Asianet Suvarna News Asianet Suvarna News

ರಾಜ್ಯ ಗೆಲ್ಲಲು ಚಾಣಕ್ಯನ ತಂತ್ರಗಾರಿಕೆ: ಗೌಡರ ಭದ್ರಕೋಟೆಯಲ್ಲಿ 'ಜಾತಿ ಅಸ್ತ್ರ'

ಹಳೇ ಮೈಸೂರು ಭಾಗದಲ್ಲಿ ಕೇಸರಿ ಪತಾಕೆ ಹಾರಿಸುವ ಅಮಿತ್ ಶಾ ತಂತ್ರ ರೂಪಿಸಿದ್ದು, ಗೌಡರ ಕೋಟೆಯಲ್ಲಿ ಈ ಬಾರಿ ಕಮಲ ಅರಳುತ್ತಾ ಎಂಬ ಕುತೂಹಲ ಮೂಡಿದೆ.
 

ದಕ್ಷಿಣ ಭಾರತದ ಹೆಬ್ಬಾಗಿಲನ್ನು ಭದ್ರ ಪಡಿಸಿಕೊಳ್ಳಲು ಕೇಸರಿ ಚಾಣಕ್ಯ ಅಮಿತ್ ಶಾ ರೋಚಕ ತಂತ್ರ ರೂಪಿಸುತ್ತಿದ್ದು, ಆ ತಂತ್ರಗಾರಿಕೆಯಲ್ಲಿ ಗೌಡರ ಕೋಟೆಯೇ ಅವರ ಟಾರ್ಗೆಟ್ ಆಗಿದೆ. ಕರ್ನಾಟಕ ಕುರುಕ್ಷೇತ್ರವನ್ನು ಗೆದ್ದು ಕೇಸರಿ ಸಾಮ್ರಾಜ್ಯ ಕಟ್ಟಲು ಹೊರಟಿರೋ ಅಮಿತ್ ಶಾ, ಜಾತಿವ್ಯೂಹವೊಂದನ್ನು ಹೆಣೆದಿದ್ದಾರೆ. ಗೌಡರ ಒಡ್ಡೋಲಗದಲ್ಲಿ ಕೇಸರಿ ದರ್ಬಾರ್ ನಡೆಸಲು ಈ ಜಾತಿವ್ಯೂಹವೇ ಅಸ್ತ್ರ ಅಂತಿದ್ದಾರೆ. ಪೂರ್ಣ ಬಹುಮತದ ಬಿಜೆಪಿ ಸರ್ಕಾರಕ್ಕೆ ಅಡ್ಡಿಯಾಗಿರೋದೇ ಒಕ್ಕಲಿಗರ ಕೋಟೆ ಹಳೇ ಮೈಸೂರು ಪ್ರಾಂತ್ಯ. ಅದೇ ಪ್ರಾಂತ್ಯದಲ್ಲಿ ಕೇಸರಿ ಪತಾಕೆ ಹಾರಿಸ್ಬೇಕು ಅನ್ನೋದು ಬಿಜೆಪಿ ಚಾಣಕ್ಯನ ಕನಸು. ಅಷ್ಟಕ್ಕೂ ಏನಿದು ಅಮಿತ್ ಶಾ ಬರೆದ ಈ ವಿಕ್ಟರಿ ಶಾಸನ ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

Congress convention: ಬಿಜೆಪಿ ಶಕ್ತಿ ಕೇಂದ್ರ ಹುಬ್ಬಳ್ಳಿ-ಧಾರವಾಡದಲ್ ...