10:52 PM (IST) May 05

India Latest News 5 May 2026'ಭಾರತದ ರಾಜಕೀಯವನ್ನೇ ನಡುಗಿಸಿದ ಮಿರಾಕಲ್‌..' ತಮಿಳುನಾಡು ಚುನಾವಣಾ ಫಲಿತಾಂಶದ ಬಗ್ಗೆ ವಿಜಯ್ ಭಾವುಕ ನುಡಿ

ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ತನ್ನ ಚೊಚ್ಚಲ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಜಯ ಸಾಧಿಸಿದೆ. ಈ 'ಪರಿವರ್ತನೆಯ ಜನಾದೇಶ'ಕ್ಕಾಗಿ ವಿಜಯ್ಜ ನರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Read Full Story
10:40 PM (IST) May 05

India Latest News 5 May 2026ತಮಿಳುನಾಡನ್ನು ಗೆದ್ದ ತಕ್ಷಣ ಚಿನ್ನದ ಸುರಿಮಳೆ? 7 ಟನ್​ ಬಂಗಾರ ಫ್ರೀ ಕೊಡ್ತಾರಾ ನಟ ದಳಪತಿ ವಿಜಯ್‌

ದಳಪತಿ ವಿಜಯ್ ನೇತೃತ್ವದ TVK ಪಕ್ಷವು ತಮಿಳುನಾಡು ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಇತಿಹಾಸ ನಿರ್ಮಿಸಿದೆ. ಈ ಗೆಲುವಿನ ಬೆನ್ನಲ್ಲೇ, ವಿಜಯ್ ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಮಹಿಳೆಯರಿಗೆ 7 ಟನ್ ಚಿನ್ನ ಸೇರಿದಂತೆ ಹಲವಾರು ಉಚಿತ ಕೊಡುಗೆಗಳನ್ನು ನೀಡಬೇಕಾದ ಸವಾಲಿನ ಬಗ್ಗೆ ಚರ್ಚೆ ಶುರುವಾಗಿದೆ

Read Full Story
10:19 PM (IST) May 05

India Latest News 5 May 2026ನಿತ್ಯಾನಂದನ ಆಶೀರ್ವಾದ ವಿಜಯ್‌ ಮೇಲೆ ಎಂದಿಗೂ ಇರುತ್ತದೆ, ಕೈಲಾಸದಿಂದ ದಳಪತಿಗೆ ಬಂತು ಅಭಿನಂದನೆ!

ತಲೆಮರೆಸಿಕೊಂಡಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ, ತನ್ನ 'ಕೈಲಾಸ' ದ್ವೀಪದಿಂದ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ಚುನಾವಣಾ ಪ್ರದರ್ಶನಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾನೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.

Read Full Story
09:27 PM (IST) May 05

India Latest News 5 May 2026Thalapathy Vijay - ಗೆಲುವಿನ ಬಳಿಕ ವಿಜಯ್ ಫಸ್ಟ್‌ ರಿಯಾಕ್ಷನ್‌; ಮೋದಿ, ರಾಹುಲ್ ಗಾಂಧಿ ಪ್ರತಿಕ್ರಿಯೆಗೆ ದಳಪತಿ ಹೇಳಿದ್ದೇನು?

ಯಾವುದೇ ದೊಡ್ಡ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳದೆ, ಏಕಾಂಗಿಯಾಗಿ ಹೋರಾಡಿ ಗೆದ್ದಿರುವ ಈ 'ದಳಪತಿ'ಯ ಪಯಣ ಈಗ ಹೊಸ ದಿಕ್ಕಿನತ್ತ ಸಾಗಿದೆ. ಒಟ್ಟಿನಲ್ಲಿ, ತಮಿಳುನಾಡು ಈಗ ಕೇವಲ ಸಿನಿಮಾದಲ್ಲಿ ಮಾತ್ರವಲ್ಲ, ರಿಯಲ್ ಲೈಫ್‌ನಲ್ಲೂ ತನ್ನ 'ಸೂಪರ್ ಸ್ಟಾರ್' ಅನ್ನು ಸಿಎಂ ಕುರ್ಚಿಯ ಮೇಲೆ ನೋಡಲು ಸಜ್ಜಾಗಿದೆ!

