RR ನಗರ ಬೈ ಎಲೆಕ್ಷನ್: ಮುನಿರತ್ನ ಪರ ಗೆಳೆಯರ ಗ್ಯಾಂಗ್ ಅಖಾಡಕ್ಕೆ..!
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಮುನಿರತ್ನ ಹಾಗೂ ಮೂಲ ಬಿಜೆಪಿಗ ತುಳಸಿ ಮುನಿರಾಜು ಗೌಡ ಟಿಕೆಟ್ ಪಡೆಯಲು ತೆರೆಮರೆಯಲ್ಲಿ ಭಾರಿ ಸರ್ಕಸ್ ನಡೆಸುತ್ತಿದ್ದಾರೆ. ಇದರ ಮಧ್ಯೆ ಮುನಿರತ್ನ ಪರ ಅವರ ಗ್ಯಾಂಗ್ ಬ್ಯಾಟಿಂಗ್ ಮಾಡಿದ್ದು, ಸಿಎಂ ಮೇಲೆ ಒತ್ತಡ ಹೇರಲು ಮುಂದಾಗಿದೆ.
ಬೆಂಗಳೂರು, (ಅ.12): RR ನಗರ ಕ್ಷೇತ್ರಕ್ಕೆ ಉಪಚುನಾವಣೆ ಟಿಕೆಟ್ ಬಿಜೆಪಿ ಭಾರೀ ಕಗ್ಗಂಟಾಗಿದೆ. ಮೂಲ ಮತ್ತು ವಲಸಿಗ ಬಿಜೆಪಿ ನಾಯಕರ ನಡುವೆ ಟಿಕೆಟ್ ಫೈಟ್ ಶುರುವಾಗಿದೆ.
ಮುಂದುವರೆದ ಉಪಚುನಾವಣೆ ಟಿಕೆಟ್ ಕಗ್ಗಂಟು; ತಡವಾಗುತ್ತಿರುವುದಕ್ಕೆ ಇದು ಕಾರಣ!
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಮುನಿರತ್ನ ಹಾಗೂ ಮೂಲ ಬಿಜೆಪಿಗ ತುಳಸಿ ಮುನಿರಾಜು ಗೌಡ ಟಿಕೆಟ್ ಪಡೆಯಲು ತೆರೆಮರೆಯಲ್ಲಿ ಭಾರಿ ಸರ್ಕಸ್ ನಡೆಸುತ್ತಿದ್ದಾರೆ. ಇದರ ಮಧ್ಯೆ ಮುನಿರತ್ನ ಪರ ಅವರ ಗ್ಯಾಂಗ್ ಬ್ಯಾಟಿಂಗ್ ಮಾಡಿದ್ದು, ಸಿಎಂ ಮೇಲೆ ಒತ್ತಡ ಹೇರಲು ಮುಂದಾಗಿದೆ.