
ಮುಸ್ಲಿಮ್ ಏರಿಯಾ ಅಂದ್ರೆ ಪಾಕಿಸ್ತಾನವೇ? ಸಿದ್ದರಾಮಯ್ಯ ಮಾನಸಿಕತೆಯೇ ಅಪಾಯಕಾರಿ!
ಮುಸ್ಲಿಮರು ಪ್ರದೇಶಗಳು ಅಂದರೆ ಅದು ಪಾಕಿಸ್ತಾನವೇ? ಈ ಕುರಿತು ಸಿದ್ದರಾಮಯ್ಯನವರು ಸರ್ಟಿಫಿಕೇಟ್ ನೀಡಿದ್ದಾರಾ? ಹಿಗೇ ಸಿದ್ದರಾಮಯ್ಯ ಹಾಗೂ ಶಿವಮೊಗ್ಗದಲ್ಲಿ ನಡೆದ ಘಟನೆಯನ್ನು ಸಿಟಿ ರವಿ ಖಂಡಿಸಿದ್ದಾರೆ.
ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಬ್ಯಾನರ್ ತೆಗೆದುಹಾಕಿದ ಘಟನೆಯಿಂದ ಗಲಭೆ, ಚಾಕು ಇರಿತ ಘಟನೆಗಳು ನಡೆದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಸಿದ್ದರಾಮಯ್ಯನವರ ಮನಸ್ಥಿತಿಯೇ ಅಪಾಯಕಾರಿ ಎಂದಿದ್ದಾರೆ. ಮುಸ್ಲಿಮರ ಏರಿಯಾ ಅಂದರೆ ಪಾಕಿಸ್ತಾನವೇ? ಸಿದ್ದರಾಮಯ್ಯ ಮಾನಸಿಕತೆ ಈ ದೇಶಕ್ಕೆ ಅಪಾಯಕಾರಿ ಎಂದು ಸಿಟಿ ರವಿ ಹೇಳಿದ್ದಾರೆ. ಸಿಟಿ ರವಿ ಹೇಳಿಕೆ ಇಲ್ಲಿದೆ.
Add Asianetnews Kannada as a Preferred Source
