ಕಾಡಾನೆ ಮುಂದೆ ಬಾಲಿವುಡ್ ಸಾಂಗ್ ಪ್ಲೇ ಮಾಡಲಾಗಿದೆ. ಬಳಿಕ ವ್ಯಕ್ತಿಯೊಬ್ಬ ಡ್ಯಾನ್ಸ್ ಮಾಡಲು ಆರಂಭಿಸಿದ್ದಾನೆ. ಇತ್ತ ಕೆಲವೇ ದೂರದಲ್ಲಿ ಆನೆ ಕೂಡ ಆತನ ತಾಳಕ್ಕೆ ತಕ್ಕಂತೆ ಸ್ಟೆಪ್ಸ್ ಹಾಕಿದ ವಿಡಿಯೋ ಭಾರಿ ವೈರಲ್ ಆಗಿದೆ.
- Home
- News
- India News
- India Latest News Live: ಕಾಡಾನೆ ಮುಂದೆ ಬಾಲಿವುಡ್ ಸಾಂಗ್ ಹಾಕಿ ಡ್ಯಾನ್ಸ್, ದಾಳಿ ಬದಲು ಆನೆಯಿಂದಲೂ ಸಖತ್ ಸ್ಟೆಪ್ಸ್ ವೈರಲ್
India Latest News Live: ಕಾಡಾನೆ ಮುಂದೆ ಬಾಲಿವುಡ್ ಸಾಂಗ್ ಹಾಕಿ ಡ್ಯಾನ್ಸ್, ದಾಳಿ ಬದಲು ಆನೆಯಿಂದಲೂ ಸಖತ್ ಸ್ಟೆಪ್ಸ್ ವೈರಲ್

ಭೋಪಾಲ್: ವರದಕ್ಷಿಣೆ ಕಿರುಕುಳದ ಆರೋಪದ ಮೇಲೆ ಕಳೆದ ವಾರ ತನ್ನ ವೈವಾಹಿಕ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ ನೋಯ್ಡಾ ಮಹಿಳೆ ತ್ವಿಶಾ ಶರ್ಮಾ ಅವರ ಶವವನ್ನು ಸಂರಕ್ಷಿಸುವಂತೆ ಸ್ಥಳೀಯ ನ್ಯಾಯಾಲಯ ಬುಧವಾರ ಆದೇಶಿಸಿದೆ. ಆದರೆ ಎರಡನೇ ಶವಪರೀಕ್ಷೆ ನಡೆಸಬೇಕೆಂಬ ಅವರ ಕುಟುಂಬದ ಮನವಿಯನ್ನು ತಿರಸ್ಕರಿಸಿದೆ.ನಿವೃತ್ತ ನ್ಯಾಯಾಧೀಶರ ಸೊಸೆ ತ್ವಿಶಾ ಶರ್ಮಾ (33) ಇಲ್ಲಿನ ತಮ್ಮ ವೈವಾಹಿಕ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆಕೆಯ ಸಾವು ಆಕ್ರೋಶದ ಅಲೆ ಎಬ್ಬಿಸಿತ್ತು.
India Latest News Live 21st May 2026ಕಾಡಾನೆ ಮುಂದೆ ಬಾಲಿವುಡ್ ಸಾಂಗ್ ಹಾಕಿ ಡ್ಯಾನ್ಸ್, ದಾಳಿ ಬದಲು ಆನೆಯಿಂದಲೂ ಸಖತ್ ಸ್ಟೆಪ್ಸ್ ವೈರಲ್
India Latest News Live 21st May 2026ಪವನ್ ಕಲ್ಯಾಣ್ರನ್ನು ನೋಡಿ ಭಾವುಕರಾದ ಚಿರಂಜೀವಿ - ‘ಮೆಗಾ158’ ಮುಹೂರ್ತದಲ್ಲಿ ಏನಾಯ್ತು?
