MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Sports
  • Cricket
  • ಬಾಂಗ್ಲಾದೇಶ ವೇಗಿ ಮುಸ್ತಾಫಿಝುರ್‌ ಕೊಟ್ಟ 9.2 ಕೋಟಿ ರೂಪಾಯಿ ಕೆಕೆಆರ್‌ಗೆ ಮರಳಿ ಸಿಗುತ್ತಾ?

ಬಾಂಗ್ಲಾದೇಶ ವೇಗಿ ಮುಸ್ತಾಫಿಝುರ್‌ ಕೊಟ್ಟ 9.2 ಕೋಟಿ ರೂಪಾಯಿ ಕೆಕೆಆರ್‌ಗೆ ಮರಳಿ ಸಿಗುತ್ತಾ?

ಬಾಂಗ್ಲಾದೇಶ ವೇಗಿ ಮುಸ್ತಾಫಿಝುರ್‌ ಕೊಟ್ಟ 9.2 ಕೋಟಿ ರೂಪಾಯಿ ಕೆಕೆಆರ್‌ಗೆ ಮರಳಿ ಸಿಗುತ್ತಾ?, ಐಪಿಎಲ್ ಟೂರ್ನಿಯ ನಿಮಯವೇನು? ಬಾಂಗ್ಲಾದೇಶ ಆಟಗಾರರನ್ನು ಐಪಿಎಲ್ ಟೂರ್ನಿಯಿಂದ ಹೊರಗಿಡುವಾಗ ಪಾಲಿಸಬೇಕಾದ ನಿಯವೇನು? 

1 Min read
Author : Chethan Kumar
Published : Jan 03 2026, 08:30 PM IST
Share this Photo Gallery
  • FB
  • TW
  • Linkdin
  • Whatsapp
16
ವಿವಾದ ಸೃಷ್ಟಿಸಿದ ಮುಸ್ತಾಫಿಝುರ್ ರಹಮಾನ್ ಖರೀದಿ
Image Credit : stockPhoto

ವಿವಾದ ಸೃಷ್ಟಿಸಿದ ಮುಸ್ತಾಫಿಝುರ್ ರಹಮಾನ್ ಖರೀದಿ

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದಾಳಿಗೆ ಭಾರತದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಹಿಂದೂಗಳ ಮೇಲಿನ ದಾಳಿ ನಡುವೆ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಬಾಂಗ್ಲಾದೇಶ ವೇಗಿ ಮುಸ್ತಾಫಿಝುರ್ ರೆಹಮಾನ್‌ಗೆ 9.2 ಕೋಟಿ ರೂಪಾಯಿ ನೀಡಿ ಖರೀದಿಸಿ ವಿವಾದ ಸೃಷ್ಟಿಸಿತ್ತು. ಬಿಸಿಸಿಐ ಸೂಚನೆ ಬೆನ್ನಲ್ಲೇ ಮುಸ್ತಾಫಿಝುರ್‌ಗೆ ಕೊಕ್ ನೀಡಿತ್ತು.

26
ತಂಡದಿಂದ ಕೈಬಿಟ್ಟರೂ ಮುಸ್ತಾಫಿಝುರ್‌ಗೆ ನೀಡಬೇಕಾ 9.2 ಕೋಟಿ ರೂ
Image Credit : ANI

ತಂಡದಿಂದ ಕೈಬಿಟ್ಟರೂ ಮುಸ್ತಾಫಿಝುರ್‌ಗೆ ನೀಡಬೇಕಾ 9.2 ಕೋಟಿ ರೂ

ಕೋಲ್ಕತಾ ನೈಟ್ ರೈಡರ್ಸ್ ತಂಡ ಬಾಂಗ್ಲಾದೇಶಿ ಕ್ರಿಕೆಟಿಗ ಮುಸ್ತಾಫಿಝುರ್ ರೆಹಮಾನ್‌ನನ್ನು ತಂಡದಿಂದ ಕೈಬಿಟ್ಟರೂ ಖರೀದಿ ವೇಳೆ ನೀಡಿದ 9.2 ಕೋಟಿ ರೂಪಾಯಿ ಮೊತ್ತವನ್ನು ಆಟಗಾರನಿಗೆ ನೀಡಬೇಕಾ? ಈ ಮೊತ್ತ ಕೆಕೆಆರ್‌ಗೆ ಮರಳಿ ಬರುವುದಿಲ್ಲವೇ ಎಂದು ಹಲವರು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರ ಇಲ್ಲಿದೆ.

