Asianet Suvarna News Asianet Suvarna News

Email ಐಡಿ ಮೂಲಕ ಹೊರ ಬಿತ್ತಾ ಸಿದ್ದರಾಮಯ್ಯ ಸಿಎಂ ಸಂದೇಶ..!

ಕಾಂಗ್ರೆಸ್ ಕೋಟೆಯ ಅಂತರ್ಯುದ್ಧಕ್ಕೆ ರೋಚಕ ಟ್ವಿಸ್ಟ್... ಕೆಪಿಸಿಸಿ ಅಧ್ಯಕ್ಷರಿಗೆ ಮತ್ತೊಂದು ಚೆಕ್"ಮೇಟ್ ಇಟ್ಟರಲ್ಲಾ ಸಿದ್ದರಾಮಯ್ಯ ಆಪ್ತರು.. ಸಿದ್ದು ಒಡ್ಡೋಲಗದಲ್ಲಿ ಉರುಳಿತು ಇನ್ನೊಂದು ದಾಳ... ಏನಿದು ಈ-ಮೇಲ್ ಐಡಿ ರಹಸ್ಯ..?

ಬೆಂಗಳೂರು, (ಜುಲೈ.06): ಕಾಂಗ್ರೆಸ್ ಕೋಟೆಯ ಅಂತರ್ಯುದ್ಧಕ್ಕೆ ರೋಚಕ ಟ್ವಿಸ್ಟ್... ಕೆಪಿಸಿಸಿ ಅಧ್ಯಕ್ಷರಿಗೆ ಮತ್ತೊಂದು ಚೆಕ್"ಮೇಟ್ ಇಟ್ಟರಲ್ಲಾ ಸಿದ್ದರಾಮಯ್ಯ ಆಪ್ತರು.. ಸಿದ್ದು ಒಡ್ಡೋಲಗದಲ್ಲಿ ಉರುಳಿತು ಇನ್ನೊಂದು ದಾಳ... ಏನಿದು ಈ-ಮೇಲ್ ಐಡಿ ರಹಸ್ಯ..? ಸಿದ್ದರಾಮೋತ್ಸವದ ಹೆಸರಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾದ್ರಾ ಸಿದ್ದರಾಮಯ್ಯ..? ಸಿದ್ದು ಆಪ್ತರ ನಿಗೂಢ ಹೆಜ್ಜೆಯ ವಿರುದ್ಧ ಕನಕಪುರ ಬಂಡೆ ಸಿಡಿಸಿಡಿ ಅಂತಿರೋದು ಅದೇ ಕಾರಣಕ್ಕಾ..? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವೇ ಇದೇ ಇವತ್ತಿನ ಸುವರ್ಣ ಫೋಕಸ್, srlopcm75@ಓಪನ್ ಗೇಮ್.

ಸಿದ್ದರಾಮಯ್ಯ 75ನೇ ವರ್ಷಕ್ಕೆ ಪಾದಾರ್ಪಣೆ: ಆ.3ರಂದು ಅದ್ಧೂರಿ ಸಿದ್ದರಾಮೋತ್ಸವ!

ಹಾಗಾದ್ರೆ ಸಿದ್ದರಾಮಯ್ಯನವರೇ Next ಸಿಎಂ ಅನ್ನೋ ಸಂದೇಶವನ್ನು  ಇ-ಮೇಲ್‌ಐಡಿ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಸಿದ್ದು ಆಪ್ತರು ಕೊಟ್ಟು ಬಿಟ್ರಾ..? ಸಿದ್ದು ಶಕ್ತಿ ಪ್ರದರ್ಶನ ಅಂತಾನೇ ಬಿಂಬಿತವಾಗಿರೋ ಸಿದ್ದರಾಮೋತ್ಸವ ಸಮಾರಂಭಕ್ಕೆ ಡಿಕೆಶಿ ಹೋಗ್ತಾರಾ..? ಈ ಬಗ್ಗೆ ಕನಕಪುರ ಬಂಡೆ ಹೇಳಿದ್ದೇನು..? ತೋರಿಸ್ತೀವಿ,

Video Top Stories