ಮೆಗಾಸ್ಟಾರ್ ಚಿರಂಜೀವಿ ಅವರ ಬಹುನಿರೀಕ್ಷಿತ 'ಮೆಗಾ158' ಚಿತ್ರಕ್ಕೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಈ ಚಿತ್ರದ ಮುಹೂರ್ತ ಸಮಾರಂಭಕ್ಕೆ ಅವರ ಸಹೋದರ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಆಗಮಿಸಿದ್ದು ವಿಶೇಷವಾಗಿತ್ತು.
India Latest News Live 21st May 2026ಚಿತೆಗೆ ಬೆಂಕಿ ಇಡುವ ಮೊದಲು ಸರಯು ನದಿಯಲ್ಲಿ ಮುಳುಗಿದವನ ಎಳೆದೊಯ್ದ ಮೊಸಳೆ, ವಿಡಿಯೋ
ಅತ್ತೆ ನಿಧನ ಸುದ್ದಿ ಕೇಳಿ ಕುಟುಂಬ ಸಮೇತ ಊರಿಗೆ ತೆರಳಿದ 30ರ ಹರೆಯದ ವ್ಯಕ್ತಿ ದುರಂತ ಅಂತ್ಯ ಕಂಡ ಘಟನೆ ನಡೆದಿದೆ. ಚಿತೆಗೆ ಬೆಂಕಿ ಇಡುವ ಮೊದಲು ನದಿಯಲ್ಲಿ ಮುಳುಗೆಳಲು ನೀರಿಗೆ ಇಳಿದ ಬೆನ್ನಲ್ಲೇ ಮೊಸಳೆ ಎಳೆದೊಯ್ದಿದೆ.
India Latest News Live 21st May 2026ಹಾಲಿವುಡ್ನಲ್ಲಿ ಮತ್ತೆ ಅರ್ನಾಲ್ಡ್ ಆ್ಯಕ್ಷನ್ - ‘ಕಿಂಗ್ ಕೋನಾನ್’ ಬಗ್ಗೆ ಹೊರಬಿದ್ದ ರಹಸ್ಯವೇನು?
ಹಾಲಿವುಡ್ ನಟ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ 'ಕಿಂಗ್ ಕೋನಾನ್' ಸೀಕ್ವೆಲ್ 2027ರಲ್ಲಿ ಶುರುವಾಗಲಿದೆ ಎಂದು ಖಚಿತಪಡಿಸಿದ್ದಾರೆ. ಕ್ರಿಸ್ಟೋಫರ್ ಮೆಕ್ವಾರಿ ಈ ಚಿತ್ರವನ್ನು ಬರೆದು ನಿರ್ದೇಶಿಸಲಿದ್ದಾರೆ. ವಯಸ್ಸಾದ, ರಾಜನಾಗಿ ಸುಖವಾಗಿದ್ದ ಕೋನಾನ್ನನ್ನು ಶತ್ರುಗಳು ಟಾರ್ಗೆಟ್ ಮಾಡುವುದೇ ಈ ಚಿತ್ರದ ಕಥೆ.
India Latest News Live 21st May 2026Melody ಚಾಕ್ಲೇಟ್ ವಿವಾದ ನಡುವೆ ಇಟಲಿ ಪ್ರಧಾನಿ ಜೊತೆಗಿನ ಹೊಸ ರೀಲ್ ಹಂಚಿಕೊಂಡ ಮೋದಿ
ಪ್ರಧಾನಿ ಮೋದಿಯ ಇಟಲಿ ಪ್ರವಾಸ, ಪ್ರಧಾನಿ ಮೆಲೋನಿಗೆ ಮೆಲೋಡಿ ಚಾಕ್ಲೇಟ್ ನೀಡಿರುವುದಕ್ಕೆ ವಿಪಕ್ಷ ಟೀಕಿಸಿದೆ. ಇದರ ಬೆನ್ನಲ್ಲೇ ಮೋದಿ ಹೊಸ ರೀಲ್ ಹಂಚಿಕೊಂಡಿದ್ದಾರೆ. ಈ ರೀಲ್ ವೈರಲ್ ಆಗಿದೆ.
