ನಗರದ ರಸ್ತೆಯಲ್ಲಿ ಕಾರಿನ ಪುಂಡರ ಶೋ ಆಫ್, 67000 ರೂಪಾಯಿ ದಂಡ ವಿಧಿಸಿದ ಪೊಲೀಸ್, ಆಲ್ಟರ್ ಮಾಡಿದ ಕಾರಿನ ಮೇಲೆ ನಿಂತು ಕುಣಿದಾಡಿದ್ದಾರೆ. ಬ್ಯೂಸಿ ರಸ್ತೆಯಲ್ಲಿ ಪುಂಡಾಟ ಮಾಡಿ ಟ್ರಾಫಿಕ್ ಜಾಮ್ ಮಾಡಿದ್ದಾರೆ.
- Home
- News
- India News
- India Latest News Live: ನಗರದ ರಸ್ತೆಯಲ್ಲಿ ಕಾರಿನ ಪುಂಡರ ಶೋ ಆಫ್, 67000 ರೂಪಾಯಿ ದಂಡ ವಿಧಿಸಿದ ಪೊಲೀಸ್
India Latest News Live: ನಗರದ ರಸ್ತೆಯಲ್ಲಿ ಕಾರಿನ ಪುಂಡರ ಶೋ ಆಫ್, 67000 ರೂಪಾಯಿ ದಂಡ ವಿಧಿಸಿದ ಪೊಲೀಸ್

ನವದೆಹಲಿ: 2020ರ ದೆಹಲಿ ಗಲಭೆಯ ಆರೋಪಿ ಉಮರ್ ಖಾಲಿದ್ನನ್ನು ನ್ಯಾಯಪರವಾಗಿ ವಿಚಾರಣೆ ನಡೆಸುವಂತೆ ಭಾರತ ಸರ್ಕಾರಕ್ಕೆ ಅಮೆರಿಕದ 8 ಸಂಸದರು ಪತ್ರ ಬರೆದು ಆಗ್ರಹಿಸಿದ್ದಾರೆ. ಇವರಲ್ಲಿ ಒಬ್ಬರಾದ ಜನಿಸ್ ಶಾಕೋವ್ಸ್ಕಿಎಂಬ ಸಂಸದೆಯ ಜತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 2024ರಲ್ಲಿ ಸಭೆ ನಡೆಸಿದ ಫೋಟೊವನ್ನು ಬಿಜೆಪಿ ಹಂಚಿಕೊಂಡಿದ್ದು, ಇದು ರಾಹುಲ್ ಅವರ ಭಾರತ ವಿರೋಧಿ ನಡೆಯನ್ನು ಸ್ಪಷ್ಟಪಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, 2024ರಲ್ಲಿ ರಾಹುಲ್ ಹಾಗೂ ಅಮೆರಿಕದ ಇಬ್ಬರು ಸಂಸದರಾದ ಶಾಕೋವ್ಸ್ಕಿ ಮತ್ತು ಇಲ್ಹಾನ್ ಒಮರ್ ಸಭೆ ನಡೆಸುತ್ತಿರುವ ಫೋಟೊ ಪೋಸ್ಟ್ ಮಾಡಿ, ‘ಪ್ರತಿ ಬಾರಿ ಭಾರತ ವಿರೋಧಿ ವಿಚಾರ ವಿದೇಶಗಳಲ್ಲಿ ಹರಡಿದಾಗಲೂ ಒಂದು ಹೆಸರು (ರಾಹುಲ್ ಗಾಂಧಿ) ಹಿನ್ನೆಲೆಯಲ್ಲಿ ಕೇಳಿಬರುತ್ತದೆ. ಭಾರತವನ್ನು ದುರ್ಬಲಗೊಳಿಸಲು, ಅದರ ಸರ್ಕಾರದ ಹೆಸರು ಕೆಡಿಸಲು ಮತ್ತು ಅದರ ಉಗ್ರವಿರೋಧಿ ಕಾನೂನುಗಳನ್ನು ದುರ್ಬಲಗೊಳಿಸಲು ಬಯಸುವವರು ಆತನ ಸುತ್ತ ಸೇರಿಕೊಳ್ಳುತ್ತಾರೆ’ ಎಂದು ಕಿಡಿ ಕಾರಿದ್ದಾರೆ.
