
Flag Row: ಈಶ್ವರಪ್ಪ ವಜಾಕ್ಕೆ ಕಾಂಗ್ರೆಸ್ ಅಹೋರಾತ್ರಿ ಧರಣಿ, ಇದಕ್ಕೆಲ್ಲಾ ಬಗ್ಗಲ್ಲ ಎಂದ ಈಶ್ವರಪ್ಪ
-ಕೇಸರಿ ಧ್ವಜ ಹೇಳಿಕೆ: ಈಶ್ವರಪ್ಪ ತಲೆದಂಡಕ್ಕೆ ಕಾಂಗ್ರೆಸ್ ಪಟ್ಟು, ಜಟಾಪಟಿ- ಏಕವಚನ, ಅವಾಚ್ಯ ಶಬ್ದಗಳೊಂದಿಗೆ ಸಚಿವ ಈಶ್ವರಪ್ಪ- ಡಿಕೆಶಿ ನಡುವೆ ವಾಗ್ಯುದ್ಧ- ವಿಧಾನಸಭೆಯಲ್ಲಿ ಪರಸ್ಪರ ಕೈಕೈ ಮಿಲಾಯಿಸಲು ಮುಂದಾದ ಇಬ್ಬರೂ ನಾಯಕರು
ಬೆಂಗಳೂರು (ಫೆ. 18): ನವದೆಹಲಿಯ ಕೆಂಪುಕೋಟೆ ಮೇಲೆ ಕೇಸರಿ ಧ್ವಜ (Flag Row) ಹಾರಿಸುವುದಾಗಿ ಹೇಳುವ ಮೂಲಕ ಸಚಿವ ಕೆ.ಎಸ್. ಈಶ್ವರಪ್ಪ (KS Eshwarappa) ಅವರು ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ್ದಾರೆ, ಹೀಗಾಗಿ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಹಾಗೂ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂಬ ಬೇಡಿಕೆಯೊಂದಿಗೆ ಕಾಂಗ್ರೆಸ್ ಮಂಡಿಸಿದ ಪ್ರಸ್ತಾವ ವಿಧಾನಸಭೆಯಲ್ಲಿ ರಣಾಂಗಣಕ್ಕೆ ಕಾರಣವಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
News Hour: ರಾಜ್ಯದ ಕಟಕಟೆಯಲ್ಲಿ ಮುಂದುವರೆದ ಹಿಜಾಬ್ ವಾದ-ವಿವಾದ!
ಕಾಂಗ್ರೆಸ್ ಪಕ್ಷದವರು ಜೀವನ ಪರ್ಯಂತ ಧರಣಿ ಮಾಡಿದರೂ ನಾನು ಕುಗ್ಗುವುದಿಲ್ಲ, ಬಗ್ಗುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕಡ್ಡಿ ಮುರಿದಂತೆ ಹೇಳಿದ್ದಾರೆ. ಕೇಸರಿ ಧ್ವಜ ಕುರಿತಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಯಲ್ಲಿ ಕಾನೂನಾತ್ಮಕವಾಗಿ ಯಾವುದೇ ಉಲ್ಲಂಘನೆ ಆಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Bommai) ಪ್ರತಿಪಾದಿಸಿದ್ದಾರೆ.