ಸ್ಮೋಕ್ ಬಾಂಬ್ ಹಿಂದಿನ ಮಾಸ್ಟರ್ ಮೈಂಡ್ ಯಾರು..? ಆರು ಆರೋಪಿಗಳ ವಿರುದ್ಧ UAPA ಕಾಯ್ದೆಯಡಿ ಕೇಸ್!

ಕೇಂದ್ರ ಸರ್ಕಾರದ ವಿರುದ್ಧ ಸಿಟ್ಟಿನಿಂದ ಹೀಗೆ ಮಾಡಿದ್ರಾ..?
ಹತ್ಯೆ ಉದ್ದೇಶಕ್ಕೆ ಬಂದಿದ್ರಾ..? ಎಚ್ಚರಿಕೆ ಕೊಡಲು ಬಂದ್ರಾ?
ಐದು ರಾಜ್ಯ..ಒಂದೇ ಟಾರ್ಗೆಟ್, ಗುರುಗ್ರಾಮ್‌ನಲ್ಲಿ ಸ್ಕೆಚ್

Share this Video
  • FB
  • Linkdin
  • Whatsapp

ಸಂಸತ್‌ಲ್ಲಿ ಭದ್ರತಾ ವೈಫಲ್ಯವಾಗಿದ್ದು, ಇದರಿಂದ ಇಡೀ ದೇಶವೇ ಆಘಾತಕ್ಕೆ ಒಳಗಾಗಿದೆ. ಲೋಕಸಭೆಯ(Loksabha) ಸ್ಮೋಕ್ ಬಾಂಬ್‌ಗೆ ಭಾರತ ಬೆಚ್ಚಿ ಬಿದ್ದಿದ್ದು, 6 ಆರೋಪಿಗಳ ಪೈಕಿ ಈವರೆಗೂ ಐವರನ್ನು ಪೊಲೀಸರು(police)ಬಂಧಿಸಿದ್ದಾರೆ. ಆರು ಆರೋಪಿಗಳ ವಿರುದ್ಧ UAPA ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ. ಅಲ್ಲದೇ ಈ ದುಷ್ಕೃತ್ಯದ ಹಿಂದೆ ಉಗ್ರ ಸಂಘಟನೆ ಕೈವಾಡ ಇದೆಯಾ ಎಂಬ ಅನುಮಾನ ಸಹ ಮೂಡಿದೆ. ಇಲ್ಲವೇ ಕೇಂದ್ರ ಸರ್ಕಾರದ ವಿರುದ್ಧ ಸಿಟ್ಟಿನಿಂದ ಹೀಗೆ ಮಾಡಿದ್ರಾ ಎಂಬ ಪ್ರಶ್ನೆ ಕಾಡುತ್ತಿದೆ. ಇವರು ಹತ್ಯೆ ಮಾಡುವ ಉದ್ದೇಶಕ್ಕೆ ಬಂದಿದ್ರಾ ? ಅಥವಾ ಎಚ್ಚರಿಕೆ ಕೊಡಲು ಬಂದ್ರಾ ? ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಇನ್ನೂ ಮೈಸೂರಿನಲ್ಲಿ(Mysore) ಕೇಂದ್ರ, ರಾಜ್ಯ ಗುಪ್ತಚರ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಮೈಸೂರಿನ ಮನೋರಂಜನ್ ಮನೆಯಲ್ಲಿ ಅಧಿಕಾರಿಗಳ ತಲಾಶ್ ನಡೆಸಿದ್ದಾರೆ. ಮನೋರಂಜನ್ ಕುಟುಂಬಸ್ಥರಿಂದ ಮಾಹಿತಿ ಪಡೆದ ಪೊಲೀಸರು.

Add Asianetnews Kannada as a Preferred SourcegooglePreferred

ಇದನ್ನೂ ವೀಕ್ಷಿಸಿ:  ಬಾಲಿವುಡ್‌ನಲ್ಲಿದ್ದಾರೆ ಶ್ರೀಮಂತ ಹಾಟ್ ಹೀರೋಯಿನ್ಸ್ ! ಯಾವ ನಟಿ ಎಷ್ಟು ನೆಟ್ ವರ್ತ್ ಹೊಂದಿದ್ದಾರೆ ಗೊತ್ತಾ ?

Related Video