India Latest News Live 3 January 2026 ನಗರದ ರಸ್ತೆಯಲ್ಲಿ ಕಾರಿನ ಪುಂಡರ ಶೋ ಆಫ್, 67000 ರೂಪಾಯಿ ದಂಡ ವಿಧಿಸಿದ ಪೊಲೀಸ್
India Latest News Live 3 January 2026 ಬಾಂಗ್ಲಾದೇಶ ವೇಗಿ ಮುಸ್ತಾಫಿಝುರ್ ಕೊಟ್ಟ 9.2 ಕೋಟಿ ರೂಪಾಯಿ ಕೆಕೆಆರ್ಗೆ ಮರಳಿ ಸಿಗುತ್ತಾ?
ಬಾಂಗ್ಲಾದೇಶ ವೇಗಿ ಮುಸ್ತಾಫಿಝುರ್ ಕೊಟ್ಟ 9.2 ಕೋಟಿ ರೂಪಾಯಿ ಕೆಕೆಆರ್ಗೆ ಮರಳಿ ಸಿಗುತ್ತಾ?, ಐಪಿಎಲ್ ಟೂರ್ನಿಯ ನಿಮಯವೇನು? ಬಾಂಗ್ಲಾದೇಶ ಆಟಗಾರರನ್ನು ಐಪಿಎಲ್ ಟೂರ್ನಿಯಿಂದ ಹೊರಗಿಡುವಾಗ ಪಾಲಿಸಬೇಕಾದ ನಿಯವೇನು?
India Latest News Live 3 January 2026 ನಡೆದುಕೊಂಡು ಹೋಗುತ್ತಿರುವಾಗ ಡಿಕ್ಕಿಯಾದ ವಾಹನ, ನಟ ಅಶೀಷ್ ವಿದ್ಯಾರ್ಥಿ, ಪತ್ನಿಗೆ ಗಾಯ
ನಡೆದುಕೊಂಡು ಹೋಗುತ್ತಿರುವಾಗ ಡಿಕ್ಕಿಯಾದ ವಾಹನ, ನಟ ಅಶೀಷ್ ವಿದ್ಯಾರ್ಥಿ, ಪತ್ನಿಗೆ ಗಾಯ, ಘಟನೆ ಕುರಿತು ಸ್ವತಃ ಆಶಿಷ್ ವಿದ್ಯಾರ್ಥಿ ಅಪ್ಡೇಟ್ ನೀಡಿದ್ದಾರೆ. ನಡೆದುಕೊಂಡು ಹೋಗುತ್ತಿರುವಾಗ ವಾಹನ ಡ್ಕಿಕಿಯಾಗಿದೆ.
India Latest News Live 3 January 2026 ನಾಯಕತ್ವದ ಚೊಚ್ಚಲ ಪಂದ್ಯದಲ್ಲೇ ವೈಭವ್ ಸೂರ್ಯವಂಶಿಗೆ ನಿರಾಸೆ; ಆದರೂ ಬೃಹತ್ ಮೊತ್ತ ಗಳಿಸಿದ ಭಾರತ ಯುವ ಪಡೆ
ದಕ್ಷಿಣ ಆಫ್ರಿಕಾ ಎ ವಿರುದ್ಧದ ಯೂತ್ ಏಕದಿನ ಪಂದ್ಯದಲ್ಲಿ, ಭಾರತ ಎ ತಂಡವು ಕಳಪೆ ಆರಂಭದ ಹೊರತಾಗಿಯೂ 300 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಹರ್ವಾನ್ಶ್ ಪಂಗಾಲಿಯಾ (93) ಮತ್ತು ಆರ್ ಎಸ್ ಅಂಬ್ರಿಶ್ (65) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ತಂಡ ಚೇತರಿಸಿಕೊಂಡಿತು.
India Latest News Live 3 January 2026 ಕುಡಿದ ಮತ್ತಲ್ಲಿ 53 ವರ್ಷದ ವ್ಯಕ್ತಿಗೆ ಕಾರ್ ಗುದ್ದಿ ಸಾಯಿಸಿದ ಸೀರಿಯಲ್ ನಟ ಸಿದ್ದಾರ್ಥ್!
