
Today Horoscope: ಇಂದು ಘಾತ ಚತುರ್ದಶಿ ಇದ್ದು, ಅಸಹಜವಾಗಿ ಸಾವಿಗೀಡಾದವರಿಗೆ ಗೌರವ ಸೂಚಿಸಿ
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ,ಶುಕ್ರವಾರ, ಚತುರ್ದಶಿ ತಿಥಿ, ಉತ್ತರ ನಕ್ಷತ್ರ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಭಾದ್ರಪದ ಮಾಸದ ಚತುರ್ದಶಿಯನ್ನು ಘಾತ ಚತುರ್ದಶಿ ಎಂದು ಕರೆಯಲಾಗುತ್ತದೆ. ಈ ದಿನ ಅಸಹಜವಾಗಿ ಸಾವಿಗೀಡಾದ್ದವರಿಗೆ ಇಂದು ವಿಶೇಷ ಗೌರವವನ್ನು ಸೂಚಿಸಿ. ನಾಳೆ ಅಮಾವಾಸ್ಯೆ ಇದ್ದು, ತಪ್ಪದೇ ನಿಮ್ಮ ಪೂರ್ವಜರನ್ನು ನೆನೆಯಿರಿ. ಮೇಷ ರಾಶಿಯವರಿಗೆ ಸಂಗಾತಿಯಲ್ಲಿ ಭಿನ್ನಾಭಿಪ್ರಾಯ ಬರಲಿದೆ. ಪೂರ್ವೀಕರ ಸ್ಮರಣೆ ಮಾಡಿ. ಇಂದು ಈಶ್ವರನಿಗೆ ರುದ್ರಾಭಿಷೇಕ ಮಾಡಿಸಿ.
ಇದನ್ನೂ ವೀಕ್ಷಿಸಿ: ಪ್ಯಾಲೆಸ್ತಿನ್ ಶರಣಾಗತಿಗೆ ಇಸ್ರೇಲ್ ರಣತಂತ್ರ, ಕಟ್ಟಕಡೆ ನಾಗರೀಕನೂ ಕೇಳಬೇಕು ಕ್ಷಮೆ!