Related Articles

Related image1
Breaking: ಬಾಂಗ್ಲಾ ಪ್ಲೇಯರ್‌ ಮುಸ್ತಾಫಿಜುರ್‌ ರೆಹಮಾನ್‌ ಕೈಬಿಡುವಂತೆ ಶಾರುಖ್‌ ಟೀಮ್‌ಗೆ ಸೂಚಿಸಿದ ಬಿಸಿಸಿಐ
Related image2
ಐಪಿಎಲ್ ಹರಾಜಿನ ಬಳಿಕ 4 ಬಲಿಷ್ಠ ತಂಡ ಆಯ್ಕೆ ಮಾಡಿದ ಆರ್. ಅಶ್ವಿನ್; ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕಿಲ್ಲ ಸ್ಥಾನ!
36
ಐಪಿಎಲ್ ಹರಾಜು ನಿಯಮವೇನು?
Image Credit : Getty

ಐಪಿಎಲ್ ಹರಾಜು ನಿಯಮವೇನು?

ಐಪಿಎಲ್ ಹರಾಜಿನ ನಿಯಮದ ಪ್ರಕಾರ ಒಮ್ಮೆ ಆಟಗಾರನ ಖರೀದಿಸಿದರೆ ಫ್ರಾಂಚೈಸಿಗಳ ಪರ್ಸ್ ಲಾಕ್ ಆಗಲಿದೆ. ಬಳಿಕ ಮೊತ್ತವನ್ನು ಆಟಗಾರರಿಗೆ ಪಾವತಿಸಬೇಕು. ಇನ್ನು ಇಂಜುರಿ ಕಾರಣದಿಂದ, ವೈಯುಕ್ತಿಕ ಕಾರಣದಿಂದ ಸೇರಿದಂತೆ ಹಲವು ಕಾರಣಕ್ಕೆ ಖರೀದಿಯ ಒಟ್ಟು ಮೊತ್ತದಲ್ಲಿ ಇಂತಿಷ್ಟು ಮೊತ್ತ ಪಾವತಿಸಬೇಕು ಎಂದಿದೆ.

46
ಬಿಸಿಸಿಐ ಮಧ್ಯಪ್ರವೇಶದಿಂದ ನಿಯಮ ಅನ್ವಯವಾಗುತ್ತಾ?
Image Credit : Getty

ಬಿಸಿಸಿಐ ಮಧ್ಯಪ್ರವೇಶದಿಂದ ನಿಯಮ ಅನ್ವಯವಾಗುತ್ತಾ?

ಆದರೆ ಈ ಪ್ರಕರಣದಲ್ಲಿ ಬಾಂಗ್ಲಾದೇಶ ಕ್ರಿಕೆಟಿಗರನ್ನು ಐಪಿಎಲ್‌ನಿಂದ ದೂರವಿಡಬೇಕು ಎಂಬು ಬಿಸಿಸಿಐ ಮೊದಲೇ ಹೇಳಿರಲಿಲ್ಲ. ಖರೀದಿ ಬಳಿಕ ಬಿಸಿಸಿಐ ಮಧ್ಯಪ್ರವೇಶಿಸಿ ಸೂಚನೆ ನೀಡಿತ್ತು. ಇದರಂತೆ ಕೆಕೆಆರ್ ಆಟಗಾರನ ಕೈಬಿಟ್ಟಿತ್ತು. ಹೀಗಾಗಿ ಈ ಮೊತ್ತ ಕೆಕೆಆರ್‌ಗೆ ಮರಳಲಿದೆ. ಮುಸ್ತಾಫಿಝುರ್ ರಹಮಾನ್ ಬದಲು ಬೇರೆ ಆಟಗಾರರನ್ನು ಖರೀದಿಸುವ ಅವಕಾಶ ಕೆಕೆಆರ್ ತಂಡಕ್ಕಿದೆ.