Read Full Story
08:51 PM (IST) May 05

India Latest News 5 May 2026ರಾಹುಲ್ ಗಾಂಧಿ ಬಿಜೆಪಿಗೆ ​ಬಂದ್ರೆ ಮದ್ವೆಯಾಗ್ತಾರಂತೆ ಕಂಗನಾ ರಣಾವತ್​? ನಟಿಯ ಪ್ರತಿಕ್ರಿಯೆ ವೈರಲ್​

ನಟಿ ಮತ್ತು ಸಂಸದೆ ಕಂಗನಾ ರಣಾವತ್, ರಾಹುಲ್ ಗಾಂಧಿ ಕುರಿತು ತಾವು ಹೇಳಿಕೆ ನೀಡಿದ್ದಾರೆ ಎನ್ನಲಾದ ನಕಲಿ ಪೋಸ್ಟ್ ವಿರುದ್ಧ ಕಿಡಿಕಾರಿದ್ದಾರೆ. ಈ ವೈರಲ್ ಸುದ್ದಿಯನ್ನು ನೀಚತನದ್ದು ಎಂದು ಕರೆದಿರುವ ಅವರು, ಸುಳ್ಳು ಹರಡುವವರಿಗೆ ಎಚ್ಚರಿಕೆ ನೀಡಿದ್ದಾರೆ. 

Read Full Story
08:36 PM (IST) May 05

India Latest News 5 May 2026ನನ್ನ ಪಾಲಿಗೆ ನೀನು ಯಾವಾಗಲೂ.. - ಫ್ಯಾಮಿಲಿ ಫೋಟೋ ಹಂಚಿಕೊಂಡು ನಟಿ ಯಾಮಿ ಹೇಳಿದ್ದೇನು?

ಬಾಲಿವುಡ್ ನಟಿ ಯಾಮಿ ಗೌತಮ್ ತಮ್ಮ ಕಿರಿಯ ಸಹೋದರ ಓಜಸ್ ಗೌತಮ್ ಅವರ ಹುಟ್ಟುಹಬ್ಬಕ್ಕೆ ಒಂದು ಮುದ್ದಾದ ಸಂದೇಶದೊಂದಿಗೆ ಮನಸಾರೆ ಶುಭ ಕೋರಿದ್ದಾರೆ. ಯಾಮಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ..

Read Full Story
08:21 PM (IST) May 05

India Latest News 5 May 2026ಐಟಿ ದೈತ್ಯ ಕಾಗ್ನಿಜೆಂಟ್‌ನಿಂದ 15,000 ಟೆಕ್ಕಿಗಳ ಲೇಆಫ್‌ಗೆ ಸಿದ್ದತೆ, ಇದರಲ್ಲಿ ಭಾರತೀಯರೇ ಹೆಚ್ಚು!

ಐಟಿ ದೈತ್ಯ ಕಾಗ್ನಿಜೆಂಟ್ ತನ್ನ 'ಪ್ರಾಜೆಕ್ಟ್ ಲೀಪ್' ಅಡಿಯಲ್ಲಿ ಜಾಗತಿಕವಾಗಿ 15,000 ಉದ್ಯೋಗಿಗಳನ್ನು ವಜಾಗೊಳಿಸಲು ಸಿದ್ಧತೆ ನಡೆಸಿದೆ, ಇದರಲ್ಲಿ ಹೆಚ್ಚಿನ ಪಾಲು ಭಾರತೀಯರದ್ದಾಗಿದೆ.