India Latest News Live 21st May 2026ಕೋಟ್ಯಧಿಪತಿ ಮಗಳು, ಆದರೂ ಸರಳ ಜೀವನ - ಸ್ಟಾರ್ ನಟನ ಪತ್ನಿ ಲೈಮ್ಲೈಟ್ನಿಂದ ದೂರವಿರುವುದೇಕೆ?
ಸೂಪರ್ಸ್ಟಾರ್ ಜೂ.ಎನ್ಟಿಆರ್ ಪತ್ನಿ ಲಕ್ಷ್ಮಿ ಪ್ರಣತಿ, ಗಂಡನ ಸ್ಟಾರ್ಡಮ್ ನಡುವೆಯೂ ಸದಾ ಲೈಮ್ಲೈಟ್ನಿಂದ ದೂರವೇ ಇರುತ್ತಾರೆ. ಖಾಸಗಿ ಜೀವನ ಇಷ್ಟಪಡುವ ಇವರು, ಉದ್ಯಮಿ ಕುಟುಂಬದ ಹಿನ್ನೆಲೆಯುಳ್ಳವರು. ತಮ್ಮ ಮಕ್ಕಳೊಂದಿಗೆ ಸರಳ ಜೀವನ ನಡೆಸುತ್ತಿದ್ದಾರೆ.
India Latest News Live 21st May 2026ಬಿಸಿಲಿನಿಂದ ಬಸವಳಿದು ಬಸ್ ನಿಲ್ಲಿಸಿ ನೀರು ಕೇಳಿದ ಕೋತಿಗಳು, ಮನಕಲುಕುವ ದೃಶ್ಯ ಸೆರೆ
ಮನಕಲುಕುವ ದೃಶ್ಯ ಪ್ರಯಾಣಿಕರ ಮೊಬೈಲ್ನಲ್ಲಿ ಸೆರೆಯಾಗಿದೆ. ಬಾಯಾರಿದ ಕೋತಿಗಳು ಬೇರೆ ದಾರಿ ಕಾಣದೆ ಕೊನೆಗೆ ಸಾರಿಗೆ ಬಸ್ ನಿಲ್ಲಿಸಿ ಪ್ರಯಾಣಿಕರಲ್ಲಿ ನೀರು ಕೇಳಿದ ಘಟನೆ ನಡೆದಿದೆ. ತಕ್ಷಣವೇ ಸ್ಪಂದಿಸಿದ ಪ್ರಯಾಣಿಕರು ಕೋತಿಗಳಿಗೆ ನೀರುಣಿಸಿದ ದೃಶ್ಯ ಭಾರಿ ವೈರಲ್ ಆಗಿದೆ.
India Latest News Live 21st May 2026ನೇಪಾಳದ ಸೌಂದರ್ಯ ಸವಿಯಲು ವಿಶೇಷ ರೈಲು ಆರಂಭ - ದರ ಎಷ್ಟು, ಸೌಲಭ್ಯ ಏನು, ಫುಲ್ ಡಿಟೇಲ್ಸ್ ಇಲ್ಲಿದೆ
ಭಾರತೀಯ ರೈಲ್ವೆ ಮತ್ತು IRCTC ಮೊದಲ ಬಾರಿಗೆ ಮಧ್ಯ ಭಾರತದಿಂದ ನೇಪಾಳಕ್ಕೆ 'ಪಶುಪತಿನಾಥ ನೇಪಾಳ ದರ್ಶನ ಯಾತ್ರೆ' ಎಂಬ ಭಾರತ್ ಗೌರವ್ ಪ್ರವಾಸಿ ರೈಲನ್ನು ಪ್ರಾರಂಭಿಸುತ್ತಿವೆ. 10 ದಿನಗಳ ಪ್ರವಾಸವು, ಪಶುಪತಿನಾಥ ದೇವಾಲಯ, ಪೋಖರಾ ಮತ್ತು ಚಿತ್ವಾನ್ ರಾಷ್ಟ್ರೀಯ ಉದ್ಯಾನ ಇತ್ಯಾದಿ ಇರುವ ಪ್ಯಾಕೇಜ್ ಆಗಿದೆ.