ಮಲಯಾಳಂ ನಟ ಸಿದ್ಧಾರ್ಥ್ ಪ್ರಭು ಅವರ ಕಾರು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ತಮಿಳುನಾಡಿನ ಥಂಕರಾಜ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ನಟನ ಮೇಲೆ ಇದೀಗ ಹೆಚ್ಚುವರಿ ಆರೋಪಗಳನ್ನು ಹೊರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
India Latest News Live 3 January 2026 IPL 2026 - ಆರ್ಸಿಬಿ ತಂಡದಲ್ಲಿರುವ 4 ಸ್ಟಾರ್ ವಿದೇಶಿ ಆಟಗಾರರಿವರು! ರೊಮ್ಯಾರಿಯೋ ಶಫರ್ಡ್ಗಿಲ್ಲ ಸ್ಥಾನ
ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಭರದ ಸಿದ್ದತೆಗಳು ನಡೆಯುತ್ತಿವೆ. ಈಗಾಗಲೇ ಮಿನಿ ಹರಾಜು ಕೂಡಾ ಮುಕ್ತಾಯವಾಗಿದ್ದು, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ತಂಡದಲ್ಲಿರುವ 4 ಬಲಿಷ್ಠ ವಿದೇಶಿ ಆಟಗಾರರು ಎನ್ನುವುದುನ್ನು ನೋಡೋಣ ಬನ್ನಿ.
India Latest News Live 3 January 2026 ರ್ಯಾಗಿಂಗ್ಗೆ ವಿದ್ಯಾರ್ಥಿನಿ ಬಲಿ - ಮೂವರು ವಿದ್ಯಾರ್ಥಿನಿಯರು ಪ್ರೊಫೆಸರ್ ವಿರುದ್ಧ ಕೇಸ್
ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ, ಹಿರಿಯ ವಿದ್ಯಾರ್ಥಿನಿಯರು ಮತ್ತು ಪ್ರೊಫೆಸರ್ನಿಂದ ನಡೆದಿದೆ ಎನ್ನಲಾದ ರಾಗಿಂಗ್ ಹಾಗೂ ಲೈಂಗಿಕ ಕಿರುಕುಳದಿಂದ 19 ವರ್ಷದ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ್ದಾಳೆ. ತೀವ್ರ ಆಘಾತದಿಂದ ಬಳಲುತ್ತಿದ್ದ ಆಕೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
India Latest News Live 3 January 2026 ನೀನು ಮಹಾಪಾಪ ಮಾಡಿದ್ದೀಯ... ಹೀರೋಯಿನ್ ವಿರುದ್ಧ ಮುಗಿಬಿದ್ದ ಮುಸ್ಲಿಂ ಧರ್ಮಗುರು!
Controversy Erupts Over Nushratt Bharuccha Visit to Mahakal Temple ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿರುವ ಈ ನಾಯಕಿ ಆಗಾಗ್ಗೆ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಾರೆ. ಈಗ ಈ ಸುಂದರ ಹುಡುಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
India Latest News Live 3 January 2026 ಕಿವೀಸ್ ಎದುರಿನ ಸರಣಿಗೆ ಭಾರತ ತಂಡ ಪ್ರಕಟ; ವರ್ಷದ ಬಳಿಕ ಪಂತ್ ಎಂಟ್ರಿ, ಮತ್ತೆ ಶಮಿಗೆ ಶಾಕ್!
ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ನಾಯಕನಾಗಿ ಶುಭ್ಮನ್ ಗಿಲ್, ಉಪನಾಯಕನಾಗಿ ಶ್ರೇಯಸ್ ಅಯ್ಯರ್ ಮತ್ತು ವರ್ಷಗಳ ಬಳಿಕ ರಿಷಭ್ ಪಂತ್ ತಂಡಕ್ಕೆ ಮರಳಿದ್ದಾರೆ.
India Latest News Live 3 January 2026 ತಿರುಪತಿಯಲ್ಲಿ ಭಾರಿ ಭದ್ರತಾ ಲೋಪ - ದೇಗುಲದ ಗೋಪುರ ಏರಿ ಕುಡುಕನ ಹೈಡ್ರಾಮಾ - ಕಳಸಕ್ಕೆ ಹಾನಿ ಮಾಡಲು ಯತ್ನ
ದೇಶದ ಅತ್ಯಂತ ಶ್ರೀಮಂತ ತಿರುಪತಿ ತಿಮ್ಮಪನ ದೇಗುಲ ಇರುವ ತಿರುಪತಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ತಿರುಪತಿಯ ಹೃದಯ ಭಾಗದಲ್ಲಿರುವ ಶ್ರೀ ಗೋವಿಂದರಾಜ ಸ್ವಾಮಿ ದೇವಾಲಯದ ಗೋಪುರವನ್ನು ಏರಿದ ಕುಡುಕನೋರ್ವ ಅಲ್ಲಿ ಹೈಡ್ರಾಮಾ ಸೃಷ್ಟಿಸಿದ್ದು, ಕಳಸಕ್ಕೆ ಹಾನಿ ಮಾಡುವುದಕ್ಕೆ ಯತ್ನಿಸಿದ್ದಾನೆ.
India Latest News Live 3 January 2026 ಆರು ವರ್ಷದ ಬಾಲಕಿ ಮೇಲೆರಗಿದ ಇಬ್ಬರ ಎನ್ಕೌಂಟರ್, ಪೊಲೀಸ್ ಕ್ಷಿಪ್ರ ಕಾರ್ಯಾಚರಣೆ
ಆರು ವರ್ಷದ ಬಾಲಕಿ ಮೇಲೆರಗಿದ ಇಬ್ಬರ ಎನ್ಕೌಂಟರ್, ಪೊಲೀಸ್ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ. ಆಟವಾಡುತ್ತಿದ್ದ ಬಾಲಕಿ ಮೇಲರಗಿ, ಆಕೆಯನ್ನು ಮಹಡಿಗಳ ಮೇಲಿಂದ ಕೆಳಕ್ಕೆ ಎಸೆದ ದುರುಳರಿಗೆ ತಕ್ಕ ಶಾಸ್ತಿ ಮಾಡಲಾಗಿದೆ.
India Latest News Live 3 January 2026 ಮದ್ವೆಗೆ ಬಿಹಾರ ಹುಡ್ಗೀರು 20 ಸಾವಿರ ರೂಗೆ ಸಿಕ್ತಾರೆ, ಮಹಿಳಾ ಮಕ್ಕಳ ಕಲ್ಯಾಣ ಸಚಿವೆ ಪತಿ ವಿವಾದ
ಮದ್ವೆಗೆ ಬಿಹಾರ ಹುಡ್ಗೀರು 20 ಸಾವಿರ ರೂಗೆ ಸಿಕ್ತಾರೆ, ಮಹಿಳಾ ಮಕ್ಕಳ ಕಲ್ಯಾಣ ಸಚಿವೆ ಪತಿ ವಿವಾದ ಸೃಷ್ಟಿಸಿದ್ದಾರೆ. ಸಚಿವೆ ಪತಿಯ ಹೇಳಿಕೆ ಭಾರಿ ಕೋಲಾಹಲ ಸೃಷ್ಟಿಸಿದೆ. ವಿವಾದವಾಗುತ್ತಿದ್ದಂತೆ ನಾಯಕ ಹೇಳಿದ್ದೇನು?
India Latest News Live 3 January 2026 ನಮ್ಗೂ ಪ್ರೈವೆಸಿ ಬೇಕು ಗುರು - ಪ್ರಾಣಿಗಳ ಚಲನವಲನದ ವೀಕ್ಷಣೆಗೆ ಇರಿಸಿದ ಕ್ಯಾಮರಾ ಎತ್ತಿ ಎಸೆದ ಆನೆ
ಬುದ್ಧಿವಂತ ಪ್ರಾಣಿ ಎನಿಸಿರುವ ಆನೆಗೆ ಸುತ್ತಲಿನ ಪರಿಸರದ ಬಗ್ಗೆ ಅಲ್ಲಾಗುತ್ತಿರುವ ಬೆಳವಣಿಗೆಗಳ ಬಗ್ಗೆ ಜಾಗೃತಿ ಇರುತ್ತದೆ. ಹಾಗೆಯೇ ಇಲ್ಲೊಂದು ಕಡೆ ಆನೆಯೊಂದು ಕಾಡಿನಲ್ಲಿ ಆಳವಡಿಸಲಾಗಿದ್ದ ಕ್ಯಾಮರಾವನ್ನು ಕಿತ್ತೆಸೆದ ಘಟನೆ ನಡೆದಿದೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ.
India Latest News Live 3 January 2026 ಒಂದೇ ಓವರ್ನಲ್ಲಿ ಸತತ 5 ಸಿಕ್ಸರ್; ಬೌಲರ್ಗಳನ್ನು ಚೆಂಡಾಡಿ ಮೊದಲ ಸಿಡಿಸಿದ ಹಾರ್ದಿಕ್ ಪಾಂಡ್ಯ!
India Latest News Live 3 January 2026 Breaking - ಏರ್ ಸ್ಟ್ರೈಕ್ ಬೆನ್ನಲ್ಲೇ ವೆನುಜುವೇಲ ಅಧ್ಯಕ್ಷ, ಪತ್ನಿ ಬಂಧನ - ಡೊನಾಲ್ಡ್ ಟ್ರಂಪ್ ಘೋಷಣೆ
India Latest News Live 3 January 2026 ಇಂಡಿಗೋ ಪ್ರಯಾಣಿಕರಿಗೆ 10 ಸಾವಿರ ರೂ ವೋಚರ್ ಆಫರ್, ಕ್ಲೈಮ್ ಮಾಡುವುದು ಹೇಗೆ?
