MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • 'ನಾನು ಒಂದೇ ದಿನ ಅಮ್ಮ ಮತ್ತು ಅಪ್ಪ ಇಬ್ಬರನ್ನೂ ಕಳೆದುಕೊಂಡೆ'.. ಸತ್ಯಸಂಗತಿ ಹೇಳಿ ಕಣ್ಣೀರು ಹಾಕಿದ ಜಾಹ್ನವಿ ಕಪೂರ್

'ನಾನು ಒಂದೇ ದಿನ ಅಮ್ಮ ಮತ್ತು ಅಪ್ಪ ಇಬ್ಬರನ್ನೂ ಕಳೆದುಕೊಂಡೆ'.. ಸತ್ಯಸಂಗತಿ ಹೇಳಿ ಕಣ್ಣೀರು ಹಾಕಿದ ಜಾಹ್ನವಿ ಕಪೂರ್

ಬಾಲಿವುಡ್‌ನ ಅತಿಲೋಕ ಸುಂದರಿ ಶ್ರೀದೇವಿ ಅಕಾಲಿಕವಾಗಿ ಅಗಲಿ ವರ್ಷಗಳೇ ಕಳೆದಿದ್ದರೂ, ಅವರ ನೆನಪುಗಳು ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಹಸಿರಾಗಿವೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತನ್ನ ತಾಯಿಯ ಬಗ್ಗೆ ಆಡಿರುವ ಮಾತುಗಳು ಎಲ್ಲರ ಕಣ್ಣಾಲಿಗಳನ್ನು ತೇವಗೊಳಿಸಿವೆ.

2 Min read
Author : Shriram Bhat
Published : Apr 06 2026, 07:41 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Asianet News

ಬಾಲಿವುಡ್‌ನ ಅತಿಲೋಕ ಸುಂದರಿ ಶ್ರೀದೇವಿ ಅಕಾಲಿಕವಾಗಿ ಅಗಲಿ ವರ್ಷಗಳೇ ಕಳೆದಿದ್ದರೂ, ಅವರ ನೆನಪುಗಳು ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಹಸಿರಾಗಿವೆ. ಆದರೆ ಶ್ರೀದೇವಿಯವರ ಮಗಳು ಜಾಹ್ನವಿ ಕಪೂರ್ (Janhvi Kapoor) ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತನ್ನ ತಾಯಿಯ ಬಗ್ಗೆ ಆಡಿರುವ ಮಾತುಗಳು ಎಲ್ಲರ ಕಣ್ಣಾಲಿಗಳನ್ನು ತೇವಗೊಳಿಸಿವೆ. ಅಮ್ಮನನ್ನು ಕೇವಲ ಒಬ್ಬ ಸ್ಟಾರ್ ನಟಿಯಾಗಿ ಮಾತ್ರವಲ್ಲದೆ, ಒಬ್ಬ ಮಹಿಳೆಯಾಗಿ ಸಮಾಜ ಹೇಗೆ ನಡೆಸಿಕೊಂಡಿತು ಎಂಬುದನ್ನು ಜಾನ್ವಿ ಅತ್ಯಂತ ಭಾವುಕರಾಗಿ ಬಿಚ್ಚಿಟ್ಟಿದ್ದಾರೆ.

26
Image Credit : Instagram/ Janhvi Kapoor

ಅಮ್ಮನನ್ನು 'ಸಂಸಾರ ಒಡೆದವಳು' ಎಂದಿದ್ದರು ಜನರು!

ಬೋನಿ ಕಪೂರ್ ಅವರು ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳನ್ನು (ಅರ್ಜುನ್ ಮತ್ತು ಅನ್ಶುಲಾ) ಹೊಂದಿದ್ದ ಸಂದರ್ಭದಲ್ಲಿ ಶ್ರೀದೇವಿಯವರನ್ನು 1996ರಲ್ಲಿ ಮದುವೆಯಾಗಿದ್ದರು. ಈ ಒಂದು ನಿರ್ಧಾರಕ್ಕಾಗಿ ಅಂದಿನ ಸಮಾಜವು ಶ್ರೀದೇವಿಯವರನ್ನು ಅತಿ ಕ್ರೂರವಾಗಿ ಟೀಕಿಸಿತ್ತು.

