Asianet Suvarna News Asianet Suvarna News

ಕರ್ನಾಟಕ ಕುರುಕ್ಷೇತ್ರ ಗೆಲ್ಲಲು ರಣಕಹಳೆ: ಶತ್ರುಸೈನ್ಯಕ್ಕೆ ರಣವೀಳ್ಯ ಕೊಟ್ಟ ಕೇಸರಿ ಪಡೆ!

ಕರ್ನಾಟಕ ಕುರುಕ್ಷೇತ್ರ ಗೆಲ್ಲಲು ಕೇಸರಿ ರಣಕಹಳೆ..! ಶತ್ರುಸೈನ್ಯಕ್ಕೆ ರಣವೀಳ್ಯ ಕೊಟ್ಟ ಕೇಸರಿ ಪಡೆ..! ತಾಕತ್ತಿದ್ರೆ.. ಧಮ್ಮಿದ್ರೆ ನಮ್ಮನ್ನು ತಡೆದು ನಿಲ್ಲಿಸಿ..!  ಕಾಂಗ್ರೆಸ್'ಗೆ ನೇರ ಸವಾಲೆಸೆದ ಸಿಎಂ ಬೊಮ್ಮಾಯಿ..! 18ರ ವ್ಯೂಹ ಭೇದಿಸಲು ಕೇಸರಿ ಮಹಾತಂತ್ರ..! ಇದೇ ಇವತ್ತಿನ ಸುವರ್ಣ ಸ್ಪೆಷಲ್, ಕೇಸರಿ ರಣವೀಳ್ಯ.

ಬೆಂಗಳೂರು, (ಸೆಪ್ಟೆಂಬರ್.11): ವಿಧಾನಸಭಾ ಚುನಾವಣೆಗೆ 7 ತಿಂಗಳು ಮೊದಲೇ ಕೇಸರಿ ಪಡೆ ಮೈಕೊಡವಿ ಎದ್ದು ನಿಂತಿದೆ. ರಣೋತ್ಸಾಹದಲ್ಲಿ ಮುನ್ನುಗ್ಗುತ್ತಿರೋ ಪ್ರತಿಪಕ್ಷ ಕಾಂಗ್ರೆಸ್'ಗೆ ರಣವೀಳ್ಯ ಕೊಟ್ಟೇ ಬಿಟ್ಟಿದೆ. 18ರ ವ್ಯೂಹ ಭೇದಿಸಲು ಮಹಾತಂತ್ರ ಹೆಣೆದಿರೋ ಬಿಜೆಪಿಯ ಅಶ್ವಮೇಧ ದೊಡ್ಡಬಳ್ಳಾಪುರದಿಂದಲೇ ಶರುವಾಗಿದೆ. 

ಬಿಜೆಪಿ ಬಾಹುಳ್ಯವಿಲ್ಲದ ಸ್ಥಳದಲ್ಲೇ ಮೊದಲ ಜನಸ್ಪಂದನ ಸಮಾವೇಶ, ಬಿಜೆಪಿ ಟಾರ್ಗೆಟ್ ಏನು..?

2023ರಲ್ಲೂ ನಮ್ಮದೇ ಸರ್ಕಾರ ಅಂತ ಪ್ರತಿಜ್ಞೆ ಮಾಡಿದ್ದಾರೆ ಸಿಎಂ ಬೊಮ್ಮಾಯಿ ..! ಅಷ್ಟಕ್ಕೂ ಬಿಜೆಪಿಯ ಜನಸ್ಪಂದನಾ ಸಮಾವೇಶದಲ್ಲಿ ಏನೇನಾಯ್ತು..? ಕಮಲಾಧಿಪತಿಗಳ ಆರ್ಭಟ ಹೇಗಿತ್ತು..? ಬನ್ನಿ ನೋಡೋಣ.

Video Top Stories