ಬಿಜೆಪಿ ಮಣಿಸಲು ಮಾಸ್ಟರ್ ಪ್ಲಾನ್, ಕಾಂಗ್ರೆಸ್‌ನಿಂದ ಕೋವಿಡ್ ಫೈಲ್ಸ್ ಸಾಕ್ಷ್ಯ ಚಿತ್ರ ತಯಾರಿ!

ರಮೇಶ್ ಜಾರಕಿಹೊಳಿ ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಪ್ರತಿಮೆ ಗುದ್ದಾಟ, ಶಿಂಧೆ ಬಣಕ್ಕೆ ಶಿವಸೇನೆ ಹೆಸರು ಪಕ್ಷದ ಚಿಹ್ನೆ ನೀಡಿರುವ ಹಿಂದಿದೆ ಮತ್ತೊಂದು ಘಟನೆ, ದಕ್ಷಿಣ ಆಫ್ರಿಕಾದಿಂದ ಮತ್ತೆ ಬಂತು 12 ಚೀತಾ, ಸಿದ್ದರಾಮಯ್ಯನವರ ಎದುರೇ ಕುರುಬ ನಾಯಕರ ಭಿನ್ನಮತ ಸ್ಫೋಟ ಸೇರಿದಂತೆ ಇಂದಿನ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ರಾಜ್ಯ ಬಿಜೆಪಿ ಕೋವಿಡ್ ನಿರ್ವಹಣೆ ಅಸಮರ್ಪಕವಾಗಿ ಮಾಡಿದೆ. ಚಾಮರಾಜನಗರದ ಆಕ್ಸಿಜನ್ ದುರಂತ, ಬೆಡ್ ಸಿಗದೆ ಪರದಾಡಿದ ರೋಗಿಗಳು, ಕೋವಿಡ್ ಮೃತರ ಅಂತ್ಯಕ್ರಿಯೆ, ಲಾಕ್‌ಡೌನ್‌ನಿಂದ ಜನರ ಪರದಾಟ ಕುರಿತು ಸಿನಿಮಾ ಮಾಡಲು ಮುಂದಾಗಿದ್ದ ಕಾಂಗ್ರೆಸ್ ಇದೀಗ ಸಾಕ್ಷ್ಯ ಚಿತ್ರಕ್ಕೆ ಸೀಮಿತಗೊಳಿಸಿದೆ. ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾರನ್ನು ಸಂಪರ್ಕಿಸಿದ ಬಳಿಕ ಸಿನಿಮಾ ತಯಾರಿ ಕೈಬಿಟ್ಟು ಸಾಕ್ಷ್ಯಚಿತ್ರ ತಯಾರಿಗೆ ಕಾಂಗ್ರೆಸ್ ಮುಂದಾಗಿದೆ. ಕೋವಿಡ್ ಫೈಲ್ಸ್ ಚಿತ್ರಕ್ಕೆ 20 ಕೋಟಿ ರೂಪಾಯಿ ಮೊತ್ತ ಆಗಲಿದೆ ಎಂದ ವರ್ಮಾ ಮಾತಿಗೆ ಕಾಂಗ್ರಸ್ ಕಂಗಾಲಾಗಿದೆ. ಹೀಗಾಗಿ ಸಾಕ್ಷ್ಯ ಚಿತ್ರದ ಮೂಲಕ ಬಿಜೆಪಿ ದುರಾಡಳಿತ ಬಿಚ್ಚಿಡಲು ಮುಂದಾಗಿದೆ. ಇದೀಗ 5 ಕೋಟಿ ರೂಪಾಯಿ ಮೊತ್ತದಲ್ಲಿ ಸಾಕ್ಷ್ಯಚಿತ್ರ ಶೀಘ್ರದಲ್ಲೇ ತೆರೆಗೆ ಅಪ್ಪಳಿಸಲಿದೆ. 

Add Asianetnews Kannada as a Preferred SourcegooglePreferred

Related Video