India Latest News Live 21st May 2026Number 13 - 'ಅದೊಂದು ಪಾಪದ ನಂಬರ್, 13ನೇ ನಂಬರ್ ಅನ್ಲಕ್ಕಿ ಅಲ್ಲ;- ಅದೇ ನಂಬರ್ ಕೇಳಿ ಪಡೆದ ಸಚಿವರು!
ಕೇರಳದ ಸ್ಥಳೀಯಾಡಳಿತ ಸಚಿವ ಕೆ.ಎಂ. ಷಾಜಿ, 'ಅಪಶಕುನ' ಎಂದು ಯಾರೂ ತೆಗೆದುಕೊಳ್ಳದ 13ನೇ ನಂಬರಿನ ಸರ್ಕಾರಿ ಕಾರನ್ನು ಆಯ್ಕೆ ಮಾಡಿಕೊಂಡಿದ್ದಾರೆ. '13 ಒಂದು ಪಾಪದ ನಂಬರ್, ನನಗೆ ಇಂತಹ ಮೂಢನಂಬಿಕೆಗಳಲ್ಲಿ ನಂಬಿಕೆ ಇಲ್ಲ' ಎಂದಿದ್ದಾರೆ. ಆದರೆ, ನಿಜವಾಗಿಯೂ 13 ನಂಬರ್ ಸಮಸ್ಯಾತ್ಕವೇ?
India Latest News Live 21st May 2026ದೃಶ್ಯಂ 3 ಸಿನಿಮಾ ಹೇಗಿದೆ? ಮೋಹನ್ಲಾಲ್ ಅಭಿನಯ ಸೂಪರ್.. ಆದರೆ ದೊಡ್ಡ ಕೊರತೆ ಏನು?
ಮೋಹನ್ಲಾಲ್ ನಟನೆಯ ‘ದೃಶ್ಯಂ 3’ ಸಿನಿಮಾ ಫ್ಯಾನ್ಸ್ ನಿರೀಕ್ಷೆಗೆ ತಕ್ಕಂತಿದೆಯಾ? ಕಥೆ, ಕ್ಲೈಮ್ಯಾಕ್ಸ್, ಸಸ್ಪೆನ್ಸ್, ಜೀತು ಜೋಸೆಫ್ ನಿರ್ದೇಶನ ಮತ್ತು ನಟನೆಯ ಸಂಪೂರ್ಣ ವಿಮರ್ಶೆ ಇಲ್ಲಿದೆ.
India Latest News Live 21st May 2026Just Married ಕಾರಿನ ಒಳಗೆ ನೂತನ ಜೋಡಿ, ಪೊಲೀಸ್ರು ಚೆಕ್ ಮಾಡಿದಾಗ ಮಾತ್ರ ಸಿಕ್ಕಿದ್ದೇ ಬೇರೆ!
India Latest News Live 21st May 2026ಆಸ್ಪತ್ರೆಗೆ ದಾಖಲಾದ್ರಾ ನಟ ಸಂಜಯ್ ದತ್? ಅಮೆರಿಕದಿಂದ ಬಂದ ಸುದ್ದಿಗೆ ಅಭಿಮಾನಿಗಳು ಆತಂಕ!
ಬಾಲಿವುಡ್ ನಟ ಸಂಜಯ್ ದತ್ ಅಮೆರಿಕದಲ್ಲಿ ಹೆಲ್ತ್ ಚೆಕಪ್ ಮಾಡಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದ್ದು, ಆಪ್ತರು ಸ್ಪಷ್ಟನೆ ನೀಡಿದ್ದಾರೆ.
