನದಿಂದ 13,000 ಸೈನಿಕರು, 18 ಜೆಟ್ ರವಾನೆ

ಕಳೆದ ವರ್ಷದ ರಕ್ಷಣಾ ಒಪ್ಪಂದದ ಅನ್ವಯ, ಪಾಕಿಸ್ತಾನವು 13,000 ಸೈನಿಕರು ಮತ್ತು ಯುದ್ಧ ವಿಮಾನಗಳನ್ನು ಒಳಗೊಂಡ ಮಿಲಿಟರಿ ತುಕಡಿಯನ್ನು ಸೌದಿ ಅರೇಬಿಯಾಕ್ಕೆ ಕಳುಹಿಸಿದೆ. ಈ ನಿಯೋಜನೆಯು ಉಭಯ ದೇಶಗಳ ನಡುವಿನ ಜಂಟಿ ಮಿಲಿಟರಿ ಸಹಕಾರ ಮತ್ತು ರಕ್ಷಣಾ ಬಲವರ್ಧನೆಯ ಉದ್ದೇಶವನ್ನು ಹೊಂದಿದೆ.
Read Full Story
09:00 AM (IST) Apr 12

India news liveವೈಭವ್ ಸೂರ್ಯವಂಶಿ ಶಾಕಿಂದ ಹೊರಬರುವ ತವಕದಲ್ಲಿ ಆರ್‌ಸಿಬಿ, ಮುಂಬೈ! ವಾಂಖೆಡೆಯಲ್ಲಿಂದು ಹೈವೋಲ್ಟೇಜ್ ಮ್ಯಾಚ್

ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತ ನಂತರ, ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗುತ್ತಿವೆ. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಸಮಸ್ಯೆ ಎದುರಿಸುತ್ತಿರುವ ಮುಂಬೈಗೆ ಈ ಪಂದ್ಯ ನಿರ್ಣಾಯಕವಾಗಿದ್ದರೆ, ಆರ್‌ಸಿಬಿ ತನ್ನ ಬೌಲಿಂಗ್ ವಿಭಾಗವನ್ನು ಬಲಪಡಿಸಿಕೊಳ್ಳುವತ್ತ ಗಮನಹರಿಸಲಿದೆ.
Read Full Story
08:31 AM (IST) Apr 12

India news liveIPL 2026 - ನಿನ್ನೆ ನಡೆದ ಸಿಎಸ್‌ಕೆ-ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?

ಸಂಜು ಸ್ಯಾಮ್ಸನ್‌ರ ಸ್ಫೋಟಕ ಶತಕದ (115*) ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ 212 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌, ಕ್ರೇಗ್‌ ಓವರ್ಟನ್‌ರ (4/18) ಮಾರಕ ಬೌಲಿಂಗ್ ದಾಳಿಗೆ ನಲುಗಿ 26 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಈ ಮೂಲಕ ಚೆನ್ನೈ 2026ರ ಐಪಿಎಲ್‌ನಲ್ಲಿ ಮೊದಲ ಜಯ ದಾಖಲಿಸಿತು.
Read Full Story
08:04 AM (IST) Apr 12

India news liveಹೋರ್ಮುಜ್ ತೆರೆಯಲು ಇರಾನ್‌ಗೆ ತಾನೇ ಹೂತಿಟ್ಟ ಜಲಬಾಂಬ್ ಅಡ್ಡಿ - ಹೋರ್ಮುಜ್‌ ತೆರವು ಆರಂಭಿಸಿದ್ದೇವೆ ಎಂದ ಟ್ರಂಪ್

ಮಧ್ಯಪ್ರಾಚ್ಯ ಸಂಘರ್ಷದ ವೇಳೆ ಹೋರ್ಮುಜ್ ಜಲಸಂಧಿಯಲ್ಲಿ ಇರಾನ್ ಅಳವಡಿಸಿದ್ದ ಜಲಸ್ಪೋಟಕಗಳು ಈಗ ಅದಕ್ಕೇ ತಿರುಗುಬಾಣವಾಗಿವೆ. ಈ ಸ್ಫೋಟಕಗಳನ್ನು ಪತ್ತೆಹಚ್ಚಲು ಸಾಧ್ಯವಾಗದೆ, ಕದನ ವಿರಾಮದ ಹೊರತಾಗಿಯೂ ವಿಶ್ವದ ಪ್ರಮುಖ ತೈಲ ಸಾಗಣೆ ಮಾರ್ಗವನ್ನು ತೆರೆಯಲು ಇರಾನ್ ಪರದಾಡುತ್ತಿದೆ.
Read Full Story