Asianet Suvarna News Asianet Suvarna News

ಅಘೋರಿ ಪಾತ್ರಕ್ಕಾಗಿ ವಿಭೂತಿ ಬಳಿದುಕೊಂಡಿದ್ದಕ್ಕೆ ರಾಧಿಕಾ ಕುಮಾರಸ್ವಾಮಿಗೆ ಏನಾಗಿತ್ತು ಗೊತ್ತಾ?

ಭೈರಾದೇವಿ ಸಿನಿಮಾ ಚಿತ್ರೀಕರಣದ ಹಂತದಲ್ಲಿ ಇಡೀ ತಂಡ ಸಾಕಷ್ಟು ಅಡೆತಡೆಗಳನ್ನು ಅನುಭವಿಸಿದೆ. ಆದರೆ, ಎಲ್ಲ ಅಡ್ಡಿ ಆತಂಕಗಳನ್ನು ನಿವಾರಿಸಿಕೊಂಡು ಇದೀಗ ಬಿಡುಗಡೆಗೆ ಸಜ್ಜಾಗಿದೆ. ಚಿತ್ರೀಕರಣದ ವೇಳೆ ಅಘೋರಿ ಪಾತ್ರಕ್ಕಾಗಿ..

First Published Sep 8, 2024, 11:50 AM IST | Last Updated Sep 8, 2024, 12:05 PM IST

ಸ್ಯಾಂಡಲ್‌ವುಡ್ ಸ್ವೀಟಿ ಖ್ಯಾತಿಯ ನಟಿ ರಾಧಿಕಾ ಕುಮಾರಸ್ವಾಮಿ ನಟನೆಯ ಭೈರಾದೇವಿ ಚಿತ್ರವು ಬಿಡುಗಡೆಗೆ ಸಿದ್ಧವಾಗಿದೆ. ಮುಂದಿನ ತಿಂಗಳು ದಸರಾ ವೇಳೆ (ಅಕ್ಟೋಬರ್ 03) ಭೈರಾದೇವಿ ಬಿಡುಗಡೆ ಘೋಷಿಸಿರುವ ಚಿತ್ರತಂಡವು ಸದ್ಯ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. ಈ ನಿಟ್ಟಿನಲ್ಲಿ, ನಟಿ ಹಾಗೂ ಭೈರಾದೇವಿ ನಿರ್ಮಾಪಕಿಯೂ ಆಗಿರುವ ರಾಧಿಕಾ ಕುಮಾರಸ್ವಾಮಿ ಅವರು ತಮ್ಮ ಸಂದರ್ಶನಗಳಲ್ಲಿ ಹಲವು ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ. 

ಭೈರಾದೇವಿ ಸಿನಿಮಾ ಚಿತ್ರೀಕರಣದ ಹಂತದಲ್ಲಿ ಇಡೀ ತಂಡ ಸಾಕಷ್ಟು ಅಡೆತಡೆಗಳನ್ನು ಅನುಭವಿಸಿದೆ. ಆದರೆ, ಎಲ್ಲ ಅಡ್ಡಿ ಆತಂಕಗಳನ್ನು ನಿವಾರಿಸಿಕೊಂಡು ಇದೀಗ ಬಿಡುಗಡೆಗೆ ಸಜ್ಜಾಗಿದೆ. ಚಿತ್ರೀಕರಣದ ವೇಳೆ ಅಘೋರಿ ಪಾತ್ರಕ್ಕಾಗಿ ಮುಖ ಮಾತ್ರವಲ್ಲದೇ ಮೈ ತುಂಬಾ ಬೂದಿ (ವಿಭೂತಿ) ಬಳಿದುಕೊಂಡಿದ್ದ ಕಾರಣಕ್ಕೆ ರಾಧಿಕಾ ಅವರಿಗೆ ಸ್ಕಿನ್ ಅಲರ್ಜಿ ಕೂಡ ಕಾಣಿಸಿಕೊಂಡಿತ್ತಂತೆ. ಆದರೆ, ತಮ್ಮ ವೃತ್ತಿಜೀವನದಲ್ಲಿ ಮಾಡುತ್ತಿರುವ ವಿಭಿನ್ನ ಪಾತ್ರ ಎಂಬ ಕಾರಣಕ್ಕೆ ಎಲ್ಲವನ್ನೂ ಸಹಿಸಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ ರಾಧಿಕಾ ಕುಮಾರಸ್ವಾಮಿ. 

ಮೊದಲ ಬಾರಿಗೆ ನಟ ದರ್ಶನ್ ಕೇಸ್ ಬಗ್ಗೆ ಬಾಯ್ಬಿಟ್ಟ ರಾಧಿಕಾ ಕುಮಾರಸ್ವಾಮಿ, ಏನ್ ಹೇಳಿದ್ರು ನೋಡಿ!

ಇನ್ನು, ಚಿತ್ರೀಕರಣದ ವೇಳೆ ತಮ್ಮ ಬ್ಯೂಟಿ ಹಾಗು ಡಯಟ್ ಮ್ಯಾನೇಜ್ ಮಾಡೋಕೆ ನಟಿ ರಾಧಿಕಾ ಅವರಿಗೆ ಸಾಧ್ಯವೇ ಆಗಲಿಲ್ಲವಂತೆ. ಈ ಕಾರಣಕ್ಕೆ ಸದ್ಯ ತಾವು ಸ್ವಲ್ಪ ದಪ್ಪ ಆಗಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಜತೆಗೆ, ಮೊದಲೆಲ್ಲಾ ಇಷ್ಟಪಡುತ್ತಿದ್ದ ತುಪ್ಪ ತಿನ್ನುವುದನ್ನು ಸದ್ಯ ನಿಲ್ಲಿಸಿರುವುದಾಗಿ ಕೂಡ ಹೇಳಿದ್ದಾರೆ ರಾಧಿಕಾ ಕುಮಾರಸ್ವಾಮಿ! ಇನ್ನೂ ಏನೇನು ಹೇಳಿದ್ದಾರೆ ಅನ್ನೋದಕ್ಕೆ ವಿಡಿಯೋ ನೋಡಿ!

Video Top Stories