ತೇಜಸ್ ಪತನ, ಕೊನೇ ಕ್ಷಣದವರೆಗೆ ನಿಯಂತ್ರಣಕ್ಕೆ ಪ್ರಯತ್ನಿಸಿದ ವಿಂಗ್ ಕಮಾಂಡರ್ ನಮಾಂಶ್ ಮೃತ, ವೃತ್ತಿಪರತೆ, ತಾಳ್ಮೆಗೆ ಹೆಸರುವಾಸಿಯಾಗಿರುವ ಯುವ ಪೈಲೆಟ್ ದುರಂತದಲ್ಲಿ ಅಂತ್ಯಕಂಡಿದ್ದಾರೆ.
- Home
- News
- India News
- India Latest News Live: ತೇಜಸ್ ಪತನ, ಕೊನೇ ಕ್ಷಣದವರೆಗೆ ನಿಯಂತ್ರಣಕ್ಕೆ ಪ್ರಯತ್ನಿಸಿದ ವಿಂಗ್ ಕಮಾಂಡರ್ ನಮಾಂಶ್ ಮೃತ
India Latest News Live: ತೇಜಸ್ ಪತನ, ಕೊನೇ ಕ್ಷಣದವರೆಗೆ ನಿಯಂತ್ರಣಕ್ಕೆ ಪ್ರಯತ್ನಿಸಿದ ವಿಂಗ್ ಕಮಾಂಡರ್ ನಮಾಂಶ್ ಮೃತ

ನವದೆಹಲಿ: ಭಾರತ-ಪಾಕ್ ನಡುವಿನ ಸಂಘರ್ಷವನ್ನು ನಿಲ್ಲಿಸಿದ್ದು ತಾನೇ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಂತರವಾಗಿ ಸುಳ್ಳು ಹೇಳುತ್ತಿರುವ ನಡುವೆಯೇ, ಏ.22ರಂದು ನಡೆದ ಪಹಲ್ಲಾ೦ ದಾಳಿ ಭಾರತದೊಳಗಿನ ಬಂಡಾಯದಿಂದ ನಡೆದದ್ದು ಮತ್ತು ಬಳಿಕ ಉಭಯ ದೇಶಗಳ ನಡುವೆ ಯುದ್ಧದಲ್ಲಿ ಪಾಕಿಸ್ತಾನವೇ ಮೇಲುಗೈ ಸಾಧಿಸಿತ್ತು ಎಂದು ಅಮೆರಿಕ ಆಘಾತಕಾರಿ ವರದಿಯೊಂದನ್ನು ಬಿಡುಗಡೆ ಮಾಡಿದೆ. ಆ ಬೆನ್ನಲ್ಲೇ ವರದಿ ಕುರಿತು ಕಳವಳ ವ್ಯಕ್ತಪಡಿಸಿ ರುವ ಕಾಂಗ್ರೆಸ್, ಇದು ಪ್ರಧಾನಿ ಮೋದಿ ಅವರ ರಾಜತಾಂತ್ರಿಕತೆ ವೈಫಲ್ಯ ಎಂದು ಕಿಡಿಕಾರಿದೆ. ಅಮೆರಿಕ-ಚೀನಾ ಆರ್ಥಿಕ, ಭದ್ರತಾ ಪರಿಶೀಲನಾ ಆಯೋಗದಿಂದ ಸಂಸತ್ತಿಗೆ ವಾರ್ಷಿಕ ವರದಿ ಸಲ್ಲಿಕೆಯಾಗಿದೆ. ಪಹಲ್ಲಾಂನಲ್ಲಿ ಆಗಿದ್ದು ಬಂಡಾಯ ದಾಳಿ ಅದಕ್ಕೆ ಭಾರತ ಪ್ರತಿಕ್ರಿಯಿಸಿದ್ದರಿಂದ ಪಾಕಿಸ್ತಾನದ ಜೊತೆಗೆ ಯುದ್ಧ, ಈ ಯುದ್ಧದಲ್ಲಿ ಚೀನಾದ ಪಾತ್ರ ಜಾಗತಿಕವಾಗಿ ಗಮನ ಸೆಳೆದಿದೆ. ಚೀನಾದ ಅಸ್ತ್ರ ಗಳನ್ನು ಪಾಕಿಸ್ತಾನ ಬಳಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
India Latest News Liveತೇಜಸ್ ಪತನ, ಕೊನೇ ಕ್ಷಣದವರೆಗೆ ನಿಯಂತ್ರಣಕ್ಕೆ ಪ್ರಯತ್ನಿಸಿದ ವಿಂಗ್ ಕಮಾಂಡರ್ ನಮಾಂಶ್ ಮೃತ
