
ಕೋರ್ಟ್ ಜಾಮೀನು ಕೊಟ್ಟರೂ ಸರ್ಜರಿ ಮಾಡಿಸಿಕೊಳ್ಳದ ದರ್ಶನ್; ಗಂಡ ಹೆಂಡತಿ ಮಾಡಿದ ಸಂಚು ವರ್ಕ್ ಅಯ್ತಾ?
6 ವಾರಗಳ ಕಾಲ ಮಧ್ಯಂತರ ಜಾಮೀನು ಪಡೆದ ನಟ ದರ್ಶನ್. ಯಾವ ಸರ್ಜರಿನೂ ಇಲ್ಲ ನೋವು ಇಲ್ಲ ಎನ್ನುತ್ತಿರುವ ನೆಟ್ಟಿಗರು.....
ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೇಲೆ ನಟ ದರ್ಶನ್ ಜೈಲು ಸೇರಿದ್ದರು. ಜೈಲಿನಲ್ಲಿ ತಿಂಗಳು ಕಳೆಯುತ್ತಾ ಹೋಗುತ್ತಿತ್ತು ಆದರೆ ಹೊರ ಬರು ಸಾಧ್ಯತೆಗಳು ಕಾಣಿಸುತ್ತಿರಲಿಲ್ಲ. ಬೇಲ್ ಮುಂದೂಡುತ್ತಲೇ ಇದ್ದಾಗ ದರ್ಶನ್ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿತ್ತು, ಬೆನ್ನು ನೋವು ಹೆಚ್ಚಾಗಿ ಸರ್ಜರಿ ಮಾಡುವ ಹಂತಕ್ಕೆ ಹೋಗಿತ್ತು. ಹೀಗಾಗಿ ಕೋರ್ಟ್ನಲ್ಲಿ 6 ತಿಂಗಳ ಕಾಲ ಮಧ್ಯಂತರ ಜಾಮೀನು ನೀಡಿತ್ತು, ಹೊರ ಬರುತ್ತಿದ್ದಂತೆ ದರ್ಶನ್ ಮೊದಲು ಹೋಗಿದ್ದು ಪತ್ನಿ ವಿಜಯಲಕ್ಷ್ಮಿ ಅಪಾರ್ಟ್ಮೆಂಟ್ಗೆ. ಚಿಕಿತ್ಸೆಗೆಂದು ಒಂದೆರಡು ದಿನ ಆಸ್ಪತ್ರೆ ಕಡೆ ಮುಖ ಮಾಡಿದ ದರ್ಶನ್ ಸರ್ಜರಿ ಯಾಕೆ ಮಾಡಿಸಿಕೊಂಡಿಲ್ಲ? ಹೊರ ಬರಲು ಕಾರಣ ಕೊಟ್ಟರೇ? ಏನಿದು ಎಂದು ನೆಟ್ಟಿಗರು ಪ್ರಶ್ನೆ ಮಾಡಲು ಶುರು ಮಾಡಿದ್ದಾರೆ.
Add Asianetnews Kannada as a Preferred Source

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕಿಸಿ: Asianet Suvarna News