India Latest News Live 21st May 2026ಸ್ನೇಹಿತನ ಜೊತೆ ಹನಿಮೂನ್, ಸ್ನಾನದ ವಿಡಿಯೋ ಹಂಚಿಕೊಂಡ Bigg Boss ತೇಜಸ್ವಿ; ಕಣ್ಣು ಕಿತ್ಕೊಳಪ್ಪಾ ಎಂದ ಫ್ಯಾನ್ಸ್
ಬಿಗ್ಬಾಸ್ ಮೂಲಕ ಒಂದಾದ ಹಿಂದಿ ಕಿರುತೆರೆ ಜೋಡಿ ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್ ಸದ್ಯ ಮದುವೆಯಾಗಲು ನಿರ್ಧರಿಸಿದ್ದಾರೆ. ಆದರೆ, ಮದುವೆಗೂ ಮುನ್ನವೇ ಈ ಜೋಡಿ ಮಾರಿಷಸ್ ಪ್ರವಾಸದ ವ್ಲಾಗ್ ಹಂಚಿಕೊಂಡಿದ್ದು, ಇದರಲ್ಲಿ ಇಬ್ಬರೂ ಒಟ್ಟಿಗೆ ಸ್ನಾನ ಮಾಡುವ ದೃಶ್ಯವಿದೆ.
India Latest News Live 21st May 2026Jr NTR ಡ್ರ್ಯಾಗನ್ ಗ್ಲಿಂಪ್ಸ್ ನೋಡಿ ಅಲ್ಲು ಅರ್ಜುನ್-ರಿಷಬ್ ಶೆಟ್ಟಿ ಇಬ್ಬರೂ ಹೇಳಿದ್ದು ಒಂದೇ ಮಾತು!
ಜೂ.ಎನ್ಟಿಆರ್ ಹುಟ್ಟುಹಬ್ಬದಂದು ಬಿಡುಗಡೆಯಾದ ‘ಡ್ರ್ಯಾಗನ್’ ಗ್ಲಿಂಪ್ಸ್ಗೆ ಅಲ್ಲು ಅರ್ಜುನ್ ಮತ್ತು ರಿಷಬ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಡ್ರ್ಯಾಗನ್’ ಹಾಗೂ ‘ನಿಜವಾದ ಮ್ಯಾನ್ ಆಫ್ ಮಾಸಸ್’ ಎಂದು ಬಣ್ಣಿಸಿ ಶುಭಾಶಯ ಕೋರಿದ್ದಾರೆ.
India Latest News Live 21st May 2026ಎಕ್ಸ್ ಖಾತೆ ಬ್ಲಾಕ್ ಬೆನ್ನಲ್ಲೇ ಹೊಸ ಅಕೌಂಟ್ ತರೆದು ಮಹತ್ವದ ಸಂದೇಶ ಕೊಟ್ಟ ಕಾಕ್ರೋಚ್ ಜನತಾ ಪಾರ್ಟಿ
ಯುವ ಸಮೂಹಗಳ ಸೋಶಿಯಲ್ ಮೀಡಿಯಾ ಸಂಚಲನ ಕಾಕ್ರೋಚ್ ಜನತಾ ಪಾರ್ಟಿ ಎಕ್ಸ್ ಖಾತೆ ನಿರ್ಬಂಧಿಸಿದ ಮಾಡಿದ ಬೆನ್ನಲ್ಲೇ ಹೊಸ ಅಕೌಂಟ್ ತೆರೆಯಲಾಗಿದೆ. ಇದೇ ವೇಳೆ ಮಹತ್ವದ ಸಂದೇಶ ರವಾನಿಸಲಾಗಿದೆ.
India Latest News Live 21st May 2026ಟಾಕ್ಸಿಕ್ ಬೆಡಗಿಯ ಹೊಸ ಪೋಸ್ಟ್ ವೈರಲ್ - ಫೋಟೋದಲ್ಲಿ ಕಾಣಿಸಿದ್ದು ಮಗಳ ಮುಖವಲ್ಲ, ಆದರೆ..