India Latest News Liveಸೂರ್ಯವಂಶಿಗೆ ಬ್ಯಾಟಿಂಗ್ ಇಲ್ಲ, ಸೂಪರ್ ಓವರ್ನಲ್ಲಿ ರನ್ಗಳಿಸದೇ ಹೊರಬಿದ್ದ ಭಾರತ ವಿರುದ್ಧ ಭಾರಿ ಟೀಕೆ
ಸೂರ್ಯವಂಶಿಗೆ ಬ್ಯಾಟಿಂಗ್ ಇಲ್ಲ, ಸೂಪರ್ ಓವರ್ನಲ್ಲಿ ರನ್ಗಳಿಸದೇ ಹೊರಬಿದ್ದ ಭಾರತ ವಿರುದ್ಧ ಭಾರಿ ಟೀಕೆ ಎದುರಾಗಿದೆ. ಉತ್ತಮ ಸ್ಟ್ರೈಕ್ ರೇಟ್ ಇರುವ ಸೂರ್ಯವಂಶಿಗೆ ಬ್ಯಾಟಿಂಗ್ ಕೊಡಲಿಲ್ಲ, ಇತರರು ಒಂದು ರನ್ ಕೂಡ ಮಾಡಲಿಲ್ಲ, ಮ್ಯಾನೇಜ್ಮೆಂಟ್ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.
India Latest News Liveಸಂಸ್ಕೃತ "ಸತ್ತ ಭಾಷೆ" ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್ ಹೊಸ ವಿವಾದ! ಬಿಜೆಪಿ ಕೆಂಡಾಮಂಡಲ
ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್, ಸಂಸ್ಕೃತವನ್ನು 'ಸತ್ತ ಭಾಷೆ' ಎಂದು ಕರೆದು, ಭಾಷಾ ಅನುದಾನದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ ಸಂಸ್ಕೃತಕ್ಕೆ ₹2,400 ಕೋಟಿ ನೀಡಲಾಗಿದ್ದು, ತಮಿಳಿಗೆ ಕೇವಲ ₹150 ಕೋಟಿ ನೀಡಲಾಗಿದೆ ಎಂದು ಆರೋಪಿಸಿದರು.
India Latest News Live100 ಕೋಟಿ ರೂಪಾಯಿ ಅನುದಾನ, ಗೌತಮ್ ಅದಾನಿ ಹಾಡಿ ಹೊಗಳಿದ ಪಾಕಿಸ್ತಾನ ಮಾಜಿ ಕ್ರಿಕೆಟಿಗ
100 ಕೋಟಿ ರೂಪಾಯಿ ಅನುದಾನ, ಗೌತಮ್ ಅದಾನಿ ಹಾಡಿ ಹೊಗಳಿದ ಪಾಕಿಸ್ತಾನ ಮಾಜಿ ಕ್ರಿಕೆಟಿಗ, ಗೌತಮ್ ಅಧಾನಿ ನಿರ್ಧಾರ ಘೋಷಿಸುತ್ತಿದ್ದಂತೆ ಧಾನೀಶ್ ಕನೇರಿಯಾ ಪುಳಕಿತರಾಗಿದ್ದಾರೆ. ಅಷ್ಟಕ್ಕೂ ಪಾಕ್ ಮಾಜಿ ಕ್ರಿಕೆಟಿಗ ಅದಾನಿಗೆ ಮೆಚ್ಚುಗೆ ಸೂಚಿಸಿದ್ದೇಕೆ?
India Latest News Liveಮುಟ್ಟಲು ಬಿಡು ಸಾಕು, ಹೀರೋ ಮಾಡುವೆ - Bigg Boss ಸ್ಪರ್ಧಿಯ ಕಾಸ್ಟಿಂಗ್ ಕೌಚ್ನ ಬೆಚ್ಚಿಬೀಳೋ ಸ್ಟೋರಿ!
