Asianet Suvarna News Asianet Suvarna News

ಮನೆ ಮನೆಗೆ ತೆರಳಿ ಸುಧಾಕರ್‌ ಕ್ಯಾಂಪೇನ್‌: ಸ್ವಕ್ಷೇತ್ರದಲ್ಲಿ ಸಚಿವರ ಮತಬೇಟೆ

ಇಂದಿನಿಂದ ಸಚಿವ ಸುಧಾಕರ್‌ ಪ್ರಚಾರ ಆರಂಭ
ಪ್ರಚಾರಕ್ಕೂ ಮುನ್ನ ಸಚಿವರು ದೇವಸ್ಥಾನಕ್ಕೆ ಭೇಟಿ
ಪೆರೇಸಂದ್ರದ ರಾಜರಾಜೇಶ್ವರಿ ದೇಗುಲದಲ್ಲಿ ಪೂಜೆ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್‌ ಪ್ರಚಾರವನ್ನು ಮಾಡುತ್ತಿದ್ದಾರೆ. ಮನೆ ಮನೆಗೆ ತೆರಳಿ ಅವರು ಮತವನ್ನು ಯಾಚಿಸುತ್ತಿದ್ದಾರೆ. ಇದಕ್ಕೂ ಮೊದಲು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಸಚಿವರು, ಜಿಲ್ಲೆಗೆ ವೈದ್ಯಕೀಯ ಕಾಲೇಜನ್ನು ತಂದಿದ್ದೇನೆ. ಅಲ್ಲದೇ ಮೊಬೈಲ್‌ ಕ್ಲಿನಿಕ್‌ನನ್ನು ನಿಮ್ಮ ಊರುಗಳಿಗೆ ಕಳಿಸಿಕೊಡುವ ಕೆಲಸವನ್ನು ಮಾಡುತ್ತಿದ್ದೇನೆ. ಇದು ಸಂಜೀವಿನಿ ಮಾಡುವ ಕೆಲಸವಾಗಿದೆ. ಕೆಲವರು ಹೇಳುತ್ತಾರೆ ಸುನಾಮಿ ಅಂತಾ. ಸುನಾಮಿ ಬಂದ್ರೆ ಊರುಗಳೆಲ್ಲಾ ಕೊಚ್ಚಿಕೊಂಡು ಹೋಗಿ, ಜೀವರಾಶಿಗಳು ಸತ್ತು ಹೋಗುತ್ತವೆ. ನಿಮಗೆ ಅಂತಾ ಸುನಾಮಿ ಬೇಕಾ ಎಂದು ಮತದಾರರನ್ನು ಸುಧಾಕರ್‌ ಕೇಳುವ ಮೂಲಕ ನನಗೆ ಮತನೀಡಿ ಎಂದು ಮನವಿ ಮಾಡಿಕೊಂಡರು.

ಇದನ್ನೂ ವೀಕ್ಷಿಸಿ:ರಾಮದಾಸ್‌ ಅಪ್ಪಿ ಬೆನ್ನು ತಟ್ಟಿದ ಅಮಿತ್‌ ಶಾ !

Video Top Stories