Asianet Suvarna News Asianet Suvarna News

'ಅಮರಾವತಿ ಪೋಲಿಸ್ ಸ್ಟೇಷನ್'ನಲ್ಲಿ ವಿನೋದ್ ರಾಜ್: ಅಸಲಿಗೆ ಏನಾಯ್ತು?

ಕಡಲತೀರದ ಕಾಲ್ಪನಿಕ ಊರು ಅಮರಾವತಿಯಲ್ಲಿ ನಡೆಯುವ ಮಿಸ್ಸಿಂಗ್, ಮರ್ಡರ್, ಸುತ್ತ ನಡೆಯುವ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ "ಅಮರಾವತಿ ಪೊಲೀಸ್ ಸ್ಟೇಷನ್".  ಪುನೀತ್ ಅರಸೀಕೆರೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

First Published Sep 29, 2024, 5:28 PM IST | Last Updated Sep 29, 2024, 5:28 PM IST

ಕಡಲತೀರದ ಕಾಲ್ಪನಿಕ ಊರು ಅಮರಾವತಿಯಲ್ಲಿ ನಡೆಯುವ ಮಿಸ್ಸಿಂಗ್, ಮರ್ಡರ್, ಸುತ್ತ ನಡೆಯುವ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ "ಅಮರಾವತಿ ಪೊಲೀಸ್ ಸ್ಟೇಷನ್".  ಪುನೀತ್ ಅರಸೀಕೆರೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದ ಟೀಸರನ್ನು ದಿ.ಲೀಲಾವತಿ ಅವರ  ಪುತ್ರ, ಹಿರಿಯ ನಟ ವಿನೋದ್ ರಾಜ್ ಬಿಡುಗಡೆ ಮಾಡಿದ್ದಾರೆ. ಧರ್ಮ ಕೀರ್ತಿರಾಜ್ ನಾಯಕನಾಗಿದ್ದು, ಗುರುರಾಜ್ ಜಗ್ಗೇಶ್ ಪ್ರಮುಖ ಪಾತ್ರದಲ್ಲಿದ್ದಾರೆ. ವೇದ್ವಿಕ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. 

ನನಗೆ ನಾನೇ ಬಾಸ್ ಎಂದ ಹರಿಪ್ರಿಯಾ: ನಟ ವಸಿಷ್ಠ ಸಿಂಹ ಜೊತೆ ಮದುವೆ ಆಗಿ ಸಂಸಾರ ನಡೆಸುತ್ತಿರೋ ನೀರ್​​ದೋಸೆ ಬ್ಯೂಟಿ ಹರಿಪ್ರಿಯಾ ಈಗ ನನಗೆ ನಾನೇ ಬಾಸ್ ಎಂದಿದ್ದಾರೆ. ಇದಕ್ಕೆ ಕಾರಣ ಸೆಪ್ಟೆಂಬರ್​ 29ರಿಂದ ಆರಂಭ ಆಗೋ ಬಿಗ್​ಬಾಸ್​ ಕನ್ನಡ ಸೀಸನ್ 11. ಈ ಭಾರಿ ಬಿಗ್​ಬಾಸ್​ಗೆ ಹರಿಪ್ರಿಯಾ ಹೋಗುತ್ತಿದ್ದಾರೆ ಅಂತ ಸುದ್ದಿಯಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ನಟಿ ಹರಿಪ್ರಿಯಾ ಬಿಗ್​ಬಾಸ್​ಗೆ ನಾನು ಹೋಗುತ್ತಿಲ್ಲ ನನಗೆ ನಾನೇ ಬಾಸ್ ಎಂದಿದ್ದಾರೆ.

ಕನ್ನಡದಲ್ಲಿ 'ವೆಟ್ಟೆಯಾನ್' ಖದರ್: ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಿಗ್‌ಬಿ ಅಮಿತಾಬ್ ಬಚ್ಚನ್ ನಟನೆಯ 'ವೆಟ್ಟೆಯಾನ್' ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ದಸರಾ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡದಾಗಿ ಸಿನಿಮಾ ತೆರೆಗಪ್ಪಳಿಸಲಿದೆ. ಇದೀಗ ಕನ್ನಡದಲ್ಲಿ ವೆಟ್ಟೈಯಾನ್ ಪ್ರಿವ್ಯೂ ಟೀಸರ್​ ಕನ್ನಡದಲ್ಲಿ ರಿಲೀಸ್ ಅಗಿದೆ. 

ಡೆಡ್ಲಿ ಸೋಮ ಡೈರೆಕ್ಟರ್​ ಹೊಸ ಪ್ರಯತ್ನ " ಗ್ಯಾಂಗ್ಸ್ ಆಫ್ ಯುಕೆ ": ಡೆಡ್ಲಿ ಸೋಮ, ಮಾದೇಶ, ಚಿತ್ರಗಳನ್ನೇ ನಿರ್ದೇಶಿಸಿರೋ ರವಿ ಶ್ರೀವತ್ಸ ಈಗ ಹೊಸ ನಿರ್ಮಾಣ ಸಂಸ್ಥೆ ಸ್ಥಾಪಿಸಿದ್ದಾರೆ. ಆ ಸಂಸ್ಥೆ ಮೂಲಕ 'ಗ್ಯಾಂಗ್ಸ್ ಆಫ್ ಯುಕೆ' ಸಿನಿಮಾ ಮಾಡುತ್ತಿದ್ದಾರೆ. ಬಾಗಲಕೋಟೆಯ ಪಿಲ್ಲಾರಿ ಫಾಲ್ಸ್ ನಲ್ಲಿ ನಡೆದ ಘಟನೆ ಇಟ್ಟುಕೊಂಡು ಮಾಡಿದ ಸಿನಿಮಾ ಇದು. ಹೆಸರಾಂತ ನಿರ್ದೆಶಕ ಕೆ ವಿ. ರಾಜು ಅವರ ಪುತ್ರ ಅಮೋಘ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೋನು ಉಪಾಧ್ಯ, ಪ್ರವೀಣ್, ಉಗ್ರಂ ರೆಡ್ಡಿ, ಸತ್ಯ, ಧಿಲ್ಲಾನ್, ನವೀನ್, ಪ್ರಜ್ವಲ್ ಮಸ್ಕಿ, ಉಮೇಶ್, ವಿಕಾಸ್ ಸಿನಿಮಾದಲ್ಲಿದ್ದಾರೆ.