Asianet Suvarna News Asianet Suvarna News

News Hour: ರಾಜ್ಯದ ಕಟಕಟೆಯಲ್ಲಿ ಮುಂದುವರಿದ ಹಿಜಾಬ್ ವಾದ-ವಿವಾದ!

ರಾಜ್ಯದಲ್ಲಿ ಮುಂದುವರಿದ ಹಿಜಾಬ್ ಗಲಾಟೆ
ಹೈಕೋರ್ಟ್ ನಲ್ಲಿ ಪ್ರಕರಣದ ಕುರಿತಾಗಿ ಮುಂದುವರಿದ ವಿಚಾರಣೆ
ಶಿಕ್ಷಣಕ್ಕಿಂತ ನಮಗೆ ಹಿಜಾಬ್ ಮುಖ್ಯ ಅಂದ್ರು ಹೆಣ್ಮಕ್ಕಳು

First Published Feb 18, 2022, 12:00 AM IST | Last Updated Feb 18, 2022, 12:00 AM IST

ಬೆಂಗಳೂರು (ಫೆ.17):  ರಾಜ್ಯದಲ್ಲಿ ಹಿಜಾಬ್ (Hijab)  ಸಮರ ಇನ್ನೂ ಮುಗಿದಿಲ್ಲ. ಹೈಕೋರ್ಟ್ (High Court)  ಕಟಕಟೆಯಲ್ಲಿ ಈಗಾಗಲೇ ಹಿಜಾಬ್ ಕುರಿತಾಗಿ ವಾದ ಪ್ರತಿವಾದಗಳು ನಡೆಯುತ್ತಿದ್ದು, ಗುರುವಾರ ಕೂಡ ಈ ಕುರಿತಾಗಿ ವಿಶೇಷವಾದ ವಾದ ಮಂಡನೆಗಳು ಆಗಿವೆ. ಈ ನಡುವೆ ಹೈಕೋರ್ಟ್ ನೀಡಿದ ಮಧ್ಯಂತರ ಆದೇಶವನ್ನು ಧಿಕ್ಕರಿಸಿರುವ ಮುಸ್ಲಿಂ ಬಾಲಕಿಯರು ಶಾಲೆಗೆ ಹಿಜಾಬ್ ಧರಿಸಿಕೊಂಡು ಹೋಗಿದ್ದು, ಅವರಿಗೆ ಪ್ರವೇಶ ನೀಡಲಾಗಿಲ್ಲ. ಚಿತ್ರದುರ್ಗದ ಪಿಯು ಕಾಲೇಜಿನಲ್ಲಿ ಇದರ ವಿರುದ್ಧ ಮುಸ್ಲಿಂ ಹುಡುಗಿಯರು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಇನ್ನೊಂದೆಡೆ ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುವ ಈಶ್ವರಪ್ಪ ಅವರ ಹೇಳಿಕೆಗೆ ಕಾಂಗ್ರೆಸ್ ನ ಪ್ರತಿಭಟನೆ ಮುಂದುವರಿದಿದೆ. ಉಭಯ ಸದನಗಳಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದು, ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿದೆ. ಇನ್ನೊಂದೆಡೆ ಈಶ್ವರಪ್ಪ (K S Eshwarappa ) ಅವರು ಎಷ್ಟೇ ಪ್ರತಿಭಟನೆ ಮಾಡಲಿ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಇನ್ನೊಂದೆಡೆ ಪ್ರತಿಭಟನಾನಿರತ ಕಾಂಗ್ರೆಸ್ ನಾಯಕರ ಮನವೊಲಿಕೆಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಯತ್ನಿಸಿದ್ದಾರೆ. 

Karnataka Politics ಈಶ್ವರಪ್ಪರನ್ನ ಸಚಿವ ಸಂಪುಟದಿಂದ ಕೈಬಿಡುವಂತೆ ಪಟ್ಟು
ಕೊರೋನಾ ಕಾರಣದಿಂದಾಗಿ ನಿಂತಿದ್ದ ಮೇಕೆದಾಟು ಪಾದಯಾತ್ರೆಗೆ ಮತ್ತೆ ಚಾಲನೆ ನೀಡಲು ಕಾಂಗ್ರೆಸ್ ಮುಂದಾಗಿದೆ. ಫೆ. 27 ರಿಂದ ಮತ್ತೆ ಮೇಕೆದಾಟು ಪಾದಯಾತ್ರೆ ಆರಂಭವಾಗುವ ಸಾಧ್ಯತೆ ಇದ್ದು, ಇದಕ್ಕೆ ಎಲ್ಲಾ ರೀತಿಯ ಸಿದ್ಧತೆ ನಡೆಸುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.