ಮೀಟೂ ಅಭಿಯಾನವು ನಟಿಯರಷ್ಟೇ ಅಲ್ಲ, ನಟರ ಮೇಲೂ ಆದ ಲೈಂ*ಗಿಕ ದೌರ್ಜನ್ಯವನ್ನು ಬೆಳಕಿಗೆ ತಂದಿದೆ. ಹಿಂದಿ ಕಿರುತೆರೆ ನಟ ಹಾಗೂ ಬಿಗ್ ಬಾಸ್ ಖ್ಯಾತಿಯ ಅಂಕಿತ್ ಗುಪ್ತಾ, ಎದುರಾದ ಕಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದಾರೆ. ನಟನಾಗಲು 'ರಾಜಿ' ಮಾಡಿಕೊಳ್ಳಲು ಕೇಳಿ, ಅದಕ್ಕೆ ಒಪ್ಪದಿದ್ದಾಗ ಆಗಿದ್ದೇನು?
India Latest News Liveತೇಜಸ್ ಯುದ್ಧ ವಿಮಾನ ಪತನದಲ್ಲಿ ಪೈಲೈಟ್ ಸಾವು, ಕೆಲೆವೇ ಸೆಕೆಂಡ್ಗಳಲ್ಲಿ ನಡೆಯಿತು ದುರಂತ
ತೇಜಸ್ ಯುದ್ಧ ವಿಮಾನ ಪತನದಲ್ಲಿ ಪೈಲೈಟ್ ಸಾವು, ಕೆಲೆವೇ ಸೆಕೆಂಡ್ಗಳಲ್ಲಿ ನಡೆಯಿತು ದುರಂತ, ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ. ವಿಶ್ವದ ಅತ್ಯುತ್ತಮ ಯುದ್ಧ ವಿಮಾನ ಪೈಕಿ ತೇಜಸ್ ಕೂಡ ಸ್ಥಾನ ಪಡೆದಿದೆ. ಆದರೂ ದುರಂತ ಹೇಗಾಯ್ತು
India Latest News Live13 ವರ್ಷದ ಬಳಿಕ ವಿಮಾನ ಮಾರಿದ ಏರ್ ಇಂಡಿಯಾ, ಪ್ಲೇನ್ಗೆ ತಾನೇ ಮಾಲೀಕ ಅನ್ನೋದು ಕೂಡ ಗೊತ್ತಿರಲಿಲ್ಲ!
ಏರ್ ಇಂಡಿಯಾ ತನ್ನ ಬಳಿ ಇದ್ದ ಬೋಯಿಂಗ್ 737 ವಿಮಾನವನ್ನು 13 ವರ್ಷಗಳ ಬಳಿಕ ಮಾರಾಟ ಮಾಡಿದೆ. ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಈ ವಿಮಾನದ ಮಾಲೀಕತ್ವದ ಬಗ್ಗೆ ಏರ್ ಇಂಡಿಯಾಗೆ ಇತ್ತೀಚಿನವರೆಗೂ ತಿಳಿದಿರಲಿಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ.
India Latest News Liveನಿಮ್ಮ ಗುಟ್ಟು ರಟ್ಟಾಗಬಾರದು ಅಂತಂದ್ರೆ ಮೊದ್ಲು ಸ್ಮಾರ್ಟ್ಫೋನ್ನಲ್ಲಿ ಈ ಸೆಟ್ಟಿಂಗ್ಸ್ ಕೂಡಲೇ ಆಫ್ ಮಾಡಿ!
ನಿಮ್ಮ ಸ್ಮಾರ್ಟ್ಫೋನ್ ನಿಮ್ಮ ಸಂಭಾಷಣೆಗಳನ್ನು ಆಲಿಸಿ, ವೈಯಕ್ತಿಕ ಜಾಹೀರಾತುಗಳನ್ನು ತೋರಿಸುತ್ತದೆ. ಇದು ಖಾಸಗಿ ಮಾಹಿತಿಗೆ ಅಪಾಯವನ್ನುಂಟುಮಾಡಬಹುದು. ಈ ಲೇಖನದಲ್ಲಿ, ನಿಮ್ಮ ಡೇಟಾವನ್ನು ರಕ್ಷಿಸಲು ಮತ್ತು ಜಾಹೀರಾತುಗಳನ್ನು ನಿಲ್ಲಿಸಲು ಬೇಕಾದ ಪ್ರಮುಖ ಸೆಟ್ಟಿಂಗ್ಸ್ಗಳನ್ನು ಬದಲಾಯಿಸುವ ವಿಧಾನ ಇಲ್ಲಿದೆ.
India Latest News Liveವ್ಯಾಟ್ಸಾಪ್ಗೆ ಠಕ್ಕರ್, ಚಾಟ್ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?
ವ್ಯಾಟ್ಸಾಪ್ಗೆ ಠಕ್ಕರ್, ಚಾಟ್ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?, ಗ್ರೂಪ್ ಚಾಟ್ನಿಂದ ವೈಯುಕ್ತಿಕ ಚಾಟ್ಗೆ ಯಾವುದೇ ಅಡ್ಡಿಯಾಗಲ್ಲ. ವ್ಯಾಟ್ಸಾಪ್ನಲ್ಲಿರುವ ಗ್ರೂಪ್ನಂತೆ ಚಾಟ್ಜಿಪಿಟಿ ಕೂಡ ಹೊಸ ಫೀಚರ್ ನೀಡುತ್ತಿದೆ.
India Latest News LivePhotos - ದುಬೈನಲ್ಲಿ ತೇಜಸ್ ಯುದ್ಧವಿಮಾನ ಪತನಗೊಂಡ ದುರಂತ ಚಿತ್ರಗಳು..
India Latest News Liveಅಂಬಾನಿಗಿಂತಲೂ ಅದ್ಧೂರಿ ಮದುವೆ! ಭಾರತಕ್ಕೆ ಟ್ರಂಪ್ ಕುಟುಂಬ - ಯಾರೀ ಕುಬೇರ- ಇಲ್ಲಿವೆ ಫೋಟೋಗಳು
India Latest News Liveನಾನು ಕಪ್ಪು ಮಗುವಿನ ಬಣ್ಣ ಹೇಗೆ ಕೆಂಪು - ಅನುಮಾನದಿಂದ ಬಾಣಂತಿ ಕತೆ ಮುಗಿಸಿದ ಪತಿ
husband kills wife: ಬಿಹಾರದ ಕಾತಿಹಾರ್ ಜಿಲ್ಲೆಯಲ್ಲಿ, ತಾನು ಕಪ್ಪಗಿದ್ದು ಮಗು ಕೆಂಪಾಗಿ ಜನಿಸಿದ್ದಕ್ಕೆ ಪತ್ನಿಯ ಶೀಲ ಶಂಕಿಸಿದ ಪತಿಯೊಬ್ಬ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ನೆರೆಹೊರೆಯವರ ಅಪಹಾಸ್ಯದಿಂದ ಮನನೊಂದು ಪತಿ ಈ ಕೃತ್ಯವೆಸಗಿದ್ದಾನೆ.
India Latest News LiveDehli Bomb Blast - ಅಲ್ ಫಲಾಹ್ ವಿವಿ ಅಧ್ಯಕ್ಷನಿಗೆ ಒಕ್ಕರಿಸಿತು ಗ್ರಹಚಾರ! ನಾಲ್ಕು ಅಂತಸ್ತಿನ ಮನೆಗೆ ಬಂತು ಕುತ್ತು
ಶಂಕಿತ ಉಗ್ರರ ತಾಣವಾಗಿದ್ದ ಮಧ್ಯಪ್ರದೇಶದ ಅಲ್ ಫಲಾಹ್ ವಿವಿ ಅಧ್ಯಕ್ಷ ಮೊಹಮ್ಮದ್ ಜವಾದ್ ಸಿದ್ದಿಕಿ ಅವರ ನಾಲ್ಕಂತಸ್ತಿನ ಮನೆಗೆ ಮಹೌ ಕಂಟೋನ್ಮೆಂಟ್ ಮಂಡಳಿ ನೆಲಸಮ ನೋಟಿಸ್ ನೀಡಿದೆ. ಅಕ್ರಮ ನಿರ್ಮಾಣದ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದ್ದು, ಇದೇ ವೇಳೆ ವಂಚನೆ ಪ್ರಕರಣದಲ್ಲಿ ಸಹೋದರನನ್ನೂ ಬಂಧಿಸಲಾಗಿದೆ.
