Asianet Suvarna News Asianet Suvarna News

3 ವರ್ಷಗಳಿಂದ ವ್ಯಾಪಾರವಿಲ್ಲ, ಗಣೇಶೋತ್ಸವಕ್ಕೆ ಅನುಮತಿ ಕೊಡಿ ಸ್ವಾಮಿ; ಮೂರ್ತಿ ತಯಾರಕ ಅಳಲು

ಗಣೇಶೋತ್ಸವಕ್ಕೆ ಅನುಮತಿ ಕೊಡದಿದ್ರೆ ಜೀವನ ಸಾಗಿಸುವುದೇ ಕಷ್ಟ. 3 ವರ್ಷಗಳಿಂದ ವ್ಯಾಪಾರವಿಲ್ಲದೇ ಕಂಗಾಲಾಗಿದ್ದೇವೆ. ಈ ಬಾರಿಯಾದ್ರೂ ನಿಯಮಗಳೊಂದಿಗೆ ಗಣೇಶೋತ್ಸವಕ್ಕೆ ಅನುಮತಿ ಕೊಡಿ: ವರ್ತಕರ ಅಳಲು 

ಬೆಂಗಳೂರು (ಸೆ. 05): 'ಗಣೇಶೋತ್ಸವಕ್ಕೆ ಅನುಮತಿ ಕೊಡದಿದ್ರೆ ಜೀವನ ಸಾಗಿಸುವುದೇ ಕಷ್ಟ. 3 ವರ್ಷಗಳಿಂದ ವ್ಯಾಪಾರವಿಲ್ಲದೇ ಕಂಗಾಲಾಗಿದ್ದೇವೆ. ಈ ಬಾರಿಯಾದ್ರೂ ನಿಯಮಗಳೊಂದಿಗೆ ಗಣೇಶೋತ್ಸವಕ್ಕೆ ಅನುಮತಿ ಕೊಡಿ. ಒಂದು ವೇಳೆ ಗಣೇಶೋತ್ಸವಕ್ಕೆ ಬ್ರೇಕ್ ಹಾಕಿದರೆ ನಾವು ಜೀವನ ಸಾಗಿಸುವುದೇ ಕಷ್ಟ ಸ್ವಾಮಿ' ಎಂದು ಮೂರ್ತಿ ತಯಾರಕರು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಅಳಲು ತೋಡಿಕೊಂಡಿದ್ದಾರೆ. 

ಕೊರೋನಾ ಕೇಸ್ ಇಳಿಕೆ, ಗಣೇಶ ಹಬ್ಬದಲ್ಲಿ ಮೈಮರೆಯಬೇಡಿ: ಬಿಬಿಎಂಪಿ ಆಯುಕ್ತರಿಂದ ಎಚ್ಚರಿಕೆ

'ಕೋವಿಡ್ 19 ಆತಂಕ ಇರುವುದರಿಂದ ನಮಗೂ ಅರ್ಥವಾಗುತ್ತಿದೆ. ಆದರೆ ಮುಂಜಾಗ್ರತಾ ಕ್ರಮಗಳೊಂದಿಗೆ ಗಣೇಶ ಹಬ್ಬ ಆಚರಣೆಗೆ ಅವಕಾಶ ಮಾಡಿಕೊಡಬೇಕೆಂದು' ಮನವಿ ಮಾಡಿದ್ದಾರೆ. 

Video Top Stories