07:22 AM (IST) Apr 06

India Latest News Live 6 April 2026ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಪತ್ನಿ ಬಳಿ 3 ದೇಶಗಳ ಪಾಸ್‌ಪೋರ್ಟ್ - ಕಾಂಗ್ರೆಸ್‌ ಆರೋಪ

ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ಬಳಿ 3 ದೇಶಗಳ ಪಾಸ್‌ಪೋರ್ಟ್‌ ಇದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಇದರೊಂದಿಗೆ, ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಹೆಚ್ಚಿಸುವ ಕೇಂದ್ರ ಸರ್ಕಾರದ ಪ್ರಸ್ತಾಪಕ್ಕೆ ಕಾಂಗ್ರೆಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

Read Full Story
07:12 AM (IST) Apr 06

India Latest News Live 6 April 2026ಮಮತಾ ಬ್ಯಾನರ್ಜಿ ಆಳ್ವಿಕೆಯಲ್ಲಿ ಜಡ್ಜ್‌ಗಳೂ ಸುರಕ್ಷಿತ ಅಲ್ಲ - ಪ್ರಧಾನಿ ಮೋದಿ ವಾಗ್ದಾಳಿ

ಪಶ್ಚಿಮ ಬಂಗಾಳದ ಮಾಲ್ಡಾ ಘಟನೆಯನ್ನು ಉಲ್ಲೇಖಿಸಿ ಪ್ರಧಾನಿ ಮೋದಿ, ಟಿಎಂಸಿ ಆಡಳಿತವನ್ನು 'ಮಹಾ ಜಂಗಲ್‌ರಾಜ್' ಎಂದು ಟೀಕಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ ಹಿಂದೆ ಅಮಿತ್ ಶಾ ಕೈವಾಡವಿದೆ ಎಂದು ಆರೋಪಿಸಿರುವ ಮಮತಾ ಬ್ಯಾನರ್ಜಿ, ನೇರ ಹೋರಾಟಕ್ಕೆ ಸವಾಲು ಹಾಕಿದ್ದಾರೆ.

Read Full Story
07:00 AM (IST) Apr 06

India Latest News Live 6 April 2026ಭಾರತದಲ್ಲಿ ಜಿಹಾದ್‌ ನಡೆಸುತ್ತಿದ್ದ ಐಸಿಸ್‌ ನಂಟಿನ ಉಗ್ರಜಾಲ ಬಯಲು; ವಿದೇಶದಲ್ಲಿನ ಹ್ಯಾಂಡ್ಲರ್‌ಗಳ ಜತೆ ಸಂಪರ್ಕ

ಐಸಿಸ್ ಮತ್ತು ಅಲ್‌ ಖೈದಾದಂತಹ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಭಯೋತ್ಪಾದಕ ಜಾಲವನ್ನು ಬಯಲು ಮಾಡಲಾಗಿದೆ. ಈ ಜಾಲವು ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ ಸ್ಥಾಪಿಸುವ ಗುರಿಯೊಂದಿಗೆ, ವಿದೇಶಿ ಹ್ಯಾಂಡ್ಲರ್‌ಗಳ ಸಹಾಯದಿಂದ ಯುವಕರನ್ನು ಜಿಹಾದ್‌ಗೆ ಪ್ರೇರೇಪಿಸುತ್ತಿತ್ತು. .

Read Full Story
06:11 AM (IST) Apr 06

India Latest News Live 6 April 2026ಒಬ್ಬ ಯೋಧನಿಗಾಗಿ ₹1000 ಕೋಟಿ ವಿಮಾನಕ್ಕೆ ಬೆಂಕಿ; ಅಮೆರಿಕ ಇತಿಹಾಸದಲ್ಲೇ ರೋಚಕ ಸೇನಾ ಕಾರ್ಯಾಚರಣೆ

ಇರಾನ್‌ನಲ್ಲಿ ಹೊಡೆದುರುಳಿಸಲಾದ ಯುದ್ಧವಿಮಾನದ ಪೈಲಟ್‌ನನ್ನು ರಕ್ಷಿಸಲು ಅಮೆರಿಕವು ರೋಚಕ ಕಾರ್ಯಾಚರಣೆ ನಡೆಸಿತು. ಈ ಸಾಹಸಮಯ ಕಾರ್ಯಾಚರಣೆಯಲ್ಲಿ ಯೋಧನನ್ನು ಸುರಕ್ಷಿತವಾಗಿ ಕರೆತರಲಾಯಿತು, ಆದರೆ ರಹಸ್ಯ ಕಾಪಾಡಲು ಅಮೆರಿಕ ತನ್ನದೇ ಎರಡು ವಿಮಾನಗಳಿಗೆ ಬೆಂಕಿ ಹಚ್ಚಬೇಕಾಯಿತು.