Read Full Story
08:16 PM (IST) May 05

India Latest News 5 May 2026ಕಾರು ಅಪಘಾತದಲ್ಲಿ ನಟ ಜೀವಾ ತಂದೆ, ಖ್ಯಾತ ನಿರ್ಮಾಪಕ ಆರ್‌ಬಿ ಚೌಧರಿ ನಿಧನ - ಚಿತ್ರರಂಗಕ್ಕೆ ಶಾಕ್!

ದಳಪತಿ ವಿಜಯ್ ಅಭಿನಯದ 'ಪೂವೆ ಉನಕ್ಕಾಗ' ಚಿತ್ರದ ನಿರ್ಮಾಪಕ ಹಾಗೂ ನಟ ಜೀವಾ ಅವರ ತಂದೆ ಆರ್‌ಬಿ ಚೌಧರಿ ಅವರು ಕಾರು ಅಪಘಾತದಲ್ಲಿ ನಿಧನರಾದ ಘಟನೆ ಚಿತ್ರರಂಗಕ್ಕೆ ದೊಡ್ಡ ಆಘಾತ ನೀಡಿದೆ.

Read Full Story
07:23 PM (IST) May 05

India Latest News 5 May 2026Sukanta Majumdar - TMC ರೀತಿ ವರ್ತಿಸಬೇಡಿ, ನಾವು ರಾಮನ ಭಕ್ತರು, ಬಿಜೆಪಿ ಕಾರ್ಯಕರ್ತರಿಗೆ ಕೇಂದ್ರ ಸಚಿವ ಎಚ್ಚರಿಕೆ!

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ಟಿಎಂಸಿ ಕಚೇರಿಗಳ ಮೇಲೆ ದಾಳಿ ನಡೆದಿದೆ. ಈ ಹಿನ್ನೆಲೆಯಲ್ಲಿ, ಕೇಂದ್ರ ಸಚಿವ ಸುಕಾಂತ ಮಜುಂದಾರ್ ತಮ್ಮ ಕಾರ್ಯಕರ್ತರಿಗೆ ತಾಳ್ಮೆಯಿಂದಿರಲು ಕರೆ ನೀಡಿದ್ದು, 'ನಾವು ರಾಮನ ಭಕ್ತರು, ರಾವಣರಾಗುವುದು ಬೇಡ' ಎಂದು ಹೇಳಿದ್ದಾರೆ. ಅಲ್ಲದೆ, ಶೀಘ್ರದಲ್ಲೇ ಸರ್ಕಾರ ರಚನೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
Read Full Story
06:53 PM (IST) May 05

India Latest News 5 May 2026TN 07 CM 2026 - 'GOAT' ಸಿನಿಮಾದಲ್ಲೇ 2026ಕ್ಕೆ ಸಿಎಂ ಆಗುವ ಸುಳಿವು ನೀಡಿದ್ದ ವಿಜಯ್!

ನಟ 'ದಳಪತಿ' ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷವು ತಮಿಳುನಾಡು ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದೆ. ಅವರ 'GOAT' ಸಿನಿಮಾದಲ್ಲಿನ 'TN 07 CM 2026' ನಂಬರ್ ಪ್ಲೇಟ್ ಭವಿಷ್ಯವಾಣಿಯಂತೆ, ವಿಜಯ್ ಈಗ ತಮಿಳುನಾಡಿನ ಮುಖ್ಯಮಂತ್ರಿಯಾಗಲು ಸಜ್ಜಾಗಿದ್ದಾರೆ.
Read Full Story
06:26 PM (IST) May 05

India Latest News 5 May 20265 ಕೋಟಿ ಹಣ ಕೊಡದ ಕಾರಣಕ್ಕೆ ಟಿಎಂಸಿ ನನಗೆ ಟಿಕೆಟ್‌ ನಿರಾಕರಿಸಿತ್ತು ಎಂದ ಟೀಮ್‌ ಇಂಡಿಯಾ ಮಾಜಿ ಪ್ಲೇಯರ್‌

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವಿನ ನಂತರ, ಮಾಜಿ ಸಚಿವ ಮನೋಜ್ ತಿವಾರಿ ಟಿಎಂಸಿ ತೊರೆದಿದ್ದಾರೆ. ಶಿಬ್‌ಪುರ ಕ್ಷೇತ್ರದಿಂದ ಟಿಕೆಟ್‌ಗಾಗಿ 5 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದೇ ಪಕ್ಷ ತೊರೆಯಲು ಕಾರಣ ಎಂದು ಅವರು ಆರೋಪಿಸಿದ್ದಾರೆ.