56
ಮುಸ್ತಾಫಿಝುರ್‌ಗೆ ಬದಲಿ ಸಮಸ್ಯೆ
Image Credit : KKR\Instagram

ಮುಸ್ತಾಫಿಝುರ್‌ಗೆ ಬದಲಿ ಸಮಸ್ಯೆ

ಮುಸ್ತಾಫಿಝುರ್ ರಹಮಾನ್‌ಗೆ ಬದಲಿಯಾಗಿ ಮತ್ತೊಬ್ಬ ವೇಗಿಯನ್ನು ಕೆಕೆಆರ್ ಆಯ್ಕೆ ಮಾಡಬೇಕಿದೆ. ಆದರೆ ಇದೇ 9.2 ಕೋಟಿ ರೂಪಾಯಿ ಮೊತ್ತಕ್ಕೆ ಮತ್ತೊಬ್ಬ ವೇಗಿ ಹುಡುಕುವುದು ಕಷ್ಟ. ಉತ್ತಮ ವೇಗಿಗಳನ್ನು ಖರೀದಿಸಲು ದುಬಾರಿ ಮೊತ್ತ ಖರ್ಚು ಮಾಡಬೇಕಿದೆ. ಆದರೆ ಕೆಕೆಆರ್ ಬಳಿ ಇದೀಗ ಉಳಿದುಕೊಂಡಿರುವುದು ಈ 9.2 ಕೋಟಿ ರೂಪಾಯಿ ಮಾತ್ರ.

ಮುಸ್ತಾಫಿಝುರ್‌ಗೆ ಬದಲಿ ಸಮಸ್ಯೆ

66
ಬಾಂಗ್ಲಾದೇಶ ಬೆಳವಣಿಗೆಯಿಂದ ಮಹತ್ವದ ನಿರ್ಧಾರ
Image Credit : ANI

ಬಾಂಗ್ಲಾದೇಶ ಬೆಳವಣಿಗೆಯಿಂದ ಮಹತ್ವದ ನಿರ್ಧಾರ

ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರ, ಹಿಂದೂಗಳ ಮೇಲಿನ ದಾಳಿಯಿಂದ ಭಾರತೀಯರು ಕೆರಳಿದ್ದಾರೆ. ಇದರ ನಡುವೆ ಕೆಕೆಆರ್ ಖರೀದಿ ಭಾರತೀಯರನ್ನು ಮತ್ತಷ್ಟು ಕೆರಳಿಸಿತ್ತು. ಕೆಕೆಆರ್ ವಿರುದ್ದ ಆಕ್ರೋಶ ಹೊರಹಾಕಿದ್ದರು. ಹೀಗಾಗಿ ಬಿಸಿಸಿಐ ಮಧ್ಯಪ್ರವೇಶಿಸಿತ್ತು.

ಬಾಂಗ್ಲಾದೇಶ ಬೆಳವಣಿಗೆಯಿಂದ ಮಹತ್ವದ ನಿರ್ಧಾರ

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಕೆಕೆಆರ್
ಐಪಿಎಲ್
ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಹರಾಜು
ಬಿಸಿಸಿಐ

Latest Videos
Recommended Stories
Recommended image1
ಲೋಕಲ್ ಕ್ರಿಕೆಟ್ ಟೂರ್ನಿಯಲ್ಲಿ ಪುಟ್ಟ ಬಾಲಕನ ಕನ್ನಡ-ಇಂಗ್ಲೀಷ್ ಕಮೆಂಟರಿ ವಿಡಿಯೋ ಜನ ಪಿಧಾ
Recommended image2
ನಾಯಕತ್ವದ ಚೊಚ್ಚಲ ಪಂದ್ಯದಲ್ಲೇ ವೈಭವ್ ಸೂರ್ಯವಂಶಿಗೆ ನಿರಾಸೆ; ಆದರೂ ಬೃಹತ್ ಮೊತ್ತ ಗಳಿಸಿದ ಭಾರತ ಯುವ ಪಡೆ
Recommended image3
IPL 2026: ಆರ್‌ಸಿಬಿ ತಂಡದಲ್ಲಿರುವ 4 ಸ್ಟಾರ್ ವಿದೇಶಿ ಆಟಗಾರರಿವರು! ರೊಮ್ಯಾರಿಯೋ ಶಫರ್ಡ್‌ಗಿಲ್ಲ ಸ್ಥಾನ
Related Stories
Recommended image1
Breaking: ಬಾಂಗ್ಲಾ ಪ್ಲೇಯರ್‌ ಮುಸ್ತಾಫಿಜುರ್‌ ರೆಹಮಾನ್‌ ಕೈಬಿಡುವಂತೆ ಶಾರುಖ್‌ ಟೀಮ್‌ಗೆ ಸೂಚಿಸಿದ ಬಿಸಿಸಿಐ
Recommended image2
ಐಪಿಎಲ್ ಹರಾಜಿನ ಬಳಿಕ 4 ಬಲಿಷ್ಠ ತಂಡ ಆಯ್ಕೆ ಮಾಡಿದ ಆರ್. ಅಶ್ವಿನ್; ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕಿಲ್ಲ ಸ್ಥಾನ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved