Asianet Suvarna News Asianet Suvarna News

ಮೊಬೈಲ್ ನೋಡುತ್ತಾ ಕಾಡಾನೆಗೆ ಡಿಕ್ಕಿ ಹೊಡೆದ ಭೂಪ!

ಮೊಬೈಲ್ ನೋಡಿಕೊಂಡು ಕಾಡಾನೆಗೆ ಢಿಕ್ಕಿ ಹೊಡೆದ ಭೂಪ/ ಅದೃಷ್ಟವಶಾತ್ ಬದುಕುಳಿದ ವ್ಯಕ್ತಿ/  ಕೊಡಗು ಜಿಲ್ಲೆ ಚೆನ್ನಂಗೊಲ್ಲಿಯಲ್ಲಿ ಘಟನೆ/ ಬಾಳಾಜಿ ಗ್ರಾಮದ ಸುರೇಶ್ ಬಾಬು(46) ಬದುಕುಳಿದಾತ.

ಕೊಡಗು(ಏ. 28) ಈ ಮೊಬೈಲ್ ನೋಡುವುದು ದೊಡ್ಡ ಚಟ ಎನ್ನುವುದು ಗೊತ್ತಿದ್ದರೂ ನಾವೆಲ್ಲಅದಕ್ಕೆ ಅಂಟಿಕೊಂಡಿದ್ದೇವೆ. ಈ ಭೂಪ ಸಹ ಅಂತದ್ದೇ ಕೆಲಸ ಮಾಡಿಕೊಂಡು ಜಸ್ಟ್ ಮಿಸ್ ಆಗಿದ್ದಾನೆ.

ಆನೆ ಮರಿಯನ್ನು ಕಾಪಾಡಲು ಅರಣ್ಯ ಸಿಬ್ಬಂದಿ ಮಾಡಿದ ಹೊಸ ಪ್ಲಾನ್

ಮೊಬೈಲ್ ನೋಡಿಕೊಂಡು ಕಾಡಾನೆಗೆ ಢಿಕ್ಕಿ ಹೊಡೆದ ಭೂಪನೆ ಹೆಸರು  ಕೊಡಗು ಜಿಲ್ಲೆ ಚೆನ್ನಂಗೊಲ್ಲಿಯ  ಬಾಳಾಜಿ ಗ್ರಾಮದ ಸುರೇಶ್ ಬಾಬು(46). ವಾಕಿಂಗ್ ಹೋಗುವಾಗ ಬೊಬೈಲ್ ನೋಡಿಕೊಂಡು ಹೋಗುತ್ತ ಕಾಡಾನೆಗೆ ಡಿಕ್ಕಿ ಹೊಡೆದಿದ್ದಾನೆ.  ಕಾಡಾನೆ ತಕ್ಷಣ ಕಾಲಿನಿಂದ ಒದ್ದು ರಸ್ತೆಗೆ ಎಸೆದಿದೆ.  ಅದೃಷ್ಟವಶಾತ್ ವ್ಯಕ್ತಿ ಬದುಕಿದ್ದಾನೆ.  ಗೋಣಿಕೊಪ್ಪ-ಮೈಸೂರು ಹೆದ್ದಾರಿಯಲ್ಲಿ ಘಟನೆ ನಡೆದಿದೆ. 

Video Top Stories