ನಟಿ ಕಿಯಾರಾ ಅಡ್ವಾಣಿ ತಮ್ಮ ಮಗಳು ಸಾರಾಯಾಳ ಅಪರೂಪದ ಫೋಟೋವೊಂದನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ಫ್ಲೈಟ್ನಲ್ಲಿ ತೆಗೆದ ಈ ಫೋಟೋದಲ್ಲಿ, ಮಗುವಿನ ಪುಟ್ಟ ಕೈ ಆಟಿಕೆಯೊಂದನ್ನು ಹಿಡಿಯಲು ಚಾಚಿದೆ. ಕಿಯಾರಾ, ಪತಿ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಮಗಳು ಸದ್ಯ ಫ್ಯಾಮಿಲಿ ವೆಕೇಷನ್ನಲ್ಲಿದ್ದಾರೆ.
India Latest News Live 21st May 2026IPL ಪ್ಲೇ ಆಫ್ಗೂ ಮೊದಲೇ ಆರ್ಸಿಬಿಗೆ ಗುಡ್ ನ್ಯೂಸ್! ರಣಬೇಟೆಗಾರನ ಸ್ವಾಗತಕ್ಕೆ ಸಜ್ಜಾದ ಬೆಂಗಳೂರು ಫ್ರಾಂಚೈಸಿ
ಬೆಂಗಳೂರು: 2026ರ ಐಪಿಎಲ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ತಂಡವಾಗಿ ಪ್ಲೇ ಆಫ್ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಇದರ ಬೆನ್ನಲ್ಲೇ ಬೆಂಗಳೂರು ತಂಡಕ್ಕೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದ್ದು, ಫ್ರಾಂಚೈಸಿಯು ರಣಬೇಟೆಗಾರನ ಸ್ವಾಗತಕ್ಕೆ ಸಜ್ಜಾಗಿದೆ.
India Latest News Live 21st May 2026Jr. NTR Magic - ಸೃಷ್ಟಿಕರ್ತ ರೆಸ್ಟ್ ತಗೊಂಡಾಗ ಹುಟ್ಟಿದ ಕ್ರೂರಿ 'ಡ್ರ್ಯಾಗನ್'.. ಕಡುಗತ್ತಲೆ ಸಾಮ್ರಾಜ್ಯದಲ್ಲೇನು ನಡೆಯುತ್ತೆ?!
ಪ್ರಶಾಂತ್ ನೀಲ್ ಮತ್ತೊಮ್ಮೆ ಭಾರತೀಯ ಚಿತ್ರರಂಗ ಬೆರಗಾಗುವಂತಹ ಒಂದು ಕರಾಳ ಅಫೀ*ಮು ಲೋಕವನ್ನ ಸೃಷ್ಟಿ ಮಾಡಿದ್ದಾರೆ. ಜೂನಿಯರ್ ಎನ್.ಟಿ.ಆರ್ ರಗಡ್ ಲುಕ್, 1967ರ ಕಾಲಘಟ್ಟದ ಕಥೆ, ಕ್ರೂರ ವಿಲನ್ಗಳ ಅಟ್ಟಹಾಸ ಹಾಗೂ ನಮ್ಮ ರುಕ್ಮಿಣಿ ವಸಂತ್ ಪ್ರೆಸೆನ್ಸ್...
India Latest News Live 21st May 2026ಸಾರಾ ತೆಂಡೂಲ್ಕರ್ ಖಡಕ್ ಉತ್ತರಕ್ಕೆ ಪಾಪರಾಝಿ ಪೋಸ್ಟ್ ಡಿಲೀಟ್ - ಅಸಲಿಗೆ ಆಗಿದ್ದೇನು?
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ, ತಮಗೆ 'ಮೋಟಿ ವಾಲಿ ಸಾರಾ' (ದಪ್ಪ ಇರುವ ಸಾರಾ) ಎಂದು ಕಾಮೆಂಟ್ ಮಾಡಿದ ಮುಂಬೈ ಪಾಪರಾಝಿ ವಿರುದ್ಧ ಕಿಡಿಕಾರಿದ್ದಾರೆ. ಸಾರಾ ಅವರ ಖಡಕ್ ಉತ್ತರಕ್ಕೆ ಹೆದರಿದ ಆತ ಪೋಸ್ಟ್ ಡಿಲೀಟ್ ಮಾಡಿದ್ದಾನೆ.