Asianet Suvarna News Asianet Suvarna News

Legislative Council;'ಮಾತು ಉಳಿಸಿಕೊಳ್ಳಬೇಕಿದೆ' ನಾಗರಾಜ್‌ಗೆ ಟಿಕೆಟ್ ಕೊಡಿಸಲು ಲಾಡ್ ಬ್ಯಾಟಿಂಗ್!

* ಕರ್ನಾಟಕ ವಿಧಾನ ಪರಿಷತ್ ಚುನಾವಣೆ
*  ಕಾಂಗ್ರೆಸ್ ನಲ್ಲಿ ಟಿಕೆಟ್ ಗಾಗಿ ಹೆಚ್ಚಿದ ಪೈಪೋಟಿ
* ಅಖಾಡಕ್ಕೆ ಇಳಿದ ಸಂತೋಷ್ ಲಾಡ್
* ಮುಂಡರಗಿ ನಾಗರಾಜ್ ಗೆ ಬಳ್ಳಾರಿ ಟಿಕೆಟ್ ಕೊಡಿಸಲು ಲಾಡ್ ಯತ್ನ

ಬೆಂಗಳೂರು(ನ. 20)  ರಾಜ್ಯ ವಿಧಾನ ಪರಿಷತ್‌ನ (Legislative Council) ಚುನಾವಣೆಗೆ ಬಿಜೆಪಿ (BJP)ಮೊದಲ ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಡಿತ್ತು. ಈಗ ಸಹಜವಾಗಿಯೇ ಕಾಂಗ್ರೆಸ್‌ (Congress) ನಲ್ಲಿಯೂ ಕಸರತ್ತು-ಸರ್ಕಸ್ ಆರಂಭವಾಗಿದೆ. 

Legislative Council; ಬಿಜೆಪಿಯಿಂದ 20 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಅಚ್ಚರಿ ಮುಖಗಳಿಗೆ ಚಾನ್ಸ್!

ಕಾಂಗ್ರೆಸ್‌ನಿಂದ ಬಳ್ಳಾರಿ ಟಿಕೆಟ್ ನ್ನು ಮುಡರಗಿ ನಾಗರಾಜ್ ಅವರಿಗೆ ಕೊಡಬೇಕು ಎಂದು  ಮಾಜಿ ಶಾಸಕ ಸಂತೋಷ್ ಲಾಡ್ (Santhosh Lad) ಬ್ಯಾಟಿಂಗ್ ನಡೆಸುತ್ತಿದ್ದಾರೆ. ಡೆಲ್ಲಿಯಲ್ಲಿರುವ (Newdelhi) ಲಾಡ್ ಈ ಬಗ್ಗೆ ಹೈಕಮಾಂಡ್ ಜತೆ ಮಾತನಾಡಿದ್ದು ಕೊಟ್ಟ ಮಾತು ಉಳಿಸಿಕೊಳ್ಳಬೇಕಾಗಿದೆ ಎಂದಿದ್ದಾರೆ.