Related Articles

Related image1
ಬೆಚ್ಚಿಬಿದ್ದ ಕಿರುತೆರೆ; ವಿಡಿಯೋ ಕಾಲ್‌ನಲ್ಲಿ ಗಂಡ ನೋಡುತ್ತಿರುವಾಗಲೇ ಖ್ಯಾತ ನಟಿ ಸುಭಾಷಿಣಿ ಆತ್ಮ*ಹತ್ಯೆ!
Related image2
ಆತ್ಮ*ಹತ್ಯೆಗೆ ಶರಣಾದ ನಟಿ ಸುಭಾಷಿಣಿ ಮೂಲತಃ ಶ್ರೀಲಂಕಾದವರು, ಮದುವೆಯಾಗಿದ್ದು ಬೆಂಗಳೂರಿನವರನ್ನು!
36
Image Credit : instagram

"ಜನರು ಅಮ್ಮನ ಬಗ್ಗೆ ತುಂಬಾ ಕಠೋರವಾಗಿ ನಡೆದುಕೊಂಡರು. ಅವರನ್ನು 'ಸಂಸಾರ ಒಡೆದವಳು' (Home-wrecker) ಎಂದು ಹೀಯಾಳಿಸಿದರು. ಈ ಮಾತುಗಳು ಅಮ್ಮನ ಮನಸ್ಸಿನ ಮೇಲೆ ದೊಡ್ಡ ಪರಿಣಾಮ ಬೀರಿದ್ದವು. ಜನರು ಅವರಿಗೆ ದಯೆ ತೋರಿಸಲಿಲ್ಲ, ಇದು ಅವರನ್ನು ಸದಾ ಕಾಡುತ್ತಿತ್ತು" ಎಂದು ಜಾನ್ವಿ ಕಪೂರ್ ರಾಜ ಶಮಾನಿ ಅವರೊಂದಿಗಿನ ಸಂಭಾಷಣೆಯಲ್ಲಿ ನೋವು ತೋಡಿಕೊಂಡಿದ್ದಾರೆ.

46
Image Credit : instagram

ಒಂದೇ ದಿನ ಅಮ್ಮ ಮತ್ತು ಅಪ್ಪ ಇಬ್ಬರನ್ನೂ ಕಳೆದುಕೊಂಡೆ!

ಅಮ್ಮನ ಸಾವಿನ ನಂತರ ತನ್ನ ಜೀವನ ಮತ್ತು ಕುಟುಂಬದ ಪರಿಸ್ಥಿತಿ ಹೇಗೆ ಬದಲಾಯಿತು ಎಂದು ವಿವರಿಸಿದ ಜಾಹ್ನವಿ ಕಪೂರ್, "ಅಂದು ನಾನು ಕೇವಲ ಅಮ್ಮನನ್ನು ಮಾತ್ರ ಕಳೆದುಕೊಳ್ಳಲಿಲ್ಲ, ನನ್ನ ತಂದೆಯನ್ನೂ ಕಳೆದುಕೊಂಡೆ. ಅಮ್ಮ ಬದುಕಿದ್ದಾಗ ನನ್ನ ತಂದೆ ಹೇಗಿದ್ದರೋ, ಅವರ ಆ ಆವೃತ್ತಿ ಅಮ್ಮನ ಜೊತೆಗೇ ಹೊರಟುಹೋಯಿತು. ಅಮ್ಮನಿಲ್ಲದ ಮನೆಯಲ್ಲಿ ಅಪ್ಪ ಪೂರ್ತಿ ಬದಲಾಗಿ ಹೋದರು" ಎಂದಿದ್ದಾರೆ. ಅಮ್ಮನ ಅಗಲಿಕೆ ಕೇವಲ ಜಾನ್ವಿಗೆ ಮಾತ್ರವಲ್ಲದೆ ಇಡೀ ಕಪೂರ್ ಕುಟುಂಬಕ್ಕೆ ಸರಿಪಡಿಸಲಾಗದ ಮಾನಸಿಕ ಆಘಾತ ನೀಡಿತ್ತು.