India Latest News Liveದುಬೈ ಏರ್ಶೋಗೆ ತೆರಳಿದ್ದ ತೇಜಸ್ ಯುದ್ಧವಿಮಾನ ಇಂಧನ ಲೀಕ್ ಸುದ್ದಿ ನಿರಾಕರಿಸಿದ್ದ ಕೇಂದ್ರ ಸರ್ಕಾರ, ಅದರ ಬೆನ್ನಲ್ಲೇ ದುರ್ಘಟನೆ
Tejas Mk1 Aircraft: ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋದ ಸತ್ಯ-ಪರಿಶೀಲನಾ ಘಟಕದ ಪ್ರಕಾರ, ಯಾವುದೇ ಹಂತದಲ್ಲೂ ಫೈಟರ್ ಜೆಟ್ನಿಂದ ತೈಲ ಸೋರಿಕೆಯಾಗಿಲ್ಲ ಎಂದು ತಿಳಿಸಿತ್ತು. ಆದರೆ, ಈ ಸ್ಪಷ್ಟನೆಯ ಬೆನ್ನಲ್ಲೇ ವಿಮಾನ ಪತನಗೊಂಡು ಪೈಲಟ್ ಸಾವನ್ನಪ್ಪಿದ್ದಾರೆ.
India Latest News Liveಭಾರತದ ಹೊಸ 4 ಕಾರ್ಮಿಕ ಸಂಹಿತೆ ಜಾರಿಗೆ, ಕನಿಷ್ಠ ವೇತನ, 1 ವರ್ಷದದಲ್ಲಿ ಗ್ರಾಚ್ಯುಟಿ, 40 ಕೋಟಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ
ಕೇಂದ್ರ ಸರ್ಕಾರವು 29 ಹಳೆಯ ಕಾರ್ಮಿಕ ಕಾನೂನುಗಳನ್ನು ಬದಲಿಸಿ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರುತ್ತಿದೆ. ಈ ಸುಧಾರಣೆಗಳು ಕಾರ್ಮಿಕರ ವೇತನ, ಸಾಮಾಜಿಕ ಭದ್ರತೆ, ಮತ್ತು ಸುರಕ್ಷತೆಯನ್ನು ಬಲಪಡಿಸುವ ಗುರಿ ಹೊಂದಿದ್ದು, ಗಿಗ್ ಕೆಲಸಗಾರರನ್ನು ಮೊದಲ ಬಾರಿಗೆ ಕಾನೂನಿನ ವ್ಯಾಪ್ತಿಗೆ ತರಲಿದೆ.
India Latest News Liveರ್ಯಾಪಿಡೋ ಚಾಲಕನ ತಿಂಗಳ ಆದಾಯ 1 ಲಕ್ಷ ರೂ, ಇದು ಹೇಗೆ ಸಾಧ್ಯ? ಇಲ್ಲಿದೆ ಸ್ಪೂರ್ತಿಯ ಘಟನೆ
ರ್ಯಾಪಿಡೋ ಚಾಲಕನ ತಿಂಗಳ ಆದಾಯ 1 ಲಕ್ಷ ರೂ, ಇದು ಹೇಗೆ ಸಾಧ್ಯ? ಇಲ್ಲಿದೆ ಸ್ಪೂರ್ತಿಯ ಘಟನೆ ಇದೀಗ ಭಾರಿ ಸದ್ದು ಮಾಡುತ್ತಿದೆ. ರ್ಯಾಪಿಡೋ ಚಾಲಕನ ಆದಾಯ, ಆತನ ಜೀವನ ನಿರ್ವಹಣೆ, ಖುಷಿ ಖುಷಿಯಾಗಿ ಬದುಕು ಸಾಗಿಸುವ ದಾರಿ ಇದೀಗ ಹಲವರಿಗೆ ಸ್ಪೂರ್ತಿಯಾಗಿದೆ.
