Asianet Suvarna News Asianet Suvarna News

ಬರದ ನಡುವೆ ನಿಲ್ಲದ ಶಾಸಕರ ವಿದೇಶ ಪ್ರವಾಸ: ಗೆದ್ದ 5 ತಿಂಗಳಲ್ಲಿ 3ನೇ ಬಾರಿ ವಿದೇಶಕ್ಕೆ ದರ್ಶನ್ ಪುಟ್ಟಣ್ಣಯ್ಯ

ಒಮ್ಮೆ ವಿದೇಶಕ್ಕೆ ಹೋದರೆ ತಿಂಗಳುಗಟ್ಟಲೆ ಕ್ಷೇತ್ರಕ್ಕೆ ಬರಲ್ಲ
ಇಲ್ಲೇ ಇದ್ದು ಜನರ ಸಮಸ್ಯೆಗೆ ಸ್ಪಂದಿಸಲಿ ಎಂದು ಗೆಲ್ಲಿಸಿದ್ದೇವೆ
ವೈಯಕ್ತಿಕ ಕಾರಣ ನೀಡಿ ಪದೇ ಪದೇ ವಿದೇಶಕ್ಕೆ ಹೋಗ್ತಿದ್ದಾರೆ
ಆಕ್ರೋಶವನ್ನು ವ್ಯಕ್ತಪಡಿಸಿದ ಮೇಲುಕೋಟೆ ಕ್ಷೇತ್ರದ ಜನರು

ಬರ ಇದ್ದರೂ ಶಾಸಕರ ವಿದೇಶ ಪ್ರವಾಸ ಮಾತ್ರ ನಿಂತಿಲ್ಲ. ಗೆದ್ದ 5 ತಿಂಗಳಲ್ಲಿ ಮೂರನೇ ಬಾರಿಗೆ ವಿದೇಶ ಪ್ರವಾಸಕ್ಕೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ(MLA Darshan Puttannaiah) ಹೋಗಿದ್ದಾರೆ. ಇವರು ಮೇಲುಕೋಟೆ(Melukote) ಶಾಸಕರಾಗಿದ್ದು, ಇವರ ನಡೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಚುನಾವಣೆ ವೇಳೆ ಕ್ಷೇತ್ರದಲ್ಲೇ ಇರುವುದಾಗಿ ಭರವಸೆಯನ್ನು ದರ್ಶನ್ ಪುಟ್ಟಣ್ಣಯ್ಯ ನೀಡಿದ್ದರು. ಅಲ್ಲದೇ ಅಮೆರಿಕಾದಲ್ಲಿನ(America) ತನ್ನ ಕಂಪನಿ ಮಾರಿ ಹುಟ್ಟೂರಲ್ಲೇ ಇರುವುದಾಗಿ ಭರವಸೆ ನೀಡಿದ್ದರು. ಆದರೆ ಗೆದ್ದ ಕೆಲವೇ ದಿನಗಳಲ್ಲಿ ಅಮೆರಿಕಾಕ್ಕೆ ದರ್ಶನ್ ಪುಟ್ಟಣ್ಣಯ್ಯ ತೆರಳಿದ್ದಾರೆ. ಆಗ ವಾಪಸ್‌ ಬಂದ ಬಳಿಕ ಕ್ಷೇತ್ರದ ಜನರ ಬಳಿ ಕ್ಷಮೆಯಾಚಿಸಿ, ಮತ್ತೆ ವಿದೇಶಕ್ಕೆ ಹೋಗಲ್ಲ ಎಂದಿದ್ದರು. ಕಳೆದ ಆಗಸ್ಟ್‌ನಲ್ಲೂ ವಿದೇಶಕ್ಕೆ ತೆರಳಿ ಸ್ವತಂತ್ರ ದಿನಾಚರಣೆಗೆ ಗೈರಾಗಿದ್ದರು. ಶಾಸಕರ ಅನುಪಸ್ಥಿತಿಯಲ್ಲಿ ಸ್ವತಂತ್ರ ದಿನಾಚರಣೆ ನಡೆದಿತ್ತು. ಈಗ ಮತ್ತೆ ಒಂದು ವಾರದ ಹಿಂದೆ ಅಮೆರಿಕಾಕ್ಕೆ ದರ್ಶನ್ಹೋಗಿದ್ದಾರೆ. ಕನ್ನಡ ರಾಜ್ಯೋತ್ಸವಕ್ಕೂ ಶಾಸಕ ದರ್ಶನ್ ಪುಟ್ಟಣ್ಣಯ್ಯ ಗೈರಾಗಿದ್ದಾರೆ. ಕಾವೇರಿ ಸಮಸ್ಯೆ, ಬರ, ಕರೆಂಟ್ ಹೀಗೆ ಸಾಲು ಸಾಲು ಸಮಸ್ಯೆ ಇದ್ದರೂ,ಅವರ ಈ ನಡೆಗೆ ಕ್ಷೇತ್ರದ ಜನರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಬಿಜೆಪಿ ಅಧಿಕಾರದಲ್ಲಿ ಮುಸ್ಲಿಮರು ಸಂಕಷ್ಟಕ್ಕೆ ಸಿಲುಕಿದ್ರು: ಜಮೀರ್ ಅಹಮ್ಮದ್ ಖಾನ್

Video Top Stories