
3 ವರ್ಷಗಳಿಂದ ವ್ಯಾಪಾರವಿಲ್ಲ, ಗಣೇಶೋತ್ಸವಕ್ಕೆ ಅನುಮತಿ ಕೊಡಿ ಸ್ವಾಮಿ; ಮೂರ್ತಿ ತಯಾರಕ ಅಳಲು
ಗಣೇಶೋತ್ಸವಕ್ಕೆ ಅನುಮತಿ ಕೊಡದಿದ್ರೆ ಜೀವನ ಸಾಗಿಸುವುದೇ ಕಷ್ಟ. 3 ವರ್ಷಗಳಿಂದ ವ್ಯಾಪಾರವಿಲ್ಲದೇ ಕಂಗಾಲಾಗಿದ್ದೇವೆ. ಈ ಬಾರಿಯಾದ್ರೂ ನಿಯಮಗಳೊಂದಿಗೆ ಗಣೇಶೋತ್ಸವಕ್ಕೆ ಅನುಮತಿ ಕೊಡಿ: ವರ್ತಕರ ಅಳಲು
ಬೆಂಗಳೂರು (ಸೆ. 05): 'ಗಣೇಶೋತ್ಸವಕ್ಕೆ ಅನುಮತಿ ಕೊಡದಿದ್ರೆ ಜೀವನ ಸಾಗಿಸುವುದೇ ಕಷ್ಟ. 3 ವರ್ಷಗಳಿಂದ ವ್ಯಾಪಾರವಿಲ್ಲದೇ ಕಂಗಾಲಾಗಿದ್ದೇವೆ. ಈ ಬಾರಿಯಾದ್ರೂ ನಿಯಮಗಳೊಂದಿಗೆ ಗಣೇಶೋತ್ಸವಕ್ಕೆ ಅನುಮತಿ ಕೊಡಿ. ಒಂದು ವೇಳೆ ಗಣೇಶೋತ್ಸವಕ್ಕೆ ಬ್ರೇಕ್ ಹಾಕಿದರೆ ನಾವು ಜೀವನ ಸಾಗಿಸುವುದೇ ಕಷ್ಟ ಸ್ವಾಮಿ' ಎಂದು ಮೂರ್ತಿ ತಯಾರಕರು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಅಳಲು ತೋಡಿಕೊಂಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕೊರೋನಾ ಕೇಸ್ ಇಳಿಕೆ, ಗಣೇಶ ಹಬ್ಬದಲ್ಲಿ ಮೈಮರೆಯಬೇಡಿ: ಬಿಬಿಎಂಪಿ ಆಯುಕ್ತರಿಂದ ಎಚ್ಚರಿಕೆ
'ಕೋವಿಡ್ 19 ಆತಂಕ ಇರುವುದರಿಂದ ನಮಗೂ ಅರ್ಥವಾಗುತ್ತಿದೆ. ಆದರೆ ಮುಂಜಾಗ್ರತಾ ಕ್ರಮಗಳೊಂದಿಗೆ ಗಣೇಶ ಹಬ್ಬ ಆಚರಣೆಗೆ ಅವಕಾಶ ಮಾಡಿಕೊಡಬೇಕೆಂದು' ಮನವಿ ಮಾಡಿದ್ದಾರೆ.