56
Image Credit : instagram

"ಅಮ್ಮನನ್ನು ಅರ್ಥ ಮಾಡಿಕೊಳ್ಳಲು ತಡವಾಯಿತು" ಎಂಬ ವಿಷಾದ:

ಜಾನ್ವಿ ಈಗ ತಾನು ಅಮ್ಮನನ್ನು ಮೊದಲಿಗಿಂತ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. "ನಾನು ಅಮ್ಮನನ್ನು ಮೊದಲು ಅರ್ಥ ಮಾಡಿಕೊಳ್ಳಲಿಲ್ಲವಲ್ಲ ಎಂಬ ವಿಷಾದ ನನಗಿದೆ. ಅವರು ನಾಲ್ಕನೇ ವಯಸ್ಸಿನಿಂದಲೇ ಚಿತ್ರರಂಗದಲ್ಲಿ ಕೆಲಸ ಮಾಡಲು ಶುರು ಮಾಡಿದ್ದರು. ಅದೆಷ್ಟು ವೃತ್ತಿಪರ ಮತ್ತು ಆರ್ಥಿಕ ಒತ್ತಡಗಳನ್ನು ಅನುಭವಿಸಿದ್ದರು ಎಂಬುದು ಈಗ ಅರಿವಾಗುತ್ತಿದೆ. ಆದರೆ ಅಮ್ಮ ತನ್ನ ಜೀವನದ ಹೋರಾಟಗಳ ಬಗ್ಗೆ ನಮಗೆ ಯಾವತ್ತೂ ಹೇಳಿರಲಿಲ್ಲ. ಅವರು ಕೇವಲ ಸಂತೋಷದ ಕಥೆಗಳನ್ನಷ್ಟೇ ಹಂಚಿಕೊಳ್ಳುತ್ತಿದ್ದರು" ಎಂದು ಜಾನ್ವಿ ತಿಳಿಸಿದ್ದಾರೆ.

66
Image Credit : instagram

ಅಮ್ಮನಿಲ್ಲದ ಮೇಲೆ ಮಾಡಿದ ತಪ್ಪುಗಳು:

ಶ್ರೀದೇವಿ ಇದ್ದಾಗ ಜಾಹ್ನವಿ ಕಪೂರ್ ಪ್ರತಿಯೊಂದಕ್ಕೂ ಅಮ್ಮನ ಮೇಲೆಯೇ ಅವಲಂಬಿತರಾಗಿದ್ದರು. "ಯಾವ ಬಟ್ಟೆ ಧರಿಸಬೇಕು, ಏನು ಯೋಚಿಸಬೇಕು ಎಂಬ ಎಲ್ಲ ನಿರ್ಧಾರಗಳನ್ನು ಅಮ್ಮನೇ ತೆಗೆದುಕೊಳ್ಳುತ್ತಿದ್ದರು. ಅಮ್ಮ ಹೋದ ಮೇಲೆ ನಾನು ಏಕಾಏಕಿ ದೊಡ್ಡವಳಾಗಬೇಕಾಯಿತು. ಆ ಗೊಂದಲದಲ್ಲಿ ನಾನು ಕೆಲವು ತಪ್ಪು ನಿರ್ಧಾರಗಳನ್ನು ಮಾಡಿದೆ. ಸರಿಯಲ್ಲದ ಜನರನ್ನು ನನ್ನ ಜೀವನಕ್ಕೆ ಸೇರಿಸಿಕೊಂಡೆ. ಅವರು ನನ್ನನ್ನು ಬಳಸಿಕೊಂಡರು. ನನ್ನ ಮಾನಸಿಕ ಮತ್ತು ದೈಹಿಕ ಸುರಕ್ಷತೆಯ ಬಗ್ಗೆ ನಾನು ರಾಜಿ ಮಾಡಿಕೊಂಡಿದ್ದೆ" ಎಂದು ಜಾನ್ವಿ ಕಪೂರ್ ತಮ್ಮ ಹಳೆಯ ದಿನಗಳ ಕಹಿ ಸತ್ಯಗಳನ್ನು ಒಪ್ಪಿಕೊಂಡಿದ್ದಾರೆ.

