Asianet Suvarna News Asianet Suvarna News

ಹಿಂದೂ ರಾಷ್ಟ್ರ ಮಾಡೋದು ಅಂದ್ರೆ ಏನು ? ಅಯೋಧ್ಯೆಯಲ್ಲಿ ದಲಿತರಿಗೆ ಪೂಜೆ ಸಲ್ಲಿಸೋಕೆ ಅವಕಾಶ ಇದೆಯಾ?

ರಾಮ ಮಂದಿರ ನಿರ್ಮಾಣ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಉಡುಪಿಯ ಪೇಜಾವರ ಶ್ರೀ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ. ಇದರ ವಿಡಿಯೋ ಇಲ್ಲಿದೆ..

ರಾಮ ಮಂದಿರ (Rama Mandir) ಉದ್ಘಾಟನೆಗೆ ಸಂತರು, ನಾನಾ ಪಕ್ಷದ ಮುಖಂಡರು, ತಾರೆಯರು ಸೇರಿದಂತೆ ಮುಖ್ಯವಾದವರಿಗೆ ಆಹ್ವಾನ ನೀಡಲಾಗಿದೆ. ಆದ್ರೆ ಹೆಚ್ಚು ಜನರನ್ನು ಕರೆದಿಲ್ಲ. ಕಾರಣ ಭದ್ರತೆ ತೊಂದರೆಯಾಗುವ ಹಿನ್ನೆಲೆ ಸುಮಾರು ಆರು ಸಾವಿರ ಜನರನ್ನು ಮಾತ್ರ ಕರೆದಿದ್ದೇವೆ. ಮಂದಿರದಲ್ಲಿ ಎಲ್ಲಾರೂ ಪೂಜೆ ಮಾಡಲು ಆಗುವುದಿಲ್ಲ. ಅದಕೋಸ್ಕರ ನಿಯೋಜನೆಗೊಂಡವರು ಮಾತ್ರ ಮಾಡುತ್ತಾರೆ. ಅದಕ್ಕೆ ಒಂದು ಕ್ವಾಲಿಫಿಕೇಷನ್‌ ಇದೆ. ಅಖಂಡ ಪಾಂಡಿತ್ಯವನ್ನು ಪಡೆದು ದಲಿತರೂ ಕೂಡ ಪೂಜೆಯನ್ನು ಮಾಡಬಹುದು. ರಾಮ ಮಂದಿರದಲ್ಲಿ ಟಿಕೆಟ್‌ ವ್ಯವಸ್ಥೆ ಇರುವುದಿಲ್ಲ ಎಂದು ಪೇಜಾವರ ಶ್ರೀ(Pejawar Swamiji) ಹೇಳುತ್ತಾರೆ.

ಇದನ್ನೂ ವೀಕ್ಷಿಸಿ:  ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳ ಬಗ್ಗೆ ನೀವು ಏನ್ ಹೇಳ್ತೀರಾ? ಆರ್‌. ಅಶೋಕ್‌ ಅಡ್ಜಸ್ಟ್ಮೆಂಟ್ ರಾಜಕಾರಣಿನಾ ?