Asianet Suvarna News Asianet Suvarna News

ಹಾಸನ ಫೈಟ್‌ಗೆ ಬಿಗ್‌ ಟ್ವಿಸ್ಟ್‌: ಸ್ವರೂಪ್‌ ಯಾರು? ಗೊತ್ತಿಲ್ಲಪ್ಪ ಎಂದ ರೇವಣ್ಣ

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನ ಭೇಟಿಯಾದ ಹಾಸನ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿ ಸ್ವರೂಪ್. ಎಚ್‌ಡಿಕೆ, ಸ್ವರೂಪ್‌ ಬೆನ್ನಲ್ಲೇ ಸಿಟ್ಟಿಗೆದ್ದ ಎಚ್‌.ಡಿ. ರೇವಣ್ಣ, ಸ್ವರೂಪ್‌ ಯಾರು?, ನನಗೆ ಅವರು ಗೊತ್ತಿಲ್ಲ ಎಂದ ರೇವಣ್ಣ.

First Published Mar 30, 2023, 11:05 AM IST | Last Updated Mar 30, 2023, 11:05 AM IST

ಹಾಸನ(ಮಾ.30):  ಹಾಸನ ಜೆಡಿಎಸ್‌ ಅಭ್ಯರ್ಥಿಯ ಆಯ್ಕೆಯ ಕಗ್ಗಂಟು ತಾರಕ್ಕಕ್ಕೇರಿದೆ. ದಿನಕ್ಕೊಂದು ಬೆಳವಣಿಗೆಗಳ ಮಧ್ಯೆ ಇದೀಗ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ. ಹಾಸನ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿ ಸ್ವರೂಪ್‌ ಅವರು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನ ಭೇಟಿಯಾಗಿದ್ದಾರೆ. ಎಚ್‌ಡಿಕೆ, ಸ್ವರೂಪ್‌ ಬೆನ್ನಲ್ಲೇ ಎಚ್‌.ಡಿ. ರೇವಣ್ಣ ಸಿಟ್ಟಿಗೆದ್ದಿದ್ದಾರೆ. ಸ್ವರೂಪ್‌ ಯಾರು?, ನನಗೆ ಅವರು ಗೊತ್ತಿಲ್ಲ ಅಂತ ರೇವಣ್ಣ ಅವರು ಹೇಳಿದ್ದಾರೆ. ನಿಷ್ಟಾವಂತ ಕಾರ್ಯಕರ್ತನಿಗೆ ಟಿಕೆಟ್‌ ಎಂಬ ಕುಮಾರಸ್ವಾಮಿ ಹೇಳಿಕೆಗೆ ಎಚ್‌.ಡಿ. ರೇವಣ್ಣ ಟಾಂಗ್‌ ಕೊಟ್ಟಿದ್ದಾರೆ. ಕುಮಾರಣ್ಣ ಹೇಳ್ತಾರೆ ನಾವೇನ್‌ ಮಾಡೋಕೆ ಆಗುತ್ತೆ ಅಂತ, ಸಾಮಾನ್ಯ ಕಾರ್ಯಕರ್ತ ಯಾರು ಅಂತ ಗೊತ್ತಿಲ್ಲಪ್ಪ ಅಂತ ರೇವಣ್ಣ ಅವರು ಹೇಳಿದ್ದಾರೆ. 

ಕರ್ನಾಟಕ ಚುನಾವಣೆ ಮೂಲಕ ಕ್ರಾಂತಿ ಬರೆದ ಆಯೋಗ, ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ!

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.