ಇಂಡಿಗೋ ಪ್ರಯಾಣಿಕರಿಗೆ 10 ಸಾವಿರ ರೂ ವೋಚರ್ ಆಫರ್, ಕ್ಲೈಮ್ ಮಾಡುವುದು ಹೇಗೆ?, ಇಂಡಿಗೋ ವಿಮಾನಾನ ಸಂಸ್ಥೆ ಮಹತ್ವದ ಘೋಷಣೆ. ಯಾರಿಗೆಲ್ಲಾ 10,000 ರೂಪಾಯಿ ಪರಿಹಾರ ವೋಚರ್ ಯಾರಿಗೆಲ್ಲಾ ಸಿಗಲಿದೆ?
India Latest News Live 3 January 2026 ನಮ್ಮ ಮೇಲಿನ ದಾಳಿಗೆ ಉತ್ತರ ನೀಡ್ತೇವೆ, ಅಮೆರಿಕಕ್ಕೆ ಎಚ್ಚರಿಕೆ ನೀಡಿದ ವೆನುಜುವೇಲ ಅಧ್ಯಕ್ಷ
ಅಮೆರಿಕವು ವೆನುಜುವೇಲದ ರಾಜಧಾನಿ ಕ್ಯಾರಕಾಸ್ ಸೇರಿದಂತೆ ನಾಲ್ಕು ನಗರಗಳ ಮೇಲೆ ಭಾರೀ ಮಿಲಿಟರಿ ದಾಳಿ ನಡೆಸಿದೆ. ಈ ದಾಳಿಯನ್ನು ಖಂಡಿಸಿರುವ ಅಧ್ಯಕ್ಷ ನಿಕೋಲಸ್ ಮಡುರೊ, ತಕ್ಕ ಉತ್ತರ ನೀಡುವುದಾಗಿ ಎಚ್ಚರಿಸಿದ್ದು, ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ.
India Latest News Live 3 January 2026 ಶಾರುಖ್ ಖಾನ್ ನಾಲಿಗೆ ಕತ್ತರಿಸಿದವರಿಗೆ ಒಂದು ಲಕ್ಷ ರೂ. ಬಹುಮಾನ ಘೋಷಣೆ! ಫೋಟೋಗೆ ಚಪ್ಪಲಿ ಹಾರ
ಐಪಿಎಲ್ನಲ್ಲಿ ಬಾಂಗ್ಲಾದೇಶಿ ಆಟಗಾರರನ್ನು ಸೇರಿಸಿಕೊಂಡಿದ್ದಕ್ಕಾಗಿ ನಟ ಶಾರುಖ್ ಖಾನ್ ತೀವ್ರ ವಿರೋಧ ಎದುರಿಸುತ್ತಿದ್ದಾರೆ. ಅಖಿಲ ಭಾರತ ಹಿಂದೂ ಮಹಾಸಭಾದ ಮೀನಾ ರಾಥೋಡ್ ಅವರು ಶಾರುಖ್ ನಾಲಿಗೆ ಕತ್ತರಿಸಿ ತಂದವರಿಗೆ ಒಂದು ಲಕ್ಷ ಬಹುಮಾನ ನೀಡುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
India Latest News Live 3 January 2026 ವಿಜಯ್ ಹಜಾರೆ ಟ್ರೋಫಿ - ನಾಲ್ಕನೇ ಶತಕ ಚಚ್ಚಿದ ಆರ್ಸಿಬಿ ಸ್ಟಾರ್ ಕ್ರಿಕೆಟಿಗ!
India Latest News Live 3 January 2026 RBI ನಿಜವಾಗಿಯೂ 500 ರೂ. ನೋಟುಗಳನ್ನು ರದ್ದು ಮಾಡುತ್ತಿದೆಯೇ? ಕೇಂದ್ರದ ಸ್ಪಷ್ಟನೆ
PIB ಫ್ಯಾಕ್ಟ್ ಚೆಕ್: ಕೇಂದ್ರ ಸರ್ಕಾರ ಮತ್ತೊಮ್ಮೆ ನೋಟು ಅಮಾನ್ಯೀಕರಣಕ್ಕೆ ಸಿದ್ಧವಾಗಿದೆಯೇ? ಭಾರತೀಯ ರಿಸರ್ವ್ ಬ್ಯಾಂಕ್ 500 ರೂಪಾಯಿ ನೋಟುಗಳ ಚಲಾವಣೆಯನ್ನು ನಿಲ್ಲಿಸುತ್ತದೆಯೇ? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.