
ಪ್ಯಾಲೆಸ್ತಿನ್ ಶರಣಾಗತಿಗೆ ಇಸ್ರೇಲ್ ರಣತಂತ್ರ, ಕಟ್ಟಕಡೆ ನಾಗರೀಕನೂ ಕೇಳಬೇಕು ಕ್ಷಮೆ!
ಹಮಾಸ್ ಉಗ್ರರ ಸದೆಬಡಿಯಲು ಇಸ್ರೇಲ್ಗೆ ಭರಪೂರ ನೆರವು ಸಿಗುತ್ತಿದೆ. ಆದರೆ ಪ್ಯಾಲೆಸ್ತಿನ್ಗೆ ನೆರವು ನೀಡಲು ಅರಬ್ ರಾಷ್ಟ್ರಗಳೇ ಹಿಂದೇಟು ಹಾಕುತ್ತಿದೆ. ಇಸ್ರೇಲ್ ಹಾಗೂ ಅಮೆರಿಕ ಎಚ್ಚರಿಕೆ ನೀಡಿದ ಬೆನ್ನಲ್ಲೇ ಇತ್ತ ಹಮಾಸ್ ಉಗ್ರರಿಗೆ ಶರಣಾಗತಿ ಬಿಟ್ಟರೇ ಸದ್ಯಕ್ಕೆ ಬೇರೆ ಮಾರ್ಗ ಉಳಿದಿಲ್ಲ.
ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ ಇಸ್ರೇಲ್ ಪ್ರತಿದಾಳಿ ತೀವ್ರಗೊಳಿಸಿದೆ. ಗಾಜಾ ಪಟ್ಟಿ ಮೇಲೆ ನಿರಂತರ ದಾಳಿ ನಡೆಸಿದೆ. ಇಸ್ರೇಲ್ಗೆ ಯದ್ಧ ನಿಲ್ಲಿಸುವ ಯಾವುದೇ ಆಲೋಚನೆ ಇದ್ದಂತಿಲ್ಲ. ಇದೀಗ ಪ್ಯಾಲೆಸ್ತಿನ್ನ ಕಟ್ಟಕಡೆ ನಾಗರೀಕನೂ ಶರಣಾಗತಿ ಕೋರುವವರೆಗೂ ದಾಳಿ ಮುಂದುವರಿಯಲಿದೆ ಅನ್ನೋದು ಇಸ್ರೇಲ್ ಸಿದ್ಧಾಂತ. ಗಾಜಾಪಟ್ಟಿಗೆ ಎಲ್ಲಾ ಸೌಲಭ್ಯಗಳನ್ನು ನಿಲ್ಲಿಸಿರುವ ಇಸ್ರೇಲ್ ಸಂಪೂರ್ಣ ನಾಶಕ್ಕೆ ಆದೇಶ ನೀಡಿದೆ. ಇತ್ತ ಅಮೆರಿಕ ಕಾರ್ಯದರ್ಶಿ ಇಸ್ರೇಲ್ಗೆ ಭೇಟಿ ನೀಡಿದ್ದು, ಮಹತ್ವದ ಮಾತುಕತೆ ನಡೆಸಿದ್ದಾರೆ.
Add Asianetnews Kannada as a Preferred Source