India Latest News Liveವಿವಾಹೇತರ ಸಂಬಂಧ ಗಂಡನಿಗೆ ತಿಳಿದ ನಂತರ ರೇ*ಪ್ ಕೇಸ್ - ಕೋರ್ಟ್ ಕಟಕಟೆ ಏರಿದ ಅಜ್ಜ ಅಜ್ಜಿ ಲವ್ ಸ್ಟೋರಿ
ಅಜ್ಜ ಅಜ್ಜಿಯ ಲವ್ ಸ್ಟೋರಿಯೊಂದು ಕೋರ್ಟ್ ಮೆಟ್ಟಿಲೇರಿದೆ. ಅಜ್ಜ ಅಜ್ಜಿಯ ಪ್ರೇಮ ಪ್ರಕರಣದ ವಿಚಾರ ಅಜ್ಜಿಯ ಗಂಡನಿಗೆ ಗೊತ್ತಾಗುತ್ತಿದ್ದಂತೆ ಅಜ್ಜಿಯ ಪ್ರೇಮಿಯ ವಿರುದ್ಧ ಅತ್ಯಾ*ಚಾರದ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ಈಗ ಕೋರ್ಟ್ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿದೆ.
India Latest News Liveಎರಡನೇ ಟೆಸ್ಟ್ಗೂ ಮುನ್ನ ದಕ್ಷಿಣ ಆಫ್ರಿಕಾಗೆ ಬಿಗ್ ಶಾಕ್; ಮಾರಕ ವೇಗಿ ಎರಡನೇ ಮ್ಯಾಚ್ನಿಂದಲೂ ಔಟ್!
ಭಾರತ ವಿರುದ್ಧದ ಎರಡನೇ ಟೆಸ್ಟ್ಗೂ ಮುನ್ನ, ಸ್ಟಾರ್ ವೇಗಿ ಕಗಿಸೊ ರಬಾಡ ಗಾಯದ ಕಾರಣದಿಂದ ಹೊರಗುಳಿದಿರುವುದು ದಕ್ಷಿಣ ಆಫ್ರಿಕಾಗೆ ಹಿನ್ನಡೆಯಾಗಿದೆ. ಗಾಯಗೊಂಡಿರುವ ನಾಯಕ ಶುಭಮನ್ ಗಿಲ್ ಬದಲಿಗೆ ರಿಷಭ್ ಪಂತ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
India Latest News Liveಚಿಕಿತ್ಸೆಗೆ ಟೈಮೇ ಇಲ್ಲ, ಸರ್ಕಾರಿ ಆಸ್ಪತ್ರೆಯಲ್ಲೇ ಗರ್ಲ್ಫ್ರೆಂಡ್ ಜೊತೆ ವೈದ್ಯ ಸಿದ್ದಿಕಿ ಮಸ್ತ ಡ್ಯಾನ್ಸ್
ಚಿಕಿತ್ಸೆಗೆ ಟೈಮೇ ಇಲ್ಲ, ಸರ್ಕಾರಿ ಆಸ್ಪತ್ರೆಯಲ್ಲೇ ಗರ್ಲ್ಫ್ರೆಂಡ್ ಜೊತೆ ವೈದ್ಯ ಸಿದ್ದಿಕಿ ಮಸ್ತ ಡ್ಯಾನ್ಸ್ , ಕರ್ತವ್ಯದಲ್ಲೇ ವಕಾರ್ ಸಿದ್ದಿಕಿ ಗೆಳತಿ ಜೊತೆ ಡ್ಯಾನ್ಸ್ ಆಡುತ್ತಾ, ಬಾಲಿವುಡ್ ರೇಂಜ್ಗೆ ಸಮಯ ಕಳೆಯುತ್ತಿದ್ದಾನೆ. ಈತನ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.
India Latest News LiveBreaking - ದುಬೈ ಏರ್ಶೋನಲ್ಲಿ ತೇಜಸ್ ಯುದ್ಧವಿಮಾನ ಪತನ, ಪೈಲಟ್ ಸಾವಿನ ಶಂಕೆ?
ಯುದ್ಧವಿಮಾನದಿಂದ ಪೈಲಟ್ ಹೊರಬಂದಿದ್ದಾರೋ ಇಲ್ಲವೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಭಾರತೀಯ ವಾಯುಪಡೆಯಿಂದ ಈ ಬಗ್ಗೆ ಅಧಿಕೃತ ಹೇಳಿಕೆಗಾಗಿ ಕಾಯಲಾಗುತ್ತಿದೆ.