Asianet Suvarna News Asianet Suvarna News

ಮನುರಂಜನ್​ ಸಿನಿಮಾ 'ಮುಗಿಲ್​ಪೇಟೆ​' ಮೆಚ್ಚಿದ ಕ್ರೇಜಿಸ್ಟಾರ್ ವಿ.ರವಿಚಂದ್ರನ್

ಕ್ರೇಜಿಸ್ಟಾರ್ ರಚಿಚಂದ್ರನ್ ತಮ್ಮ ಪುತ್ರನ ಚಿತ್ರವನ್ನು ಮೆಚ್ಚಿದ್ದು, ಸಿನಿಮಾದಲ್ಲಿ ಭಿನ್ನವಾಗಿ ಅವನು ಕಾಣಿಸಿಕೊಂಡಿದ್ದಾನೆ. ಭವಿಷ್ಯಕ್ಕೆ ಓರ್ವ ಪ್ರಾಮಿಸಿಂಗ್​ ಹೀರೋ ಆಗಿ ಮನು ಕಾಣಿಸಿಕೊಂಡಿದ್ದಾನೆ. ಇಡೀ ಸಿನಿಮಾ ಎಲ್ಲಿಯೂ ಬೇಸರ ತರಿಸುವುದಿಲ್ಲ ಎಂದು ಮುಗಿಲ್‌ಪೇಟೆ ಬಗ್ಗೆ ಹೊಗಳಿದ್ದಾರೆ.

ಕ್ರೇಜಿಸ್ಟಾರ್ ವಿ.ರವಿಚಂದ್ರನ್ (V.Ravichandran) ಅವರ ಪುತ್ರ ಮನುರಂಜನ್ ರವಿಚಂದ್ರನ್ (Manuranjan Ravichandran)  ಅಭಿನಯದ ಭರತ್ ಎಸ್. ನಾವುಂದ (Bharath S Navunda) ನಿರ್ದೇಶನದ  'ಮುಗಿಲ್​ಪೇಟೆ' (Mugilpete) ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ ಸಿನಿಪ್ರಿಯರಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದಿದೆ. ಇದೀಗ ಕ್ರೇಜಿಸ್ಟಾರ್ ರಚಿಚಂದ್ರನ್ ತಮ್ಮ ಪುತ್ರನ ಚಿತ್ರವನ್ನು ಮೆಚ್ಚಿದ್ದು, ಸಿನಿಮಾದಲ್ಲಿ ಭಿನ್ನವಾಗಿ ಅವನು ಕಾಣಿಸಿಕೊಂಡಿದ್ದಾನೆ. ಭವಿಷ್ಯಕ್ಕೆ ಓರ್ವ ಪ್ರಾಮಿಸಿಂಗ್​ ಹೀರೋ ಆಗಿ ಮನು ಕಾಣಿಸಿಕೊಂಡಿದ್ದಾನೆ. ಇಡೀ ಸಿನಿಮಾ ಎಲ್ಲಿಯೂ ಬೇಸರ ತರಿಸುವುದಿಲ್ಲ ಎಂದು 'ಮುಗಿಲ್‌ಪೇಟೆ' ಬಗ್ಗೆ ಹೊಗಳಿದ್ದಾರೆ.

Mugilpete Movie Review: ಮೋಡಿ ಮಾಡಿದ ಮನುರಂಜನ್-ಕಯಾದು ಜೋಡಿ

ಸಂಬಂಧಗಳಿಗೆ ಬೆಲೆ ಕೊಡುವ ಒಂದು ಕುಟುಂಬ. ಸಂಬಂಧಗಳನ್ನು ಕಡೆಗಾಣಿಸುವ ಮತ್ತೊಂದು ಕುಟುಂಬ. ಈ ಎರಡು ಕುಟುಂಬದ ಎರಡು ಜೀವಗಳ ಮಧ್ಯೆ ಪ್ರೀತಿ ಹುಟ್ಟಿದಾಗ ಏನಾಗುತ್ತದೆ ಎಂಬುದೆ 'ಮುಗಿಲ್​ಪೇಟೆ' ಕಥಾವಸ್ತು. ಮೋತಿ ಮೂವಿ ಮೇಕರ್ಸ್ ಲಾಂಛನದಲ್ಲಿ ರಕ್ಷಾ ವಿಜಯ್ ಕುಮಾರ್ ನಿರ್ಮಿಸಿರುವ ಈ ಚಿತ್ರದಲ್ಲಿ ಅವಿನಾಶ್, ತಾರಾ ಅನುರಾಧಾ, ಸಾಧುಕೋಕಿಲ, ರಂಗಾಯಣ ರಘು, ರಿಷಿ ಮುಂತಾದ ಕಲಾವಿದರು ನಟಿಸಿದ್ದಾರೆ. ರವಿವರ್ಮ (ಗಂಗು) ಛಾಯಾಗ್ರಹಣ, ಡಾ.ರವಿವರ್ಮ, ವಿಜಯ್ ಸಾಹಸ ನಿರ್ದೇಶನ, ಅರ್ಜುನ್ ಕಿಟ್ಟು ಸಂಕಲನ, ಹರ್ಷ, ಮುರಳಿ , ಮೋಹನ್ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಸತೀಶ್ ಅವರ ಕಲಾ ನಿರ್ದೇಶನವಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories