Asianet Suvarna News Asianet Suvarna News

Today Horoscope: ಇಂದು ಕಾರ್ತಿಕ ಸೋಮವಾರವಿದ್ದು, ಹೀಗೆ ಪರಮೇಶ್ವರನ ಆರಾಧನೆ ಮಾಡಿ..

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಶರದ್‌ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ಸೋಮವಾರ, ಅಷ್ಟಮಿ ತಿಥಿ, ಧನಿಷ್ಠ ನಕ್ಷತ್ರ.

ಇಂದು ಕಾರ್ತಿಕ ಸೋಮವಾರವಾಗಿದ್ದು, ಪರಮೇಶ್ವರನ ಆರಾಧನೆಗೆ ಇದು ಅತ್ಯಂತ ಪ್ರಶಸ್ತವಾದ ಕಾಲವಾಗಿದೆ. ಈಶ್ವರನ ಸನ್ನಿಧಾನದಲ್ಲಿ ಬಿಲ್ವಾರ್ಚನೆ ಮಾಡಿಸಿ ಜೊತೆಗೆ ದೀಪ ದಾನವನ್ನು ಮಾಡಿ.ಇದರಿಂದ ಕಣ್ಣಿನ ತೊಂದರೆ ಇದ್ದರೆ ನಿವಾರಣೆಯಾಗಲಿದ್ದು, ನಿಮ್ಮ ಪಾಪಗಳು ಸಹ ದೂರವಾಗಲಿವೆ. ಇಂದು ಉಪವಾಸವನ್ನು ಆಚರಿಸಬಹುದು. ಉಪವಾಸ ಮಾಡುವವರು ಶಿವನಿಗೆ ಅಭಿಷೇಕ ಮಾಡಿದ ಬಳಿಕ ಆರಂಭಿಸಬಹುದು. 

ಇದನ್ನೂ ವೀಕ್ಷಿಸಿ:  ಬಿಜೆಪಿ ತೊರೆದ ನಿಮಗೆ ಕಾಂಗ್ರೆಸ್ ಕೊಟ್ಟಿದ್ದೇನು? ಡಿ.ಕೆ. ಶಿವಕುಮಾರ್ ಸಿಎಂ ಆಗ್ಬೇಕಾ? ಈ ಬಗ್ಗೆ ಸವದಿ ಹೇಳಿದ್ದೇನು ?

Video Top Stories