ಜಮೀರ್ ಮನೆ ಮೇಲೆ ಎಸಿಬಿ ದಾಳಿ: ಬಿಜೆಪಿ ಕೈವಾಡ ಎಂದ ಕಾಂಗ್ರೆಸ್ಗೆ ಬೊಮ್ಮಾಯಿ ತಿರುಗೇಟು
* ಬಿಜೆಪಿ ಕೈವಾಡ ಅನ್ನೋದು ಕಾಂಗ್ರೆಸ್ ಸ್ಲೋಗನ್, ಇದು ಕಾಂಗ್ರೆಸ್ಸಿಗರ ಹೊಸ ಡೈಲಾಗ್ ಏನಲ್ಲ
* ರಾಜಕೀಯ ಬಣ್ಣ ಕೊಡೋದು ಸರ್ವೇ ಸಾಮಾನ್ಯ
* ಕಾಂಗ್ರೆಸ್ ಅವಧಿಯಲ್ಲಿ ಪಿಎಸ್ಐ ಹಗರಣ ನಡದಿದ್ದರೆ ಮುಚ್ಚಿ ಹಾಕುತ್ತಿದ್ದರು
ಬೆಂಗಳೂರು(ಜು.05): ಜಮೀರ್ ಅಹ್ಮದ್ ಖಾನ್ ನಿವಾಸದ ಮೇಲೆ ಎಸಿಬಿ ದಾಳಿಗೆ ಬಿಜೆಪಿ ಕೈವಾಡ ಎಂದ ಕಾಂಗ್ರೆಸ್ಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಬಿಜೆಪಿ ಕೈವಾಡ ಅನ್ನೋದು ಕಾಂಗ್ರೆಸ್ ಸ್ಲೋಗನ್, ಇದು ಕಾಂಗ್ರೆಸ್ಸಿಗರ ಹೊಸ ಡೈಲಾಗ್ ಏನಲ್ಲ, ರಾಜಕೀಯ ಬಣ್ಣ ಕೊಡೋದು ಸರ್ವೇ ಸಾಮಾನ್ಯ, ಸಮಯ, ಸಾಕ್ಷಿ, ಆಧರಿಸಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಅಂತ ಹೇಳಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಪಿಎಸ್ಐ ಹಗರಣ ನಡದಿದ್ದರೆ ಮುಚ್ಚಿ ಹಾಕುತ್ತಿದ್ದರು. ಈ ಹಿಂದೆ ಇಂತಹ ಕೇಸ್ಗಳನ್ನ ಮುಚ್ಚಿ ಹಾಕಿದೆ ಅಂತ ಕಾಂಗ್ರೆಸ್ ಸಿಎಂ ಬೊಮ್ಮಾಯಿ ಹರಿಹಾಯ್ದಿದ್ದಾರೆ.
ಹುಬ್ಬಳ್ಳಿ: ಜಿಪಿ ಬಿಲ್ಡರ್ಸ್ನ ಜಿ.ಜಿ. ಹೀರೆಮಠಗೆ ಕರ್ನಾಟಕ ಬಿಸ್ನೆಸ್ ಅವಾರ್ಡ್