- Home
- News
- India News
- India Latest News: ತಮಿಳುನಾಡಿಗೆ ವಿಜಯ್ ಹೊಸ ‘ಜನ’ನಾಯಕ; ದ್ರಾವಿಡ ನಾಡಿಗೆ ಸಿಎಂ ಆಗ್ತಾರಾ ದಳಪತಿ?
LIVE NOW
India Latest News: ತಮಿಳುನಾಡಿಗೆ ವಿಜಯ್ ಹೊಸ ‘ಜನ’ನಾಯಕ; ದ್ರಾವಿಡ ನಾಡಿಗೆ ಸಿಎಂ ಆಗ್ತಾರಾ ದಳಪತಿ?

ಸಾರಾಂಶ
ಚೆನ್ನೈ: ವಿಜಯ್ ಅವರ ದೀರ್ಘಕಾಲದ ಚಾಲಕ ಮತ್ತು ಆಪ್ತ ಸಹಾಯಕ ರಾಜೇಂದ್ರನ್ ಅವರ ಪುತ್ರ ಆರ್. ಶಬರಿನಾಥನ್ (30) ಚೆನ್ನೈನ ವಿರುಗಂಪಕ್ಕಂ ಕ್ಷೇತ್ರದಲ್ಲಿ ಡಿಎಂಕೆಯ ಪ್ರಭಾಕರ ರಾಜಾ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದಾರೆ.
ರಾಜೇಂದ್ರನ್ 1992ರಲ್ಲಿ ತೆರೆಕಂಡ ವಿಜಯ್ರ ಚೊಚ್ಚಲ ಚಿತ್ರ ‘ನಾಲೈಯ ತೀರ್ಪು’ ಕಾಲದಿಂದಲೂ ವಿಜಯ್ ಅವರ ಚಾಲಕ ಮತ್ತು ವೈಯಕ್ತಿಕ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಾಲಕನ ಮಗನಿಗೆ ಟಿಕೆಟ್ ನೀಡಿದ ವಿಜಯ್ ಕುರಿತು ಭಾರೀ ಪ್ರಶಂಸೆ ವ್ಯಕ್ತವಾಗಿತ್ತು.
05:23 AM (IST) May 05
India Latest News 5 May 2026ತಮಿಳುನಾಡಿಗೆ ವಿಜಯ್ ಹೊಸ ‘ಜನ’ನಾಯಕ; ದ್ರಾವಿಡ ನಾಡಿಗೆ ಸಿಎಂ ಆಗ್ತಾರಾ ದಳಪತಿ?
ತಮಿಳುನಾಡಿನಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷವು ಚೊಚ್ಚಲ ಚುನಾವಣೆಯಲ್ಲೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದು 60 ವರ್ಷಗಳ ದ್ರಾವಿಡ ಪಕ್ಷಗಳ ಪ್ರಾಬಲ್ಯವನ್ನು ಕೊನೆಗೊಳಿಸಿದ್ದು, ಅತಂತ್ರ ವಿಧಾನಸಭೆ ನಿರ್ಮಾಣವಾಗಿರುವುದರಿಂದ ಸರ್ಕಾರ ರಚನೆಗೆ ವಿಜಯ್ ಮೈತ್ರಿ ಯತ್ನ ನಡೆಸಿದ್ದಾರೆ.
Read Full Story 05:15 AM (IST) May 05
India Latest News 5 May 2026ಮೋದಿ-ಶಾ ಜೋಡಿ ಬಂಗಾಳ ಗೆದ್ದಿದ್ದು ಹೇಗೆ? ಜನಸಂಘದ ಸಂಸ್ಥಾಪಕರ ತವರಲ್ಲಿ ಕಡೆಗೂ ಅರಳಿತು ಕಮಲ
ಜನಸಂಘದ ಸಂಸ್ಥಾಪಕ ಶ್ಯಾಮಪ್ರಸಾದ ಮುಖರ್ಜಿ ಅವರ ತವರು ರಾಜ್ಯವಾದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದೆ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಬೂತ್ ಮಟ್ಟದ ತಂತ್ರಗಾರಿಕೆ, ಡಬಲ್ ಎಂಜಿನ್ ಸರ್ಕಾರದ ಭರವಸೆ ಹಾಗೂ ಟಿಎಂಸಿ ಅಪಪ್ರಚಾರಕ್ಕೆ ಪ್ರತ್ಯುತ್ತರ ನೀಡಿದ್ದು ಈ ಗೆಲುವಿಗೆ ಪ್ರಮುಖ ಕಾರಣವಾಯಿತು.
Read Full Story