
BIG 3: ತುಕ್ಕು ಹಿಡಿಯುತ್ತಿರುವ ಕೃಷಿ ಯಂತ್ರಗಳು: ಹಳ್ಳ ಹಿಡಿದ ಕೃಷಿ ಯಂತ್ರಧಾರೆ ಯೋಜನೆ
Krishi Yantra Dhare: ರೈತರಿಗೆ ಉಪಯೋಗ ಆಗಬೇಕಿದ್ದ ಕೋಟ್ಯಂತರ ರೂಪಾಯಿ ಯಂತ್ರಗಳು ಪಾಳು ಬಿದ್ದು ಹೋಗಿವೆ
ಮಂಡ್ಯ (ಆ. 16): ಧೂಳು ತುಂಬಿರುವ ಟ್ರ್ಯಾಕ್ಟರ್ಗಳು, ಮತ್ತೊಂದೆಡ ತುಕ್ಕು ಹಿಡಿಯುತ್ತಿರವ ಕೃಷಿ ಯಂತ್ರಗಳು, ಹೀಗೆ ಎಲ್ಲಿ ಬೇಕೋ ಅಲ್ಲಿ ಕೃಷಿ ಯಂತ್ರಗಳು ಬಿದ್ದು ತುಕ್ಕು ಹಿಡಿಯುತ್ತಿವೆ. ಈ ದೃಶ್ಯಗಳು ಕಂಡುಬಂದಿದ್ದು ಮಂಡ್ಯ (Mandya) ಜಿಲ್ಲೆಯ ಕೃಷಿ ಉಪಕರಣಗಳ ಬಾಡಿಗೆ ಸೇವಾ ಕೇಂದ್ರದಲ್ಲಿ. ರೈತರಿಗೆ ಉಪಯೋಗ ಆಗಬೇಕಿದ್ದ ಕೋಟ್ಯಂತರ ರೂಪಾಯಿ ಯಂತ್ರಗಳು ಈಗ ಪಾಳು ಬಿದ್ದು ಹೋಗಿವೆ. ಕೃಷಿ ಅಧಿಕಾರಿಗಳು ಹಾಗೂ ಖಾಸಗಿ ಏಜೇನ್ಸಿಗಳ ಅಸಮರ್ಪಕ ನಿರ್ವಹಣೆಯಿಂದಾಗಿ ಕೃಷಿ ಯಂತ್ರಧಾರೆ ಯೋಜನೆ (Krishi Yantra Dhare) ತುಕ್ಕು ಹಿಡಿದಿದೆ.
ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಕೃಷಿ ಚಟುವಟಿಕೆಗೆ ಅತ್ಯಾಧುನಿಕ ಯಂತ್ರಗಳನ್ನು ಖರೀದಿಸಲು ಸಾಧ್ಯವಿಲ್ಲ. ಹೀಗಾಗಿ ಕಡಿಮೆ ದರದಲ್ಲಿ ಯಂತ್ರೋಪಕರಣಗಳನ್ನು ರೈತರಿಗೆ ಬಾಡಿಗೆ ನೀಡುವ ಉದ್ದೇಶದಿಂದ ಸರ್ಕಾರ 2014ರಲ್ಲೇ ಕೃಷಿ ಯಂತ್ರಧಾರೆ ಎಂಬ ಮಹತ್ವಾಕಾಂಕ್ಷೆಯ ಯೋಜನೆ ಆರಂಭಿಸಿತ್ತು. ಮಂಡ್ಯ ಜಿಲ್ಲೆಯಲ್ಲಿ 31 ಕಡೆ ಕೃಷಿ ಯಂತ್ರಧಾರೆ ಕೇಂದ್ರ ಆರಂಭಗೊಂಡಿದ್ದವು. ಆದರೆ 31 ಕೇಂದ್ರಗಳಲ್ಲಿ 12 ಕೇಂದ್ರಗಳು ಎರಡು ವರ್ಷಗಳ ಹಿಂದೆಯೇ ಮುಚ್ಚಿ ಹೋಗಿವೆ. ಅಲ್ಲಿರುವ ಕೃಷಿ ಉಪಕರಣಗಳು ತುಕ್ಕು ಹಿಡಿದು ಉಪಯೋಗಕ್ಕೆ ಬಾರದಂತಾಗಿವೆ. ಈ ಬಗ್ಗೆ ಜನಪ್ರತಿನಿಧಿಗಳು ಅಧಿಕಾರಿಗಳು ಗಮನಹರಿಸಬೇಕಿದೆ.
BIG 3: ಕೆಸರುಗದ್ದೆಯಾಗಿರುವ ಸ್ಟೇಡಿಯಂ, ಅಧಿಕಾರಿಗಳಿಂದ ಶೀಘ್ರ ಕ್ರಮದ ಭರವಸೆ