
ಮೋದಿ ಅರಬ್ ದೊರೆಯನ್ನು ಬ್ರದರ್ ಅಂದ್ರೆ ಓಕೆನಾ? ಹಿಂದೂ-ಮುಸ್ಲಿಂ ಭಾವೈಕ್ಯತೆ ಬಗ್ಗೆ ನಿಮಗೆ ಏನನಿಸುತ್ತೆ?
ಏಷ್ಯಾನೆಟ್ ಸುವರ್ಣ ನ್ಯೂಸ್ ಅವರ್ ಸ್ಪೆಷಲ್ನಲ್ಲಿ ಅನಂತ್ ಕುಮಾರ್ ಹೆಗಡೆ ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದು, ಇದರ ವಿಡಿಯೋ ಇಲ್ಲಿದೆ..
ಅನಾರೋಗ್ಯದ ಕಾರಣ ಸುಮಾರು ಎರಡು ವರ್ಷದಿಂದ ನಾನು ಎಲ್ಲೂ ಓಡಾಡಲು ಆಗಿಲ್ಲ. ಪೊಲಿಟಿಕಲ್ ಕಮ್ ಬ್ಯಾಕ್ಗೆ ನಾವು ಮುಸ್ಲಿಂ ವಿಷಯವನ್ನು ಬಳಸಿಕೊಳ್ಳುತ್ತಿಲ್ಲ. ನಾವು ಚರ್ಚೆ ಮಾಡುವ ಹಲವಾರು ವಿಷಯವನ್ನು ಮಾಧ್ಯಮದವರು ಬಳಸಿಕೊಳ್ಳುತ್ತಿಲ್ಲ ಎಂದು ಅನಂತ್ ಕುಮಾರ್ ಹೆಗಡೆ ಹೇಳಿದರು. ಈಗ ನಾವು ಅಭಿವೃದ್ಧಿಯಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳುತ್ತಿದ್ದೇವೆ. ನಮ್ಮ ಮಾತಿನಿಂದ ಪ್ರಧಾನಿ ಮೋದಿಯವರಿಗೆ ಮುಜುಗರವಾಗುತ್ತದೆ ಎಂಬುದರಲ್ಲಿ ಸತ್ಯವಿಲ್ಲ. ಮಸೀದಿಯಲ್ಲಿ ನಾವು ಶಿವಲಿಂಗ ಹುಡುಕುವುದಿಲ್ಲ. ಆದ್ರೆ ಕಂಡಾಗ ನಾವು ಕೈ ಮುಗಿಯುತ್ತೇವೆ. ಇತಿಹಾಸ ನೋಡಿದಾಗ ನಾವು ಇಷ್ಟೋಂದು ಕಳೆದುಕೊಂಡೆವಾ ಎಂದು ಹೊಟ್ಟೆ ಉರಿಯುತ್ತದೆ ಎಂದು ಅನಂತ್ ಕುಮಾರ್ ಹೆಗಡೆ ಹೇಳುತ್ತಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: ತೆರಿಗೆ ತಾರತಮ್ಯ ಹೆಸರಲ್ಲಿ ಉತ್ತರ-ದಕ್ಷಿಣ ರಾಜಕೀಯ! ಮೋದಿ v/s ರಾಹುಲ್ ಕದನದಲ್ಲಿ ಯಾರು ಯಾರ ಕಡೆ ?