'ಸರಳತೆಯ ಸಂತ' ಸದಾ ಜೀವಂತ: 'ಸಿದ್ದೇಶ್ವರ ಸ್ವಾಮೀಜಿ' ಇಚ್ಛೆಯಂತೆ ವಿಧಿವಿಧಾನ

ಸರಳತೆಯ ಸಂತ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾಗಿದ್ದು, ಆದರೆ ಅವರು ಲಕ್ಷಾಂತರ ಭಕ್ತರ ಹೃದಯದಲ್ಲಿ ಸದಾ ಶಾಶ್ವತವಾಗಿ ನೆಲೆಸಿರುತ್ತಾರೆ.
 

Share this Video
  • FB
  • Linkdin
  • Whatsapp

ನಡೆದಾಡುವ ಸಂತ ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅಂತ್ಯಕ್ರಿಯೆ ನಡೆದಿದೆ. ಶ್ರೀಗಳ ಅಪ್ಪಣೆಯಂತೆಯೇ, ಅಂತಿಮ ವಿಧಿವಿಧಾನ ಸಾಗುತ್ತಿದೆ. ಗೋಕರ್ಣದ ಸಾಗರ ಹಾಗೂ ಕೂಡಲ ಸಂಗಮದಲ್ಲಿ ನಡೆದಾಡುವ ದೇವರ ಚಿತಾಭಸ್ಮ ವಿಲೀನವಾಗಲಿದೆ. ಇವತ್ತು ರಾಜ್ಯದ ಮನೆಮನೆಯೂ ಕೂಡ ಸಿದ್ದೇಶ್ವರ ಸ್ವಾಮಿಗಳ ಸರಳತೆಗೆ, ಘನತೆಗೆ ಮಾರುಹೋಗಿವೆ. ಸ್ವಾಮೀಜಿಯ ನೆನದು ಲಕ್ಷಾಂತರ ಭಕ್ತರು ಕಣ್ಣೀರಿಟ್ಟಿದ್ದಾರೆ. ಎಲ್ಲಾ ರೈತರಿಗೂ ಸ್ವಾಮೀಜಿಅತಿ ದೊಡ್ಡ ಸಂದೇಶ ನೀಡಿದ್ದರು. ಅಪ್ಪೋರ ಬೋಧನೆ ಕೇಳಿ ಬದುಕಿದವರು ಈಗ ಏನಂತಾರೆ..? ಅದೆಲ್ಲದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

ಲವ್ ಜಿಹಾದ್ ವಿರುದ್ಧ VHP ಸಮರ: 20 ಜನರ ಟೀಂ ರಚನೆ

Related Video