Asianet Suvarna News Asianet Suvarna News

ವಿವಾದದ ನಡುವೆಯೂ 'ಉರಿಗೌಡ ನಂಜೇಗೌಡ' ಸಿನಿಮಾಗೆ ಮುಹೂರ್ತ ಫಿಕ್ಸ್ ಮಾಡಿದ ಮುನಿರತ್ನ

ಭಾರಿ ವಿವಾದದ ನಡುವೆಯೂ 'ಉರಿಗೌಡ ನಂಜೇಗೌಡ' ಸಿನಿಮಾಗೆ ಮುನಿರತ್ನ ಮುಹೂರ್ತ ಫಿಕ್ಸ್ ಮಾಡಿದ್ದಾರೆ.

ಭಾರಿ ವಿವಾದದ ನಡುವೆಯೂ ಉರಿಗೌಡ ನಂಜೇಗೌಡ ಸಿನಿಮಾಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ. ನಿರ್ಮಾಪಕ ಮುನಿರತ್ನ ನಿರ್ಮಾಣದಲ್ಲಿ ಮಂಡ್ಯದ ಒಕ್ಕಲಿಗ ಕಲಿಗಳು ಎಂದು ಬಿಂಬಿಸಲಾಗುತ್ತಿರುವ `ಉರಿಗೌಡ, ನಂಜೇಗೌಡ’ಸಿನಿಮಾ ಮೂಡಿ ಬರುತ್ತಿದೆ. ಈ ಬಗ್ಗೆ ಸ್ವತಃ ಮುನಿರತ್ನ ಅವರೇ ಬಹಿರಂಗ ಪಡಿಸಿದ್ದಾರೆ. 'ವೃಷಬಾದ್ರಿ ಪ್ರೊಡಕ್ಷನ್ ನಿರ್ಮಾಣದ ಐತಿಹಾಸಿಕ ಸತ್ಯ ಘಟನೆಗಳ ಆಧಾರಿತ 'ಉರೀಗೌಡ ನಂಜೇಗೌಡ' ಚಿತ್ರದ ಮುಹೂರ್ತ ಮೇ 18ರಂದು ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ಡಾ.ಸಿ.ಎನ್ ಅಶ್ವಥ್ ನಾರಾಯಣ್ ಚಿತ್ರಕಥೆ ಇರುವ ಈ ಚಿತ್ರವನ್ನು ಆರ್.ಎಸ್.ಗೌಡ ನಿರ್ದೇಶನ ಮಾಡುತ್ತಿದ್ದಾರೆ'  ಎಂದು ಮುನಿರತ್ನ ಬಹಿರಂಗ ಪಡಿಸಿದ್ದಾರೆ. ಕುರುಕ್ಷೇತ್ರ ಸೇರಿದಂತೆ ಹಲವು  ಸಿನಿಮಾಗಳನ್ನ ನಿರ್ಮಾಣ ಮಾಡಿದ್ದ ಮುನಿರತ್ನ ಈಗ ವಿವಾದಿತ ವ್ಯಕ್ತಿಗಳ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸಿನಿಮಾ ಹೇಗಿರಲಿದೆ ಯಾರೆಲ್ಲಾ ನಟಿಸಲಿದ್ದಾರೆ ಎನ್ನುವ ಕುತೂಹಲ ಈಗ ಹೆಚ್ಚಾಗಿದೆ.