Asianet Suvarna News Asianet Suvarna News

ಅನುಕಂಪ ಗಿಟ್ಟಿಸೋದು ಇನ್ನಾದ್ರು ಬಿಡಿ: ಎಚ್‌ಡಿಕೆ ನಡೆಗೆ ಚೆಲುವರಾಯಸ್ವಾಮಿ ಕಿಡಿ

ಕಾಂಗ್ರೆಸ್ ನಾಯಕ ಚೆಲುವಾರಾಯಸ್ವಾಮಿ, ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಮತ್ತೆ ಹರಿಹಾಯ್ದರು. ಮಂಡ್ಯದಲ್ಲಿ 7 ಮಂದಿ ಜೆಡಿಎಸ್ ಶಾಸಕರಿದ್ರೂ ಜಿಲ್ಲೆಗಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು. ರೈತರ ದುಸ್ಥಿತಿಗೆ ತಾನು ಕಾರಣ, ನಾನು ಮೋಸ ಮಾಡಿದ್ದೀನಿ, ಎಂದು ಎಚ್‌ಡಿಕೆ ತಪ್ಪೊಪ್ಪಿಕೊಳ್ಳಲಿ, ಇಲ್ಲಿ ಬಂದು ಅನುಕಂಪ ಗಿಟ್ಟಿಸುವ ಪ್ರಯತ್ನ ಬೇಡ ಎಂದು ಗುಡುಗಿದರು.  

ಮಂಡ್ಯ (ಅ.06): ಕಾಂಗ್ರೆಸ್ ನಾಯಕ ಚೆಲುವಾರಾಯಸ್ವಾಮಿ, ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಮತ್ತೆ ಹರಿಹಾಯ್ದರು. ಮಂಡ್ಯದಲ್ಲಿ 7 ಮಂದಿ ಜೆಡಿಎಸ್ ಶಾಸಕರಿದ್ರೂ ಜಿಲ್ಲೆಗಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಚುನಾವಣೆಗೆ ಮುನ್ನ ಯಾರನ್ನೂ ಕೇಳದೆ ನಾಲೆಗೆ ನೀರು ಬಿಟ್ರು, ಆದ್ರೆ ಚುನಾವಣೆ ನಂತ್ರ ನೀರು ಬಿಡಲು ಹಿಂದೇಟು ಹಾಕಿದ್ರು, ಕಬ್ಬು ಬೆಳೆಗಾರರ ದುಸ್ಥಿತಿಗೆ ಇವ್ರೇ ಕಾರಣ ಎಂದು ಗುಡುಗಿದರು.  

ರೈತರ ದುಸ್ಥಿತಿಗೆ ತಾನು ಕಾರಣ, ನಾನು ಮೋಸ ಮಾಡಿದ್ದೀನಿ, ಎಂದು ಎಚ್‌ಡಿಕೆ ತಪ್ಪೊಪ್ಪಿಕೊಳ್ಳಲಿ, ಇಲ್ಲಿ ಬಂದು ಅನುಕಂಪ ಗಿಟ್ಟಿಸುವ ಪ್ರಯತ್ನ ಬೇಡ ಎಂದು ಚೆಲುವರಾಯ ಸ್ವಾಮಿ ಸವಾಲೆಸೆದರು.

Video Top Stories