Asianet Suvarna News Asianet Suvarna News

ಮೈಸೂರಿನಲ್ಲಿ ಚಿನ್ನ-ಬೆಳ್ಳಿ ತಯಾರಕರ ನಡುವೆ ಗಲಾಟೆ: ಮೂವರಿಗೆ ಗಾಯ

ಚಿನ್ನ ಹಾಗೂ ಬೆಳ್ಳಿ ತಯಾರಕರ ನಡುವೆ ಮಾರಾಮಾರಿ ನಡೆದಿದ್ದು, ಅಂಗಡಿಗೆ ನುಗ್ಗಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.
 

ಮೈಸೂರಿನ ಇರ್ವಿನ್‌ ರಸ್ತೆ ಮುಂದೆ ಚಿನ್ನ ಹಾಗೂ ಬೆಳ್ಳಿ ತಯಾರಕರ ನಡುವೆ ಗಲಾಟೆ ನಡೆದಿದ್ದು, ಮೂವರಿಗೆ ಗಾಯಗಳಾದ ಘಟನೆ ನಡೆದಿದೆ. ಕಡಿಮೆ ವೇಸ್ಟೇಜ್‌'ನಲ್ಲಿ ಆಭರಣ ತಯಾರಿಸುತ್ತೇವೆಂದು ಆಫರ್ ನೀಡಿದ್ದ ನೂತನ್ ಹಾಗೂ ಕುಟುಂಬಸ್ಥರ ಮೇಲೆ ಅಕ್ಕಸಾಲಿಗರು ಹಲ್ಲೆ ಮಾಡಿದ್ದಾರೆ. ಅಂಗಡಿಗೆ ನುಗ್ಗಿ ಹಲ್ಲೆ ಮಾಡಿದ್ದು, ಆಭರಣ ತಯಾರಕರು ಗುಂಪು ಕಟ್ಟಿಕೊಂಡು ಬಂದು ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.

Video Top Stories