Today Horoscope: ಇಂದು ಆಷಾಢ ಮಾಸದ ಕೊನೆ ಶುಕ್ರವಾರ...ಮಹಾಲಕ್ಷ್ಮೀ ಆರಾಧನೆ ಹೀಗೆ ಮಾಡಿ..

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ,ಶುಕ್ರವಾರ , ದ್ವಾದಶಿ ತಿಥಿ, ರೋಹಿಣಿ ನಕ್ಷತ್ರ. 

ಆಷಾಢ ಮಾಸದ ಕೊನೆ ಶುಕ್ರವಾರ ಇದಾಗಿದೆ. ಪ್ರತಿ ಶುಕ್ರವಾರ ಮಹಾಲಕ್ಷ್ಮೀ ಪೂಜೆಯನ್ನು ಮಾಡಲಾಗುತ್ತದೆ. ಆಷಾಢ ಶುಕ್ರವಾರದ ದಿನ ಮಹಾಲಕ್ಷ್ಮೀಗೆ ವಿಶಿಷ್ಟವಾದ ಪಠಣವಿದೆ. ಇದನ್ನು ಈ ದಿನ ಹೇಳಿ. ಜೊತೆಗೆ ಇಂದು ಒಂದು ತುಪ್ಪದ ದೀಪ ಹಚ್ಚಿ.ಆಷಾಢ ಶುಕ್ರವಾರ ಈ ಲಕ್ಷ್ಮಿ ಮಂತ್ರ ಪಠಿಸಿದರೆ ಸಂಪತ್ತಿಗೆ ಬರಗಾಲವೇ ಇರದು. ಸೋಮಾರಿಗಳು ವಾಸಿಸುವಂತಹ ಮನೆಗಳಲ್ಲಿ ಲಕ್ಷ್ಮಿ ದೇವಿಯು ನೆಲೆಸಲು ಇಷ್ಟಪಡುವುದಿಲ್ಲ.

ಇದನ್ನೂ ವೀಕ್ಷಿಸಿ: News Hour: ವಿಧಾನಸಭೆಯಲ್ಲಿ ಇಂದು ವರ್ಗಾವಣೆ ಜಟಾಪಟಿ!

Related Video