Read Full Story
06:08 PM (IST) May 05

India Latest News 5 May 2026Viral Video - ವೈರಲ್ ಆಗೋಕೆ ಟ್ರೇನ್ ಸೀಟ್ ಹರಿದ ಈ ಪುಂಡರು ಯಾರು? ಪತ್ತೆ ಮಾಡಿದ ನೆಟ್ಟಿಗರು, ಕಠಿಣ ಕ್ರಮಕ್ಕೆ ಪಟ್ಟು

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗೋ ಹುಚ್ಚಿಗೆ ಬಿದ್ದ ಕೆಲ ಯುವಕರು ಭಾರತೀಯ ರೈಲ್ವೆ ಕೋಚ್‌ವೊಂದನ್ನು ಹಾಳುಗೆಡವಿದ್ದಾರೆ. ಒಬ್ಬ ಯುವಕ ಟ್ರೇನ್ ಸೀಟ್ ಕವರ್ ಹರಿಯುತ್ತಿರುವ ದೃಶ್ಯವನ್ನು ವಿಡಿಯೋ ಮಾಡಲಾಗಿದ್ದು, ಇದು ವೈರಲ್ ಆಗುತ್ತಿದ್ದಂತೆ ಕಠಿಣ ಕ್ರಮಕ್ಕೆ ಸಾರ್ವಜನಿಕರು ಆಗ್ರಹ 

Read Full Story
05:58 PM (IST) May 05

India Latest News 5 May 2026'ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ, ಸೋಲಲ್ಲ ಇದು ಪಿತೂರಿ' - ಬಂಗಾಳ ಚುನಾವಣಾ ಸೋಲಿನ ನಂತರ ಮಮತಾ ಬ್ಯಾನರ್ಜಿ ಆಕ್ರೋಶ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸೋಲನ್ನು 'ಪಿತೂರಿ' ಎಂದು ಕರೆದಿರುವ ಮಮತಾ ಬ್ಯಾನರ್ಜಿ, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಚುನಾವಣಾ ಆಯೋಗದ ವಿರುದ್ಧ ಕಾನೂನು ಸಮರ ಸಾರುವ ಸುಳಿವು ನೀಡಿದ್ದಾರೆ.

Read Full Story
05:56 PM (IST) May 05

India Latest News 5 May 2026ಹಿಂದಿರೋ ಹುಡುಗ ನನ್ನ ಪಕ್ಷವನ್ನೇ ಮುಗಿಸ್ತಾನೆ ಅಂತ ಕರುಣಾನಿಧಿ ಅಂದುಕೊಂಡಿರಲಿಲ್ಲ - ಹಳೆ ಫೋಟೋ ವೈರಲ್

ತಮಿಳುನಾಡಿನ ಸೂಪರ್‌ಸ್ಟಾರ್ ವಿಜಯ್ ಅವರ ಪಕ್ಷ 'ತಮಿಳಗ ವೆಟ್ರಿ ಕಳಗಂ' (TVK) ಸ್ಥಾಪನೆಯಾದ ಕೇವಲ ಎರಡು ವರ್ಷಗಳಲ್ಲಿಯೇ ಚುನಾವಣೆಯಲ್ಲಿ ಗೆದ್ದು, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

Read Full Story
05:45 PM (IST) May 05

India Latest News 5 May 2026Kalita Majhi - ₹2,500 ಸಂಬಳಕ್ಕೆ ಮುಸುರೆ ತಿಕ್ಕುವ ಕೆಲಸ ಮಾಡುತ್ತಿದ್ದ ಮಹಿಳೆ ಈಗ ಶಾಸಕಿ! ಬಿಜೆಪಿ ಗೆಲುವಿನ ರಹಸ್ಯ ಇರೋದೇ ಇಲ್ಲಿ!

