Asianet Suvarna News Asianet Suvarna News

ಮಡಿಕೇರಿಯಲ್ಲಿ ಬಿಡುವು ಕೊಟ್ಟ ಮಳೆರಾಯ; ಆಪರೇಷನ್ ಬ್ರಹ್ಮಗಿರಿ ಚುರುಕು

ಮಡಿಕೇರಿಯಲ್ಲಿ ಮಳೆರಾಯ ಕೊಂಚ ಬಿಡುವು ಕೊಟ್ಟಿದ್ದಾನೆ. ಅರ್ಚಕ ಕುಟುಂಬದ ರಕ್ಷಣಾ ಕಾರ್ಯ ಇಂದು ಚುರುಕುಗೊಂಡಿದೆ. ಜನರ ಓಡಾಟ ಶುರುವಾಗಿದೆ. 
 

ಬೆಂಗಳೂರು (ಆ, 10): ಮಡಿಕೇರಿಯಲ್ಲಿ ಮಳೆರಾಯ ಕೊಂಚ ಬಿಡುವು ಕೊಟ್ಟಿದ್ದಾನೆ. ಅರ್ಚಕ ಕುಟುಂಬದ ರಕ್ಷಣಾ ಕಾರ್ಯ ಇಂದು ಚುರುಕುಗೊಂಡಿದೆ. ಜನರ ಓಡಾಟ ಶುರುವಾಗಿದೆ. 

ಕಳೆದ 5 ದಿನಗಳಿಂದ ಸತತ ಮಳೆಯಿಂದಾಗಿ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಬುಧವಾರ ರಾತ್ರಿ ತಲಕಾವೇರಿ ಬ್ರಹ್ಮಗಿರಿ ಬೆಟ್ಟದಲ್ಲಿ ಭೂ ಕುಸಿತ ಉಂಟಾಗಿ ನಾಪತ್ತೆಯಾದ ಐವರಲ್ಲಿ ಶನಿವಾರ ಒಬ್ಬರ ಮೃತದೇಹ ಪತ್ತೆಯಾಗಿತ್ತು. ಉಳಿದ ನಾಲ್ವರಾದ ನಾರಾಯಣಾಚಾರ್, ಅವರ ಪತ್ನಿ ಶಾಂತಮ್ಮ, ಸಹಾಯಕ ಅರ್ಚಕ ರವಿಕಿರಣ್, ಶ್ರೀನಿವಾಸ್‌ಗಾಗಿ ರಕ್ಷಣಾ ತಂಡದ ಶೋಧಕಾರ್ಯ ಮುಂದುವರೆದಿದೆ. 

ಆ ಪುಸ್ತಕ ಓದುತ್ತಲೇ ಮಣ್ಣಾಗಿ ಹೋದ್ರಾ ಅರ್ಚಕ ನಾರಾಯಣಾಚಾರ್..?