Asianet Suvarna News Asianet Suvarna News

ಮೋದಿ ವಿರುದ್ಧ ಕಾಂಗ್ರೆಸ್ ನಿಗೂಢ ಖೆಡ್ಡಾ..?! : 50 ವರ್ಷದ ಹಿಂದೆ ಕೈ ಬತ್ತಳಿಕೆಯಲ್ಲಿತ್ತಂತೆ ಆ ಅಸ್ತ್ರ..!

ಪಂಚರಾಜ್ಯಗಳಲ್ಲೂ ಕಾಂಗ್ರೆಸ್ ವಿಚಿತ್ರ ವ್ಯೂಹ!
ರಾಜಸ್ಥಾನದ ಸಿಂಹಾಸನ ಗೆಲ್ಲೋಕೆ ಕೈ ಪ್ಲಾನ್!
ಎಲ್ಲೆಲ್ಲಿ ಗ್ಯಾರೆಂಟಿ ಪ್ರಯೋಗಗೊಳ್ಳಲಿದೆ ಆ ಅಸ್ತ್ರ..?

ಕರ್ನಾಟಕ ಕುರುಕ್ಷೇತ್ರ ಕಳೆದು, ಹೊಸ ಸರ್ಕಾರವೊಂದು ರೂಪುಗೊಂಡು, ಮುಂದಿನ ಬಜೆಟ್‌ಗೆ ಸಕಲ ಸಿದ್ಧತೆ ನಡೀತಾ ಇದೆ. ಕೊಟ್ಟ ವಾಗ್ದಾನ ಪೂರೈಸಿಕೊಳ್ಳೋದಕ್ಕೆ, ರಾಜ್ಯ ಕಾಂಗ್ರೆಸ್ ಪಾಳಯ ಏನೇನು ರಹದಾರಿಗಳಿವೆ ಅನ್ನೋ ಹುಡುಕಾಟದಲ್ಲಿದೆ. ರಾಜ್ಯ ಕಾಂಗ್ರೆಸ್ ಪರಿಸ್ಥಿತಿ ಈ ರೀತಿ ಇದ್ರೆ, ಇನ್ನು ರಾಷ್ಟ್ರೀಯ ಕಾಂಗ್ರೆಸ್ ಕತೆನೇ ಬೇರೆ.. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಾಲಿಗೆ, ಕರ್ನಾಟಕದ ಗೆಲುವು ಈಗ ಮುಗಿದ ಅಧ್ಯಾಯ. ಸಿದ್ದರಾಮಯ್ಯ ಸಾರಥ್ಯದಲ್ಲಿ, ಡಿಕೆ ಶಿವಕುಮಾರ್ ನೇತೃತ್ವದಲ್ಲಿ, ಸರ್ಕಾರ ಹೇಗೆ ನಡೆದುಕೊಂಡು ಹೋಗುತ್ತೆ. ಹಾಗಾಗಿನೇ, ಈ ಬಗ್ಗೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಯಾರೂ ತಲೆಕೆಡಿಸಿಕೊಳ್ಳೋ ಅವಶ್ಯಕತೆ ಇಲ್ಲ.. ಆದ್ರೆ, ಆ ಕಾಂಗ್ರೆಸ್ ಮುಂದೆ, ಈಗ ಅತಿ ದೊಡ್ಡ ಸವಾಲೊಂದು ಬಂದು ನಿಂತಿದೆ.. ಆ ಸವಾಲು ಗೆಲ್ಲೋದಕ್ಕೆ, ನಿಗೂಢ ವ್ಯೂಹ ರಚಿಸಿಕೊಂಡು ಯುದ್ಧರಂಗಕ್ಕೆ ಧುಮುಕ್ತಿದೆ. 

ಇದನ್ನೂ ವೀಕ್ಷಿಸಿ: RTI ಕಾರ್ಯಕರ್ತನನ್ನ ಕೊಂದುಬಿಟ್ಟರಾ ಪೊಲೀಸರು?: ಅರೆಸ್ಟ್ ಆಗಿ 2 ಗಂಟೆಯಲ್ಲೇ ಹರೀಶ ಮೃತಪಟ್ಟಿದ್ಯಾಕೆ ?

Video Top Stories