ಪಶ್ಚಿಮ ಬಂಗಾಳದಲ್ಲಿ ಮನೆಗೆಲಸ ಮಾಡುತ್ತಿದ್ದ ಕಲಿತಾ ಮಾಝಿ, ಬಡತನವನ್ನು ಮೆಟ್ಟಿ ನಿಂತು ಆಸ್ಗ್ರಾಮ್ ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಕೇವಲ ₹2,500 ಸಂಬಳದಿಂದ ರಾಜಕೀಯದ ಉನ್ನತ ಸ್ಥಾನಕ್ಕೇರಿದ ಅವರ ಈ ಹೋರಾಟದ ಕಥೆ ಹಲವರಿಗೆ ಸ್ಫೂರ್ತಿದಾಯಕವಾಗಿದೆ.
Read Full Story
05:40 PM (IST) May 05

India Latest News 5 May 2026ಮೂರನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಜಿಗಿದ ಬಿಜೆಪಿ ವೋಟ್‌ಶೇರ್‌ - ಕೇರಳದಲ್ಲಿ ಕಮಲ ಭವಿಷ್ಯದಲ್ಲಿ ಅರಳುವ ಸೂಚನೆಯೇ??

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೂರು ಸ್ಥಾನಗಳನ್ನು ಗೆದ್ದು ತನ್ನ ರಾಜಕೀಯ ಬರ ನೀಗಿಸಿಕೊಂಡಿದೆ. ಇದರ ಜೊತೆಗೆ, ಪಾಲಕ್ಕಾಡ್, ತಿರುವಲ್ಲಾ ಸೇರಿದಂತೆ ಆರು ಕ್ಷೇತ್ರಗಳಲ್ಲಿ ಎರಡನೇ ಸ್ಥಾನ ಪಡೆದು, ತನ್ನ ಮತಗಳಿಕೆಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡು ರಾಜ್ಯದ ರಾಜಕೀಯದಲ್ಲಿ ಹೊಸ ಸವಾಲನ್ನು ಒಡ್ಡಿದೆ.
Read Full Story
04:56 PM (IST) May 05

India Latest News 5 May 2026ತ್ರಿಷಾ ಪ್ರೀತಿಯ ಬಲೆಯಲ್ಲಿ ದಳಪತಿ ವಿಜಯ್? ವಿರೋಧಿಗಳಿಗೆ ಹಬ್ಬ - ಈಗ ತಮಿಳುನಾಡು ಅಧಿಪತಿ!

ನಟಿ ತ್ರಿಷಾ ಹಾಗು ವಿಜಯ್ ಮಧ್ಯೆ ಗಟ್ಟಿಯಾದ ಗೆಳೆತನ ಬೆಳೆದುಕೊಂಡಿದೆ. ಅದಕ್ಕೆ ಕಾರಣ ಆಗಿದ್ದು ಲಿಯೋ ಸಿನಿಮಾ.. ಈ ಸಿನಿಮಾ ಬರೋ ಮೊದಲು ಇಬ್ಬರು ಸ್ನೇಹಿತರಾಗಿದ್ರು. ಆದ್ರೆ ಲಿಯೋ ಸಿನಿಮಾ ಬರೋ ಸಮಯದಲ್ಲಿ..

Read Full Story
04:46 PM (IST) May 05

India Latest News 5 May 2026ತಮಿಳು ಜನರಿಗೆ ನೀಡಿದ್ದ ಚುನಾವಣಾ ಭರವಸೆಗಳನ್ನು ಈಡೇರಿಸಲು ವಿಜಯ್‌ಗೆ ಬೇಕು 42 ಸಾವಿರ ಕೋಟಿ ರೂಪಾಯಿ!

ನಟ ವಿಜಯ್ ಅವರ ಜನಪ್ರಿಯ ಕಲ್ಯಾಣ ಯೋಜನೆಗಳ ಭರವಸೆಯು ತಮಿಳುನಾಡು ಸರ್ಕಾರದ ಬೊಕ್ಕಸಕ್ಕೆ ಮೊದಲ ವರ್ಷದಲ್ಲೇ ₹42,000 ಕೋಟಿ ಹೆಚ್ಚುವರಿ ಹೊರೆ ತರಲಿದೆ. ಈಗಾಗಲೇ ಹಣಕಾಸು ಕೊರತೆ ಎದುರಿಸುತ್ತಿರುವ ರಾಜ್ಯಕ್ಕೆ ಮಹಿಳಾ ಸಹಾಯಧನ, ಉಚಿತ ವಿದ್ಯುತ್‌ನಂತಹ ಯೋಜನೆಗಳು ದೊಡ್ಡ ಆರ್ಥಿಕ ಸವಾಲಾಗಿ ಪರಿಣಮಿಸಲಿವೆ.
Read Full Story
04:43 PM (IST) May 05

India Latest News 5 May 2026ಆಗ ಎಂಜಿಆರ್-ಜಯಲಲಿತಾ.. ಈಗ ವಿಜಯ್-ತ್ರಿಷಾ.. ಹಿಸ್ಟರಿ ರಿಪೀಟ್ಸ್ - ಆಗ ಅಮ್ಮ.. ಈಗ ಮಾಮಿ!

ದಳಪತಿ ವಿಜಯ್​​​.. ಈ ಹೆಸ್ರು ಇವತ್ತು ವಿಶ್ವವ್ಯಾಪಿ ಹಬ್ಬಿದೆ. ಯಶ್​ ಮತ್ತು ಅಲ್ಲು ಅರ್ಜುನ್​ ಸಿನಿಮಾದಿಂದ ನ್ಯಾಷನಲ್ ಸ್ಟಾರ್ಸ್​ ಆದ್ರೆ, ದಳಪತಿ ವಿಜಯ್ ರಾಜಕಾರಣಿ ಆಗಿ ಫೇಮಸ್ ಆಗಿದ್ದಾರೆ. ಅದರ ಹಿಂದಿನ ಶಕ್ತಿ ಯಾರು?

Read Full Story
04:15 PM (IST) May 05

India Latest News 5 May 2026ಭಿಕ್ಷೆ ಬೇಡುತ್ತಿದ್ದ NDA ಮಾಜಿ ಪ್ರೊಫೆಸರ್ - ವೈರಲ್ ವಿಡಿಯೋ ಬೆನ್ನಲ್ಲೇ ನೆರವಿಗೆ ಧಾವಿಸಿದ ಭಾರತೀಯ ಸೇನೆ

ಒಂದು ಕಾಲದಲ್ಲಿ ಪ್ರತಿಷ್ಠಿತ ಎನ್‌ಡಿಎಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿದ್ದ 79 ವರ್ಷದ ಡಾ. ಸಂತೋಷ್ ಗೋಯಲ್, ಆಗ್ರಾದ ಬೀದಿಗಳಲ್ಲಿ ಬಡತನದಲ್ಲಿ ಬದುಕುತ್ತಿದ್ದರು. ಅವರ ದುಸ್ಥಿತಿಯ ವಿಡಿಯೋ ವೈರಲ್ ಆದ ನಂತರ, ಭಾರತೀಯ ಸೇನೆಯು ಅವರನ್ನು ಪತ್ತೆಹಚ್ಚಿ ವೈದ್ಯಕೀಯ ನೆರವು ನೀಡಿದೆ.
Read Full Story