Read Full Story
05:59 AM (IST) Apr 06

India Latest News Live 6 April 2026ಇರಾನ್‌ನಲ್ಲಿದ್ದ ತನ್ನದೇ ಎರಡು ಅತ್ಯಾಧುನಿಕ ವಿಮಾನಗಳನ್ನು ನಾಶಪಡಿಸಿಕೊಂಡ ಅಮೆರಿಕಾ

ಇರಾನ್‌ನಲ್ಲಿ ತನ್ನ ಯೋಧರ ರಕ್ಷಣಾ ಕಾರ್ಯಾಚರಣೆ ಯಶಸ್ವಿ ಎಂದ ಅಮೆರಿಕ, ಆದರೆ ದಾಳಿ ವಿಫಲಗೊಳಿಸಿದ್ದೇವೆ ಎಂದು ಇರಾನ್ ಹೇಳಿಕೊಂಡಿದೆ. ತಂತ್ರಜ್ಞಾನ ಶತ್ರುಗಳ ಕೈ ಸೇರಬಾರದೆಂದು ಅಮೆರಿಕ ತನ್ನದೇ ಎರಡು ವಿಮಾನಗಳನ್ನು ನಾಶಪಡಿಸಿದೆ.

Read Full Story
05:49 AM (IST) Apr 06

India Latest News Live 6 April 2026ಗುಜರಾತಿನ ಜನರು ಅನಕ್ಷರಸ್ಥರು, ಕೇರಳಂ ಜನರನ್ನು ಮೋಸಗೊಳಿಸಲು ಸಾಧ್ಯವಿಲ್ಲ - ಮಲ್ಲಿಕಾರ್ಜುನ ಖರ್ಗೆ

ಕೇರಳ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗುಜರಾತಿನ ಅನಕ್ಷರಸ್ಥರನ್ನು ಮೋದಿ ಮೋಸಗೊಳಿಸಿರಬಹುದು ಆದರೆ ಅಕ್ಷರಸ್ಥ ಕೇರಳಿಗರನ್ನು ಸಾಧ್ಯವಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯು ಗುಜರಾತ್ ಜನರಿಗೆ ಮಾಡಿದ ಅವಮಾನ ಎಂದು ಬಿಜೆಪಿ ತೀವ್ರವಾಗಿ ಖಂಡಿಸಿದೆ.
Read Full Story
05:41 AM (IST) Apr 06

India Latest News Live 6 April 2026ಇರಾನ್‌ಗೆ ಡೊನಾಲ್ಡ್ ಟ್ರಂಪ್‌ ಕಟು ಎಚ್ಚರಿಕೆ ಸಂದೇಶ - ಮಂಗಳವಾರದತ್ತ ಇಡೀ ವಿಶ್ವದ ಚಿತ್ತ

ಹೋರ್ಮುಜ್ ಜಲಸಂಧಿ ತೆರೆಯಲು ಇರಾನ್‌ಗೆ ಡೊನಾಲ್ಡ್ ಟ್ರಂಪ್ ನೀಡಿದ್ದ ಗಡುವು ಸೋಮವಾರಕ್ಕೆ ಅಂತ್ಯಗೊಳ್ಳಲಿದೆ. ಒಂದು ವೇಳೆ ಇರಾನ್ ಒಪ್ಪಂದಕ್ಕೆ ಬರದಿದ್ದರೆ, ಮಂಗಳವಾರದಂದು ದೇಶದ ತೈಲಾಗಾರಗಳು ಮತ್ತು ವಿದ್ಯುತ್ ಸ್ಥಾವರಗಳನ್ನು ನಾಶಮಾಡಿ, ತೈಲವನ್ನು ವಶಪಡಿಸಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

Read Full Story
05:33 AM (IST) Apr 06

India Latest News Live 6 April 2026ವಿಚ್ಛೇದಿತ ಮಗಳನ್ನು ಅದ್ಧೂರಿಯ ಸ್ವಾಗತ ಮಾಡಿಕೊಂಡ ನಿವೃತ್ತ ನ್ಯಾಯಾಧೀಶ - ವಿಡಿಯೋ ನೋಡಿ

ನಿವೃತ್ತ ನ್ಯಾಯಾಧೀಶರೊಬ್ಬರು, ವಿಚ್ಛೇದನ ಪಡೆದು ಮನೆಗೆ ಮರಳಿದ ತಮ್ಮ ಮಗಳನ್ನು ಬಾಜಾ, ಬಜಂತ್ರಿಯೊಂದಿಗೆ ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ವಿಚ್ಛೇದನ ಎಂಬುದು ಕಳಂಕವಲ್ಲ, ಸಮಾಜಕ್ಕಿಂತ ಮಗಳ ಸಂತೋಷ ಮತ್ತು ಘನತೆಯೇ ಮುಖ್ಯ ಎಂದು ಅವರು ಸಮಾಜಕ್ಕೆ ಸಂದೇಶ ಸಾರಿದ್ದಾರೆ.

Read Full Story