ಇಂದು ಜಗತ್ತು ಶ್ರೀದೇವಿಯವರನ್ನು ದೇವತೆಯಂತೆ ಕೊಂಡಾಡುತ್ತಿರಬಹುದು, ಆದರೆ ಅವರು ಬದುಕಿದ್ದಾಗ ಅನುಭವಿಸಿದ ಟೀಕೆಗಳು ಮತ್ತು 'ಹೋಮ್ ರೆಕ್ಕರ್' ಎಂಬ ಹಣೆಪಟ್ಟಿ ಜಾಹ್ನವಿ ಕಪೂರ್ ಅವರ ಹೃದಯವನ್ನು ಇಂದಿಗೂ ಚುಚ್ಚುತ್ತಿದೆ. ಒಬ್ಬ ಯಶಸ್ವಿ ನಟಿಯಾಗಿ ಬೆಳೆಯುತ್ತಿರುವ ಜಾಹ್ನವಿ ಕಪೂರ್, ಇಂದು ತನ್ನ ಅಮ್ಮನ ಗೌರವಕ್ಕಾಗಿ ಮತ್ತು ತನ್ನ ಅಸ್ತಿತ್ವಕ್ಕಾಗಿ ಸಮಾಜದ ಕಣ್ಣುಗಳ ಎದುರು ಎದೆತುಂಬಿ ನಿಂತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಜಾನ್ವಿ ಕಪೂರ್
ಬಾಲಿವುಡ್
ಮನರಂಜನಾ ಸುದ್ದಿ
ಶ್ರೀದೇವಿ

Latest Videos
Recommended Stories
Recommended image1
ಚಿರಂಜೀವಿ ಕೊಟ್ಟ ಆ ಪ್ರಶಸ್ತಿ ತಿರಸ್ಕರಿಸಿದ ಜೂ.ಎನ್‌ಟಿಆರ್‌: ದೊಡ್ಡ ವೇದಿಕೆಯಲ್ಲೇ ಅಚ್ಚರಿಯ ನಿರ್ಧಾರವೇಕೆ?
Recommended image2
'ಫೌಜಿ' ಸೆಟ್‌ನಿಂದ ಪ್ರಭಾಸ್ ಫೋಟೋ ಲೀಕ್: ಅಭಿಮಾನಿಗಳಿಗೆ ನಿರ್ಮಾಪಕರಿಂದ ಖಡಕ್ ಎಚ್ಚರಿಕೆ!
Recommended image3
ಐಶ್ವರ್ಯಾ ರೈ ಜೊತೆ ರೆಡ್ ಕಾರ್ಪೆಟ್ ಮೇಲೆ ನಡೆಯೋಕೆ ಭಯ: ಪತ್ನಿ ಬಗ್ಗೆ ಮನಬಿಚ್ಚಿ ಮಾತಾಡಿದ ಅಭಿಷೇಕ್ ಬಚ್ಚನ್
Related Stories
Recommended image1
ಬೆಚ್ಚಿಬಿದ್ದ ಕಿರುತೆರೆ; ವಿಡಿಯೋ ಕಾಲ್‌ನಲ್ಲಿ ಗಂಡ ನೋಡುತ್ತಿರುವಾಗಲೇ ಖ್ಯಾತ ನಟಿ ಸುಭಾಷಿಣಿ ಆತ್ಮ*ಹತ್ಯೆ!
Recommended image2
ಆತ್ಮ*ಹತ್ಯೆಗೆ ಶರಣಾದ ನಟಿ ಸುಭಾಷಿಣಿ ಮೂಲತಃ ಶ್ರೀಲಂಕಾದವರು, ಮದುವೆಯಾಗಿದ್ದು ಬೆಂಗಳೂರಿನವರನ್ನು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved