Asianet Suvarna News Asianet Suvarna News

ಸೀಡಿ ವಿಚಾರ ಮೊದಲೇ ಗೊತ್ತಿತ್ತು, ಧೈರ್ಯವಾಗಿರಿ ಎಂದಿದ್ರು ಸಾಹೇಬ್ರು; ಜಾರಕಿಹೊಳಿ ಆಪ್ತ

ರಾಸಲೀಲೆ ಪ್ರಕರಣದಲ್ಲಿ ರಾಜಿನಾಮೆ ಬಳಿಕ ಸಾಹುಕಾರ್ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿ ಇಡೀ ಘಟನೆ ಬಗ್ಗೆ ಮಾತನಾಡಿದ್ದಾರೆ. ನಾನು ತಪ್ಪು ಮಾಡಿಲ್ಲ. ನನಗೆ 4 ತಿಂಗಳ ಹಿಂದೆಯೇ ಗೊತ್ತಿತ್ತು. ಬಹಳ ನೊಂದಿದ್ದೇನೆ. ಹೆಚ್ಚು ಪ್ರಶ್ನೆ ಕೇಳಬೇಡಿ' ಎಂದು ಭಾವುಕರಾದರು. 
 

ಬೆಂಗಳೂರು (ಮಾ. 09): ರಾಸಲೀಲೆ ಪ್ರಕರಣದಲ್ಲಿ ರಾಜಿನಾಮೆ ಬಳಿಕ ಸಾಹುಕಾರ್ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿ ಇಡೀ ಘಟನೆ ಬಗ್ಗೆ ಮಾತನಾಡಿದ್ದಾರೆ. ನಾನು ತಪ್ಪು ಮಾಡಿಲ್ಲ. ನನಗೆ 4 ತಿಂಗಳ ಹಿಂದೆಯೇ ಗೊತ್ತಿತ್ತು. ಬಹಳ ನೊಂದಿದ್ದೇನೆ. ಹೆಚ್ಚು ಪ್ರಶ್ನೆ ಕೇಳಬೇಡಿ' ಎಂದು ಭಾವುಕರಾದರು. 

ರಾಸಲೀಲೆ ಹಿಂದಿದ್ದಾರಂತೆ 3+4+2 ; ಒಗಟು ಬಿಡುತ್ತಿಲ್ಲ ರಮೇಶ್ ಜಾರಕಿಹೊಳಿ!

ಜಾರಕಿಹೊಳಿ ಆಪ್ತ, ನೆಲಮಂಗಲ ಮಾಜಿ ಶಾಸಕ ನಾಗರಾಜ್, ಸೀಡಿ ಬಗ್ಗೆ ಮಾತನಾಡಿದ್ದಾರೆ. 'ರಮೇಶ್ ಜಾರಕಿಹೊಳಿ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಸೀಡಿ ಇದ್ಯಂತೆ. ಆ ಬಗ್ಗೆ ಮಾತನಾಡಿ ಬನ್ನಿ ಎಂದು ಬಾಲಚಂದ್ರ ಜಾರಕಿಹೊಳಿ ನನಗೆ ಹೇಳಿದ್ದರು. ನಾನು ಮಾತನಾಡಿದ್ದೆ. ಇದಕ್ಕೆಲ್ಲಾ ನಾನು ಹೆದರಲ್ಲ, ನಾನು ತಪ್ಪು ಮಾಡಿಲ್ಲ ಎಂದು ಸಾಹೇಬ್ರು ಹೇಳಿದ್ದರು' ಎಂದಿದ್ದಾರೆ.